ಭಾರತ ಕಮ್ಯುನಿಸ್ಟ್ ಪಕ್ಷ ಲಿಬರೇಶನ್ ಸಂಘಟನೆಯು ಕೆ ಐನಹಳ್ಳಿ ಗ್ರಾಮ ಘಟಕಕ್ಕೆ ಅಧ್ಯಕ್ಷ ಎಮ್.ಯು.ಕರಿಬಸಯ್ಯ ಸ್ವಾಮಿ ಆಯ್ಕೆ.

ಕೆ ಐನಹಳ್ಳಿ ಆಗಷ್ಟ.27

ಕೊಟ್ಟೂರು ತಾಲೂಕು ಕೆ ಐನಹಳ್ಳಿ ಗ್ರಾಮ ಘಟಕ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಭಾನುವಾರದಂದು  ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ-ಲೆನಿನ್‌ವಾದಿ) ಲಿಬರೇಷನ್ ಸಂಘಟನೆಯು ಮಾಡಲಾಯಿತು .ತಾಲೂಕು ಕಾರ್ಯದರ್ಶಿ ಗುಡಿಯರ್ ಮಲ್ಲಿಕಾರ್ಜುನ ಮಾತನಾಡಿ ತಾಲೂಕಿನಾದ್ಯಂತ ಪ್ರತಿಗ್ರಾಮಕ್ಕೂ ಹೋಬಳಿಗೂ ಅಧ್ಯಕ್ಷರು ಸದಸ್ಯರುಗಳನ್ನು ನೇಮಿಸಿ,  ಹೆಚ್ಚಿನ ಮಟ್ಟದಲ್ಲಿ  ಸಂಘಟನೆಯನ್ನು ಪ್ರಬಲಗೊಳಿಸುವುದು ನನ್ನ  ಉದ್ದೇಶ ಎಂದು ಹೇಳಿದರು.ಕೊಟ್ಟೂರು ತಾಲೂಕು ಕೆ ಐಯನಳ್ಳಿ ಘಟಕಕ್ಕೆ ಅಧ್ಯಕ್ಷರನ್ನಾಗಿ ಎಂ ಯು ಕರಿಬಸಯ್ಯಸ್ವಾಮಿ, ಉಪಾಧ್ಯಕ್ಷ ಉಜ್ಜಿನಿ ರೇವಣ್ಣ, ಕಾರ್ಯದರ್ಶಿ ಹೆಚ್ ಪರಸಪ್ಪ,ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಾಮ್ರೆಡ್ ರಾಜ್ಯ ಕಮಿಟಿ ಸದಸ್ಯ ಅಜ್ಜಪ್ಪ, ,  ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ, ,ಹಿರಿಯ ಕಾಮ್ರೆಡ್ ಗಳಾದ ತಾಲೂಕು ಸದಸ್ಯ ಎಂ ಬಿ ಹಾಲಯ್ಯ ಸ್ವಾಮಿ ಪರಸಪ್ಪ, ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button