ಹೆಣ್ಣು ಸಮಾಜದ ಕಣ್ಣು.
![](https://i0.wp.com/sknewskannada.in/wp-content/uploads/2023/09/IMG-20230901-WA0014.jpg?resize=409%2C556&ssl=1)
ಪ್ರತಿ ಮನೆಯ ಮನಸಿನ ನಂದಾದೀಪ ಹೆಣ್ಣು
ನೆನಪಿರಲಿ ಅವಳೊಂದು ಸಮಾಜದ ಕಣ್ಣು
ಯಾರೆಂದರೂ ಮೂರ್ಖರು ಅವಳೊಂದು
ಹುಣ್ಣು
ಹೆಣ್ಣು ಮರೆತರೆ ಸೇರಬೇಕಾಗುವುದು ಮಣ್ಣು
ಸಿಗಬೇಕಾಗಿದೆ ಸ್ವಾತಂತ್ರ್ಯ ಪ್ರತಿಯೊಬ್ಬ ಹೆಣ್ಣಿಗೆ
ಎಷ್ಟು ಕೆಲಸ ಮಾಡಿದರು ಇಲ್ಲ ನೆಮ್ಮದಿ
ಮನಸ್ಸಿಗೆ
ನಿಷ್ಕಲ್ಮಶವಾದ ಪ್ರೀತಿ ಇದೆ ಅವಳ
ಹೃದಯದೊಳಗೆ
ಗುಡಿಯ ಕಟ್ಟಿ ಪೂಜಿಸಬೇಕು ಅವಳ ತ್ಯಾಗದ
ಮಹಿಮೆಗೆ
ಮಹಿಳಾ ಸಮಾನತೆ ಕೇವಲ
ಭಾಷಣಕ್ಕಾಗದಿರಲಿ
ಮಹಿಳೆ ಅಬಲೆ ಅಲ್ಲ ಸಬಲೇ ಗೊತ್ತಿರಲಿ
ಹೆಣ್ಣಿರದೆ ಗಂಡು ಶೂನ್ಯ ಎಂಬುದು ತಿಳಿದಿರಲಿ
ಹೆಣ್ಮಕ್ಕಳ ಮನಸ್ಸಿಗೆ ನೋವಾಗದಂತೆ ಬದುಕು
ಸಾಗಲಿ
ಕರುಣೆಗೆ ಮಮತೆಗೆ ತಾಯಿಯಾಗಿ ಹೆಣ್ಣು
ಪ್ರೀತಿಗೆ ಬಾಳಿಗೆ ಮಡದಿಯಾಗಿ ಹೆಣ್ಣು
ಬಾಂಧವ್ಯಕ್ಕೆ ಋಣಾನುಬಂದಕ್ಕೆ ಮಗಳಾಗಿ
ಹೆಣ್ಣು
ಪವಿತ್ರ ಹಬ್ಬ ರಕ್ಷಾಬಂಧನಕ್ಕೆ ಸಹೋದರಿಯಾಗಿ
ಹೆಣ್ಣು
ಬದುಕಲು ಬಿಡಿ ಅವಳ ಪಾಡಿಗೆ ಅವಳನ್ನು
ಅವಳಿಗೂ ಒಂದು ಕ್ಷಣ ನೀಡಿ ಸ್ವಾತಂತ್ರ್ಯವನ್ನು
ಬೆಳೆಯಲಿ ಅವಳು ಎಲ್ಲಾ ಕ್ಷೇತ್ರಗಳಲ್ಲಿ ಇನ್ನು
ಕೈ ಮುಗಿದು ನಮಸ್ಕರಿಸಿ ಹೆಣ್ಣು ಜಗದ ಕಣ್ಣು
ಶ್ರೀ ಮುತ್ತು.ಯ.ವಡ್ಡರ
( ಶಿಕ್ಷಕರು)
ಬಾಗಲಕೋಟ
Mob-9845568484