ಶ್ರೀ ಗುರು ರಾಚೋಟೆಶ್ವರ ಪೂರ್ವ/ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ.
ಇಂಡಿ ಸಪ್ಟೆಂಬರ್.1
![](https://i0.wp.com/sknewskannada.in/wp-content/uploads/2023/09/IMG-20230901-WA0034.jpg?resize=422%2C563&ssl=1)
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಶ್ರೀ ಗುರು ರಾಚೋಟೆಶ್ವರ ಪೂರ್ವ/ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೂಲ ಹುಣ್ಣಿಮೆಯ ಪ್ರಯುಕ್ತ ಸಂಭ್ರಮದ ರಕ್ಷಾ ಬಂಧನವನ್ನು ಆಚರಿಸಲಾಯಿತು.ಶಾಲೆಯ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕಿಯರು ಶಿಕ್ಷಕರಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ಹಂಚಿ ಸಂಭ್ರಮಿಸಿದರು.
![](https://i0.wp.com/sknewskannada.in/wp-content/uploads/2023/09/IMG-20230901-WA0035.jpg?resize=424%2C318&ssl=1)
ಅದೇ ಸಂದರ್ಭದಲ್ಲಿ ರೂಗಿ ಶಿಕ್ಷಕರು ಮಾತನಾಡಿ ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವದೇ ರಕ್ಷಾ ಬಂಧನವಾಗಿದೆ ಅಣ್ಣ-ತಂಗಿಯ ನಡುವಿನ ಬಾಂಧವ್ಯ ಸಾರುವ ಪ್ರೀತಿ ಭ್ರಾತೃತ್ವದ ಸಂಭ್ರಮವೇ ರಕ್ಷಾ ಬಂಧನ ಎಂದು ಹೇಳಿದರು.ನಂತರ ಮುಖ್ಯಗುರುಗಳಾದ ಬದಾಮಿ ಅವರು ಮಾತನಾಡಿ ಅಣ್ಣ-ತಂಗಿಯ ಪ್ರೀತಿ ಭ್ರಾತೃತ್ವದ ಸಂಭ್ರಮವೇ ರಕ್ಷಾ ಬಂಧನ ಸಹೋದರತ್ವ ಮತ್ತು ರಕ್ಷೆಯನ್ನು ನೀಡುವ ಸಂಭ್ರಮದ ಹಬ್ಬವಾಗಿದೆ ಎಂದರು.ಈ ಸಂದರ್ಭದಲ್ಲಿ ಬೋಧಕ-ಬೋಧಕೆತರ ಸಿಬ್ಬಂದಿಗಳು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ