ಪುರಸಭೆ ಸಿಬ್ಬಂದಿಗಳು ಅಧಿಕಾರಿಗಳ ಗಮನಕ್ಕಿಲ್ಲದೇ ನಡೆದುಕೊಳ್ಳೋದು ನಿಲ್ಲಿಸುವಂತೆ – ಶಾಸಕ ಕಾಶಪ್ಪನವರ ಖಡಕ್ ಸೂಚನೆ.

ಹುನಗುಂದ ಸಪ್ಟೆಂಬರ್.12

ಪಟ್ಟಣದ ಪುರಸಭೆಯಲ್ಲಿ ಕೆಲ ಸಿಬ್ಬಂದಿಗಳು ಅಧಿಕಾರಿಗಳ ಗಮನಕ್ಕಿಲ್ಲದೇ ತಾವು ಮಾಡಿದ್ದೇ ಮಾರ್ಗ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನುವ ದೂರಗಳು ಕೇಳಿ ಬರುತ್ತಿದ್ದು ಅಂತವರ ಮೇಲೆ ನಿಗಾವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ವಿಜಯಾನಂದ ಕಾಶಪ್ಪನವರ ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿಗೆ ಖಡಕ್ ಸೂಚನೆ ನೀಡಿದರು.ಮಂಗಳವಾರ ಪುರಸಭೆ ಸಭಾಭವನದಲ್ಲಿ ನಡೆದ ನಗರ ಅಭಿವೃದ್ದಿ ಕಾರ್ಯಗಳ ಕುರಿತು ಕರೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಪಟ್ಟಣದ ಬೀದಿ ದೀಪ,ಕುಡಿಯುವ ನೀರು,ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕಿದರೇ ಅಂತವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು.ಇನ್ನು ಪಟ್ಟಣ ತುಂಬಾ ಪುರಸಭೆ ಆಸ್ತಿಗಳು ಒತ್ತುವರಿಯಾದರೇ ಇನ್ನು ಕೆಲವು ಜನರು ತಮ್ಮ ಸ್ವಂತ ಕಟ್ಟಡ ಮುಂಭಾಗದ ಖಾಲಿ ಜಾಗೆಯನ್ನು ಅತೀ ಕ್ರಮಿಸಿಕೊಂಡು ಕಟ್ಟಡ ನಿರ್ಮಿಸಿದ್ದು ಅಂತಹ ಸರ್ಕಾರಿ ಜಾಗೆಯನ್ನು ಒತ್ತುವರಿ ಮಾಡಿದವರಿಗೆ ನೋಟಿಸ್ ನೀಡಿ ತೆರವುಗೊಳಿಸುವ ಕಾರ್ಯವನ್ನು ಅತೀ ಶೀಘ್ರದಲ್ಲಿ ಮಾಡಬೇಕು.

ನಗರೋಥ್ಠೋನದ ಅನುದಾನವನ್ನು ಕೆಲ ಚುನಾಯಿತ ಸದಸ್ಯರ ಬೇಡಿಕೆಯಂತೆ ಆಧ್ಯತೆ ಮೇರೆಗೆ ಅಭಿವೃದ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳಬೇಕು.ಹೆಚ್ಚಿನ ಅನುದಾನದಲ್ಲಿ ಸದಸ್ಯರ ಸೂಚನೆಯಂತೆ ಅವಶ್ಯಕ ಸ್ಥಳಗಳಲ್ಲಿ ಹೈಮಾಸ್ಕ್ ನಿರ್ಮಿಸಬೇಕು.ಯಾವುದೆ ದಾಖಲೆಬೇಕೆಂದು ಬಂದ ಸಾರ್ವಜನಿಕರಿಂದ ಹಣ ವಸೂಲಿ ಮಾಡದೇ ಸರ್ಕಾರಿ ಚಲನ್ ಕಟ್ಟಿಸಿಕೊಂಡು ಕಾಲಾವಕಾಶದಲ್ಲಿ ದಾಖಲೆ ಒದಗಿಸಬೇಕು. ಉಳಿದಂತೆ ವಸತಿ ಯೋಜನೆ,ಹಕ್ಕು ಪತ್ರ,ಫಲಾನುಭವಿಗಳ ಆಯ್ಕೆ ಹಾಗೂ ಸಭೆಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪುರಸಭೆ ಅಧ್ಯಕ್ಷ ಪರವೇಜ ಖಾಜಿ,ಉಪಾಧ್ಯಕ್ಷೆ ಶಾಂತಾ ಮೇಲಿನಮನಿ,ಸದಸ್ಯರಾದ ಶರಣು ಬೆಲ್ಲದ,ಯಲ್ಲಪ್ಪ ನಡುವಿನಮನಿ,ಮೈನು ಧನ್ನೂರ,ಚಂದ್ರು ತಳವಾರ,ಬಸವರಾಜ ಗೊಣ್ಣಾಗರ,ಮಹಿಬೂಬ ದೋಟಿಹಾಳ,ನಾಗರತ್ನಾ ತಾಳಿಕೋಟಿ,ರಾಜಮ್ಮ ಬದಾಮಿ,ಭಾಗ್ಯಶ್ರೀ ರೇವಡಿ.ಮುಖಂಡ ಮಲ್ಲಿಕಾರ್ಜುನ ಹೂಗಾರ ಸೇರಿದಂತೆ ಕುಡಿಯುವ ನೀರು ಸರಬರಾಜು ಯೋಜನೆ ಅಧಿಕಾರಿ ಮತ್ತು ಸಿಬ್ಬಂದಿ, ಮುಖ್ಯಾಧಿಕಾರಿ ಸತೀಶ ಚೌಡಿ, ಮತ್ತು ಸಿಬ್ಬಂದಿ ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button