ಗುರುವಿನ ಹೆಸರು ಅಜರಾಮರ ವಾಗಬೇಕಾದರೆ ತನ್ನನ್ನೇ ಮೀರಿಸುವ ಶಿಷ್ಯನನ್ನು ಪಡೆಯಬೇಕು.

ಗುರು ಕಥೆಯಾದರೆ ಶಿಷ್ಯ ದಂತಕತೆ ಆಗಬೇಕು
ಗುರು ಗುಡಿಯಾದರೆ ಶಿಷ್ಯ
ಗೋಪುರವಾಗಬೇಕು
ಗುರು ಶಿಕ್ಷಕನಾದರೆ ಶಿಷ್ಯ
ಮುಖ್ಯಶಿಕ್ಷಕನಾಗಬೇಕು
ಗುರು ಶ್ರೇಷ್ಠನಾದರೆ ಶಿಷ್ಯ
ಪರಮಶ್ರೇಷ್ಟನಾಗಬೇಕು
ಗುರು ಮೂರ್ತಿಯಾದರೆ ಶಿಷ್ಯ
ಸಾಕಾರಮೂರ್ತಿಯಾಗಬೇಕು
ಗುರು ದೀಪವಾದರೆ ಶಿಷ್ಯ
ನಂದಾದೀಪವಾಗಬೇಕು
ಗುರು ಅಮೃತವಾದರೆ ಶಿಷ್ಯ
ಪಂಚಾಮೃತವಾಗಬೇಕು
ಗುರು ಜ್ಞಾನಿಯಾದರೆ ಶಿಷ್ಯ
ಸುಜ್ಞಾನಿಯಾಗಬೇಕು
ಗುರು ಮರವಾದರೆ ಶಿಷ್ಯ ಹೆಮ್ಮರವಾಗಬೇಕು
ಗುರು ಪುಟವಾದರೆ ಶಿಷ್ಯ ಪುಸ್ತಕವಾಗಿರಬೇಕು
ಗುರು ಪುಸ್ತಕವಾದರೆ ಶಿಷ್ಯ
ಗ್ರಂಥಾಲಯವಾಗಬೇಕು
ಗುರು ಪಂಡಿತನಾದರೆ ಶಿಷ್ಯ
ವಿದ್ವಾಂಸನಾಗಬೇಕು
ಪ್ರತಿ ಗುರುವಿನ ಆಶಯ,ತನ್ನ ಶಿಷ್ಯ ತನ್ನನ್ನು
ಮೀರಿಸುವ ಹಂತಕ್ಕೆ ಬೆಳೆಯಬೇಕೆಂಬುದು
ಗುರುವಿನ ಕನಸಾಗಿದೆ.
ರಚನೆ: ಶ್ರೀ ಮುತ್ತು .ಯ.ವಡ್ಡರ (ಶಿಕ್ಷಕರು)
ಸಾ॥ ಹಿರೇಮಾಗಿ
ಜಿಲ್ಲೆ॥ ಬಾಗಲಕೋಟ
mob-9845568484