ಸಪ್ಟೆಂಬರ್.9 ರಂದು ಶ್ರೀ ವೀರಾಂಜನೇಯ ಜಾತ್ರಾ ಮಹೋತ್ಸವ ಮತ್ತು ಕಳಸದ ಮೆರವಣಿಗೆ.
ಹುನಗುಂದ ಸಪ್ಟೆಂಬರ್.7

ತಾಲೂಕಿನ ಸಮೀಪದ ಕೂಡಲ ಸಂಗಮ ಕ್ರಾಸ್ನಲ್ಲಿ ಇರುವ ಶ್ರೀ ವೀರಾಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ವೀರಾಂಜನೇಯ ಅಭಿಷೇಕ ಹಾಗೂ ಕಳಸದ ಮೆರವಣೆಗೆ ಕಾರ್ಯಕ್ರಮ ಸೆ.೯ ರಂದು ಶನಿವಾರ ಜರುಗಲಿದೆ.ಸೆ.೮ ರಂದು ಶುಕ್ರವಾರ ರಾತ್ರಿ ೧೦ ಗಂಟೆಗೆ ಆದಿಶಕ್ತಿ ಭಜನಾ ಮಂಡಳಿ ಗಂಜೀಹಾಳ,ಆದಿಶಕ್ತಿ ಭಜನಾ ಮಂಡಳಿ ಇದ್ದಲಗಿ ಹಾಗೂ ದುರ್ಗಾದೇವಿ ಭಜನಾ ಮಂಡಳಿ ತಿಮ್ಮಾಪೂರ ಕಲಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಲಿವೆ.ಸೆ.೯ ರಂದು ಶನಿವಾರ ಬೆಳಗ್ಗೆ ೭ ಗಂಟೆಗೆ ಹಳ್ಳೂರಿನ ಸಂಗಯ್ಯ ಸಿ.ಜುಕ್ತಿಮಠ ಅವರಿಂದ ವೀರಾಂಜನೇಯ ಮೂರ್ತಿಗೆ ರುದ್ರಾಭಿಷೇಕ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳು ಜರುಗಲಿದೆ.ನಂತರ ಮುತ್ತೈದೆಯರು ಕಳಸ. ಕನ್ನಡಿ,ಡೊಳ್ಳು,ವಾಧ್ಯ ವೈಭವಗಳೊಂದಿಗೆ ದೇವಸ್ಥಾನದಿಂದ ಕೂಡಲ ಸಂಗಮ ಕ್ರಾಸ್,ಹೂವನೂರ ಅವರಗೆ ಮೆರವಣೆಗೆ ನಡೆಯಲಿದೆ.ನಂತರ ಬೆಳಗ್ಗೆ ೧೦.೩೦ ಗಂಟೆಗೆ ಧರ್ಮ ಜಾಗೃತಿ ಸಭೆ ಜರುಗಲಿದೆ.ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದಾರೆ.ಕೂಡಲ ಸಂಗಮ ಸಾರಂಗಮಠದ ಜಾತವೇದಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಳ್ಳುವರು,ಗದಗಯ್ಯ ಹಿರೇಮಠ ಮತ್ತು ಮಲ್ಲಯ್ಯ ಹಿರೇಮಠ ಅತಿಥಿಗಳಾಗಿ ಆಗಮಿಸಿಲಿದ್ದು.ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ ಜರಗಲಿದೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ