ಸ್ಮಶಾನ ಅಭಿವೃದ್ಧಿ ಪಡಿಸಬೇಕು-ಡಾ, ಕಾಂತರಾಜ್.
ತರೀಕೆರೆ ಸಪ್ಟೆಂಬರ್.7

ಪುರಸಭಾ ಸಿಬ್ಬಂದಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಪಟ್ಟಣದ ಬಿಎಚ್ ರಸ್ತೆಗೆ ಹೊಂದಿಕೊಂಡಿರುವ ರುದ್ರ ಭೂಮಿಗೆ ಭೇಟಿ ನೀಡಿದ ತರೀಕೆರೆ ಉಪ ವಿಭಾಗ ಅಧಿಕಾರಿ ಡಾ. ಕಾಂತರಾಜ್ ರವರು ಇಂದು ಪರಿಶೀಲನೆ ನಡೆಸಿ ಪುರಸಭಾ ಮುಖ್ಯ ಅಧಿಕಾರಿಗಳಿಗೆ ಸ್ಮಶಾನ ಅಭಿವೃದ್ಧಿಪಡಿಸಬೇಕು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಸ್ವಚ್ಛತೆಯನ್ನು ಮಾಡಿಸಬೇಕು. ಪುರಸಭೆ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ಮತ್ತು ಕ ದ ಸಂ ಸ,ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರಿಗೆ ಹೇಳಿದರು. ಸ್ಮಶಾನದ ಆಜು ಬಾಜು ಇರುವ ಇಡುವಳಿದಾರರಾದ ಪಾಟಾಳಿ ಕೃಷ್ಣಮೂರ್ತಿ, ಮಾಜಿ ಶಾಸಕರಾದ ಡಿ ಎಸ್ ಸುರೇಶ್, ಮತ್ತು ಬಸವರಾಜ್ ರವರ ಜಮೀನುಗಳ ಪಹಣಿ, ಆಕಾರ ಬಂದ್, ಟಿಪ್ಪಣಿ ಕಾಫಿ, ತೆಗೆಸಿ ಸರ್ಕಾರಿ ಜಾಗ ಎಷ್ಟು ಇದೆ, ರೈಲ್ವೆ ಇಲಾಖೆಯ ಜಾಗ ಎಷ್ಟು ಇದೆ, ಕೆರೆಗೆ ಸೇರಿದ ಜಾಗ ಎಷ್ಟು ಇದೆ, ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಂಗ್ರಹಿಸಲು ತಿಳಿಸಿದರು. ತಾಲೂಕು ಸರ್ವೆಯರ್ ಸಿದ್ದೇಶ್, ಪುರಸಭಾ ಕಂದಾಯ ಅಧಿಕಾರಿ ಮಂಜುನಾಥ್, ರಾಜಸ್ವ ನಿರೀಕ್ಷಕರಾದ ರೇವಣ್ಣ, ಪಾಟಾಲಿ ಕೃಷ್ಣಮೂರ್ತಿ, ಗ್ರಾಮಸ್ಥರಾದ ಗಾರೆ ನಾಗರಾಜ್, ಬೋರ್ ವೆಲ್ ಶಿವು, ಹೋಟೆಲ್ ಕುಮಾರಪ್ಪ, ಮುಂತಾದವರು ಉಪಸ್ಥಿತರಿದ್ದರು. ಸ್ಮಶಾನಕ್ಕೆ ರಸ್ತೆ ಸಂಪರ್ಕ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಮಾಹಿತಿಯೊಂದಿಗೆ ವರದಿ ಮಾಡಲು ಇಲಾಖಾ ಅಧಿಕಾರಿಗಳಿಗೆ ಉಪವಿಭಾಗ ಅಧಿಕಾರಿಗಳಾದ ಡಾ. ಕಾಂತರಾಜ್ ರವರು ಹೇಳಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ