ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ಗೆ 282.24 ಕೋಟಿ ನಿವ್ವಳ ಲಾಭ — ಅಧ್ಯಕ್ಷ ರವಿ ಹುಚನೂರ
ಹುನಗುಂದ ಆಗಷ್ಟ.27

ಬ್ಯಾಂಕ್ನ ಠೇವಣಿದಾರ ಮತ್ತು ಗ್ರಾಹಕರ ಸಹಕಾರ ಹಾಗೂ ಸಿಬ್ಬಂದಿಗಳ ನಿರಂತರ ಪರಿಶ್ರಮದಿಂದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ಗೆ 2೦22-23ನೇ ಹಣಕಾಸು ವರ್ಷದಲ್ಲಿ ರೂ.282.24 ಕೋಟಿ ನಿವ್ವಳ ಲಾಭ ಬಂದಿದೆ ಎಂದು ಬ್ಯಾಂಕ್ ಅಧ್ಯಕ್ಷ ರವಿ ಎಂ.ಹುಚನೂರ ಹೇಳಿದರು.ಶನಿವಾರ ಪಟ್ಟಣದ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀ ವಿಜಯಮಹಾಂತೇಶ ಸಹಕಾರಿ ಬ್ಯಾಂಕಿನ 62 ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಸಾಲ ಪಡೆದುಕೊಂಡು ಗ್ರಾಹಕರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೇ ಬ್ಯಾಂಕ್ ಬೆಳವಣೆಗೆ ಸಹಾಯವಾಗಲಿದೆ.ನಿಮ್ಮೆಲ್ಲರ ಸಹಕಾರದಿಂದ ಹುನಗುಂದ ಮುಖ್ಯ ಕಚೇರಿ ಸೇರಿ 12 ಶಾಖೆಗಳನ್ನು ಹೊಂದಿದ್ದು.127 ಜನ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.33.೦89 ಸದಸ್ಯರನ್ನು ಹೊಂದಿದೆ.182೦.೦9 ಶೇರು ಬಂಡವಾಳು,
56.47೦.85. ಒಟ್ಟು ಠೇವುಗಳು, 61.815.69 ದುಡಿಯುವ ಬಂಡವಾಳ, 4೦.998.೦1 ಸಾಲ ಮತ್ತು ಮುಂಗಡಗಳು ಹೊಂದಿದ್ದು ಪ್ರಸಕ್ತ ವರ್ಷದಲ್ಲಿ ರೂ.282.೨24 ಲಕ್ಷ ನಿವ್ವಳ ಲಾಭದಲ್ಲಿ ಬ್ಯಾಂಕ್ ಮುನ್ನಡೆಯುತ್ತಿದೆ.ಬ್ಯಾಂಕಿನ ಗ್ರಾಹಕರಿಗೆ ನಿರ್ದಿಷ್ಟ ಮತ್ತು ಉತ್ತಮ ಸೇವೆಯನ್ನು ನೀಡಲು ಎಲ್ಲ ಶಾಖೆಗಳಿಗೆ ಕೋರ್ ಬ್ಯಾಂಕಿಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಆಲದಿ ಮಾತನಾಡಿ ಬ್ಯಾಂಕಿನ ವಸೂಲಿಯಾದ ಶೇರು ಬಂಡವಾಳ18.2೦ ಕೋಟಿ,ಕಾಯ್ದಿಟ್ಟ ಮತ್ತು ಇತರೆ ನಿಧಿ 27.83 ಕೋಟಿ,ಠೇವು ಮತ್ತು ಇತರೆ ಖಾತೆಯಿಂದ ಬಂದ ಹಣ 564.7೦ ಕೋಟಿ,ವಸೂಲಿಯಿಂದ ಬಂದ ಹಣ 5೦೦೦ ರೂ,ಠೇವುಗಳಿಗೆ ಕೊಡುವ ಬಡ್ಡಿ ೨.೫೬ ಕೋಟಿ ಇತರೆ ಜವಾಬ್ದಾರಿಗಳಿಗೆ 2.೦2 ಕೋಟಿ ಹಣದಿಂದ ಸಧ್ಯ ಬ್ಯಾಂಕ್ 282.24 ಕೋಟಿ ನಿವ್ವಳ ಲಾಭದಲ್ಲಿದೆ ಎಂದರು.ಬ್ಯಾಂಕಿನ ಲಾಭಾಂಶದಲ್ಲಿ ನೀಡುವ ಮರಣೋತ್ತರ ನಿಧಿಯನ್ನು ಸಕಾಲಕ್ಕೆ ಗ್ರಾಹಕರ ಕುಟುಂಬಕ್ಕೆ ತಲುಪಿಸಿದರೇ ಬಡ ಕುಟುಂಬ ಅಂತ್ಯ ಸಂಸ್ಕಾರಕ್ಕೆ ಬಳಕೆಯಾಗುತ್ತೇ ಎಂದು ಗ್ರಾಹಕರೊಬ್ಬರು ಕೇಳಿದಾಗ ವಿ,ಮ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಶಶಿಕಾಂತ ಪಾಟೀಲ ಉತ್ತರಿಸಿ ಇಡೀ ಬೆಳಗಾವಿ ವಿಭಾಗದಲ್ಲಿಯೇ ಮರಣೋತ್ತರ ನಿಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಾ ಬಂದಿದ್ದೇವೆ ಎಂದರು.
ಸಿ.ಸಿ ಲೋನ್ ಮೇಲಿನ ಬಡ್ಡಿ ಕಡಿಮೆ ಮಾಡಬೇಕೆಂದು ಗ್ರಾಹಕರ ಕೇಳಿದ್ದಕ್ಕೆ ನಿರ್ದೇಶಕ ಮಹಾಂತೇಶ ಅವಾರಿ ಉತ್ತರಿಸಿ ಠೇವಣೆದಾರರ ಹಣದ ಬಡ್ಡಿ ದರ ಕಡಿಮೆಯಾದಾಗ ಅದನ್ನು ಕಡಿಮೆ ಮಾಡಲಾಗುವುದು ಎಂದರು.ಇನ್ನು ಸಾಲ ಮರುಪಾವತಿಯ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾಹಿತಿ ಇಲ್ಲದೇ ಇರೋದರಿಂದ ಗ್ರಾಹಕರ ಮೇಲೆ ಹೆಚ್ಚಿನ ಬಡ್ಡಿ ಹೊರೆಯಾಗುತ್ತಿದ್ದು ಅದನ್ನು ಸರಿಪಡಿಸುವಂತೆ ಗ್ರಾಹಕ ಪ್ರಶ್ನೆಗೆ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ ಹೇಳಿದರು.ಬ್ಯಾಂಕಿನ ಉಪಾಧ್ಯಕ್ಷ ದೇವು ಡಂಬಳ,ನಿರ್ದೇಶಕರಾದ,ಬಸವರಾಜ ನಾಡಗೌಡ,ನೀಲಪ್ಪ ತಫೇಲಿ,ಮಲ್ಲಪ್ಪ ವೀರಾಪೂರ,ಮಹಾಂತೇಶ ಅವಾರಿ,ಶಶಿಕಾಂತ ಪಾಟೀಲ,ಸಂಗಣ್ಣ ಕಡಪಟ್ಟಿ,ರಾಜಕುಮಾರ ಬಾದವಾಡಗಿ,ಸಂಗಣ್ಣ ಕಡಪಟ್ಟಿ,ಬಸವರಾಜ ಗದ್ದಿ,ಬಿ.ವಿ. ಪಾಟೀಲ,ಶಿವಾನಂದ ಕಂಠಿ,ತಿರುಪತಿ ಕುಷ್ಟಗಿ,ಸೋಮಶೇಖರ ಬಲಕುಂದಿ,ಮAಜುನಾಥ ಆಲೂರ,ಅನ್ನಪೂರ್ಣ ಹೊಸೂರ, ಲಕ್ಷ್ಮೀ ಬಾಯಿ ಮುಕ್ಕಣ್ಣವರ,ಎಸ್.ಎಸ್.ಗಂಜಿಹಾಳ,ಸುಜಾತಾ ನಾಗರಾಳ,ಸುರೇಶ ಚಿತ್ತರಗಿ,ಆಯ್.ವಿ.ಬಸರಕೋಡ.ಶೈಲಜಾ ದೇಸಾಯಿ,ವಿನಯ ಕುಲಕರ್ಣಿ ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ ಪಾಟೀಲ,ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ