ವಾತ್ಸಲ್ಯದ ರಕ್ಷಾ ಬಂಧನ…

ನೂಲ ಹುಣ್ಣಿಮೆಯ ಪವಿತ್ರ ವಿಶೇಷ ದಿನ

ಸಹೋದರರು ನೆನಪಿಗೆ ಬರುತಾರ ಈ ಸುದಿನ

ಸಹೋದರಿಯರ ಖುಷಿಗೆ ಮಿತಿಯೇ ಇಲ್ಲ ಈ

ದಿನ

ಮನದ ಭಾವನೆಗೆ ಜೀವ ತುಂಬುವ ರಕ್ಷಾ

ಬಂಧನ..

ಕಟ್ಟುವ ರಾಖಿ ಚಿನ್ನದ್ದಾದರೇನು

ಬೆಳ್ಳಿಯದ್ದಾದರೇನು

ಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ

ಹೆಚ್ಚಲ್ಲವೇನು

ತವರಿಗೆ ಓಡಿ ಬರುವ ಸಹೋದರಿಯ ಕಂಡೆನು

ಅವಳ ಕರುಣೆ ಮಮತೆ ಕಾಳಜಿಗೆ

ಮೌನಿಯಾದೆನು..

ರಾಖಿಯ ಕಟ್ಟುವ ಆ ಸುಮದುರ ಘಳಿಗೆಯಲಿ

ತಾಯಿಯ ಕಂಡೆನೂ ಸಹೋದರಿಯ

ಮುಖದಲಿ

ಸಂಬಂಧದ ಜವಾಬ್ದಾರಿ ಹೆಚ್ಚಿಸಿದಳು ನನ್ನಲಿ

ಕಾಲಮುಗಿದು ಋಣಮುಟ್ಟಿಸುವೆನೆಂದು

ಬೇಡಿದೆನು ಅವಳಲಿ..

ಸಹೋದರನ ಎರಡನೆಯ ತಾಯಿ ಸಹೋದರಿ

ಸಹೋದರಿಗೆ ದೇವರ ಸಮಾನ ಸಹೋದರ

ಭೂಲೋಕದ ಪವಿತ್ರ ಸಂಬಂಧ

ಸಹೋದರಿ-ಸಹೋದರ

ಸೂರ್ಯ ಚಂದ್ರರಂತೆ ಈ ಸಂಬಂಧಗಳು

ಅಜರಾಮರ..

ಹಣೆಗೆ ಕುಂಕುಮವಿಟ್ಟು ನನಗೆ ಕಾವಲಿರು

ಎಂದಳು

ರಾಖಿಯ ಕಟ್ಟಿ ನೀ ನನಗೆ ಶ್ರೀರಕ್ಷೆ ಎಂದಳು

ತಬ್ಬಿಕೊಂಡು ನನ್ನನ್ನು ತಬ್ಬಲಿ ಮಾಡಬೇಡ

ಎಂದಳು

ಸಿಹಿಯ ತಿನಿಸಿ ನಿನ್ನ ಬಾಳು ಸಿಹಿಯಾಗಿರಲಿ

ಎಂದಳು

ಶ್ರೀ ಮುತ್ತು.ಯ.ವಡ್ಡರ

(ಶಿಕ್ಷಕರು)

ಬಾಗಲಕೋಟ

MOB-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button