ದಲಿತರಿಗೆ ಮೀಸಲಿಟ್ಟ ಅನುದಾನದಲ್ಲಿ ಈಜುಕೊಳ ನಿರ್ಮಾಣ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದಿಂದ ಆಗ್ರಹ.

ಗದಗ ಸಪ್ಟೆಂಬರ್.7

ಗದಗ-ಬೆಟಗೇರಿ ನಗರದ ನಂದೀಶ್ವರ ನಗರದಲ್ಲಿ ನಗರ ಸಭೆಯ ದಲಿತರಿಗೆ ಮೀಸಲಿಟ್ಟ ಅನುದಾನದಲ್ಲಿ ಈಜುಕೊಳ ನಿರ್ಮಾಣ ವಿರೋಧಿಸಿ ಮತ್ತು ಸದರಿ ಅನುದಾನವನ್ನು ಮರಳಿ ಗದಗ-ಬೆಟಗೇರಿ ನಗರ ಸಭೆಗೆ ನೀಡುವಂತೆ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ: ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಘವೇಂದ್ರ ಪರಸಪ್ಪ ಪರಾಪೂರ ಇವರ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿ ರಾಘವೇಂದ್ರ ಪರಸಪ್ಪ ಪರಾಪೂರ ನಮ್ಮ ಸಂಘಟನೆಯ ದಲಿತ ಶೋಷಿತ ಜನಾಂಗದ ಪರ ಕಾಳಜಿವುಳ್ಳ ಶ್ರೀ ಸಿದ್ಧರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಗಳಾಗಿದ್ದಕ್ಕೆ ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.ಸನ್ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸುವುದೇನೆಂದರೆ ದಿ. 03/09/2023 ರಂದು ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ನಂದೀಶ್ವರ ನಗರದಲ್ಲಿ ಗದಗ-ಬೆಟಗೇರಿ ನಗರ ಸಭೆಯು ದಲಿತರಿಗೆ ಮೀಸಲಿಟ್ಟ ಅನುದಾನ ಎಸ್‌ಎಫ್‌ಸಿಯ- ಎಸ್‌ಸಿಪಿ/ಟಿಎಸ್‌ಪಿ ಅನುದಾನದಲ್ಲಿ 168,50 ಲಕ್ಷ ರೂ ಗಳಲ್ಲಿ ಈಜುಕೊಳ ನಿರ್ಮಿಸಿ ಉದ್ಘಾಟನೆ ಮಾಡಲಾಯಿತು. ಸದರಿ ಈಜುಕೋಳ ನಿರ್ಮಾಣಕ್ಕೆ ನಮ್ಮ ಸಂಘಟನೆಯ ವಿರೋಧವಿಲ್ಲ ಆದರೆ ಸದರಿ ಈಜುಕೋಳ ನಿರ್ಮಾಣವನ್ನು ದಲಿತರಿಗೆ ಮೀಸಲಿಟ್ಟ ಹಣದಲ್ಲಿ ನಿರ್ಮಾಣ ಮಾಡಿರುವುದು ನಮಗೆ ತುಂಬಾ ಖೇದಕರ ಸಂಗತಿಯಾಗಿದೆ. ಕಳೆದ 5 ರಿಂದ 6 ವರ್ಷಗಳಿಂದ ಗದಗ-ಬೆಟಗೇರಿ ನಗರ ಸಭೆಯು ದಲಿತರು ಅದರಲ್ಲೂ ಪೌರ ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ, ಅನಾರೋಗ್ಯ ಪೀಡಿತ ಪೌರಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ಮೆಡಿಕಲ್, ಬಿಲ್ಲುಗಳನ್ನು ನೀಡಿರುವುದಿಲ್ಲ. ಉದ್ಯೋಗ, ಆರೋಗ್ಯ, ಪೌರಕಾರ್ಮಿಕರ ಮಕ್ಕಳಿಗೆ ಸ್ಕಾಲರಶಿಪ್, ಉನ್ನತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಲ್ಯಾಪಟ್ಯಾಪ ನೀಡಿರುವುದಿಲ್ಲ. ಬಡ ದಲಿತ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಯಾವುದೇ ಆರ್ಥಿಕ ಸಹಾಯ ಸಿಕ್ಕಿರುವುದಿಲ್ಲ. ದಲಿತ ಸಮುದಾಯದ ದೇವಸ್ಥಾನಗಳ ಅಭಿವೃದ್ಧಿಗೆ ಮತ್ತು ದಲಿತ ಕಾಲೋನಿಗಳಿಗೆ ಮೂಲಭೂತ ಸೌಕರ್ಯಕ್ಕೆ ಅನುದಾನ ಇಲ್ಲ. ಅಂಗವಿಕಲರಿಗೆ ಯಾವುದೇ ರೀತಿಯ ಸಹಾಯ ನೀಡಿರುವುದಿಲ್ಲ. ದಲಿತ ಸಂಘಟನೆಗಳ ಆಫೀಸು ಸಲಕರಣೆಗಳನ್ನು ನೀಡಿರುವುದಿಲ್ಲ. ಈ ರೀತಿಯಾಗಿ ದಲಿತರಿಗೆ ಯಾವುದೇ ಸೌಲಭ್ಯ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ದಲಿತರಿಗೆ ಮತ್ತು ಪೌರಕಾರ್ಮಿಕರಿಗೆ ಶಿಕ್ಷಣ ಮತ್ತು ಆರೋಗ್ಯ ಮಟ್ಟವನ್ನು ಸುಧಾರಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಶ್ರಮಿಸಬೇಕಾಗಿದೆ.ದಲಿತರ ಅಭಿವೃದ್ಧಿಗಾಗಿ ಇರುವ ಹಣವನ್ನು ಇತ್ತಿಚಿಗೆ ದಲಿತರಿಗೆ ಮೀಸಲಿಟ್ಟ ಹಣವನ್ನು ದಲಿತರ ಅಭಿವೃದ್ಧಿಗೆ ಬಳಕೆ ಮಾಡುವುದನ್ನು ಬಿಟ್ಟು ಬೇರೆ ಕೆಲಸಗಳಿಗೆ ಉಪಯೋಗ ಮಾಡುತ್ತಿರುವುದು ತುಂಬಾ ಅನ್ಯಾಯ ಮಾಡಲಾಗುತ್ತಿದೆ. ಇದು ಬಿ. ಆರ್. ಅಂಬೇಡ್ಕರವರವರು ದೀನ ದಲಿತರ ಅಭಿವೃದ್ಧಿಗಾಗಿ ಸಂವಿಧಾನದ ಮೂಲಕ ನ್ಯಾಯ ಕೊಡಿಸಿದ್ದಾರೆ. ಆದರೆ ಇತ್ತೀಚಿಗೆ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನ ವಿರೋಧಿ ನೀತಿಯಿಂದ ದಲಿತರಿಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ.ಕಾರಣ ಮಾನ್ಯ ಮುಖ್ಯಮಂತ್ರಿಗಳಾದ ತಮ್ಮಲ್ಲಿ ನಮ್ಮ ಸಂಘಟನೆಯ ಕಳಕಳಿಯ ವಿನಂತಿಕೊಳ್ಳುವುದೇನೆಂದರೆ ಸದರಿ ಈಜುಕೋಳ ನಿರ್ಮಾಣಕ್ಕೆ ಉಪಯೋಗಿಸಿದ ಎಸ್‌ಎಫ್‌ಸಿಯ ಎಸ್‌ಸಿಪಿ/ಟಿಎಸ್‌ಪಿ ಅನುದಾನದಲ್ಲಿ 168.50 ಲಕ್ಷ ರೂಗಳನ್ನು ಗದಗ-ಬೆಟಗೇರಿ ನಗರಸಭೆಗೆ ಮರಳಿ ಬಿಡುಗಡೆ ಮಾಡಬೇಕೆಂದು ಮತ್ತು ಕಳೆದ 5-6 ವರ್ಷಗಳಿಂದ ದಲಿತರಿಗೆ ಮತ್ತು ಪೌರಕಾರ್ಮಿಕರಿಗೆ ಈ ಮೇಲ್ಕಂಡ ಎಲ್ಲಾ ಸೌಲಭ್ಯ, ಸಹಾಯಧನಗಳನ್ನು ಪ್ರಾರಂಭಿಸಬೇಕೆಂದು ತಮ್ಮಲ್ಲಿ ನಮ್ಮ ಸಂಘಟನೆಯ ಪರವಾಗಿ ಕಳಕಳಿಯಾಗಿ ವಿನಂತಿ ಪತ್ರವನ್ನು ಜಿಲ್ಲಾಧಿಕಾರಿಯವರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಮುಖಂಡರಾದ ರಾ. ದೆ, ಕಾರಭಾರಿ, ರಮೇಶ ರಾಲದೊಡ್ಡಿ, ಯಲ್ಲಪ್ಪ ಮಾಳೆಕೊಪ್ಪ ಉಪಸ್ಥಿತರಿದ್ದರು.

ರಾಘವೇಂದ್ರ ಪರಾಪೂರ

ಮೊಬೈಲ್ ನಂ-: 98801 61018

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button