ಸಂಗೀತ ಪಾಠಶಾಲೆಗಳು ಬೆಳಕಿಗೆ ಬರಬೇಕು-ಶಾಸಕ ನೇಮಿರಾಜ್ ನಾಯ್ಕ್.

ಕೊಟ್ಟೂರು ಸಪ್ಟೆಂಬರ್.13

ಸ್ವರ ಸಂಗಮ ಟ್ರಸ್ಟ್ ವತಿಯಿಂದ “ಸ್ವರ ಸಂಗಮ ಹಿಂದೂಸ್ಥಾನಿ ಸಂಗೀತ ಮೊದಲನೇ ವರ್ಷದ ವಾರ್ಷಿಕೋತ್ಸವ ಉದ್ಘಾಟನೆ ಸಮಾರಂಭ”ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸಂಗೀತ ಆಸಕ್ತಿ ಇರುವ ಪ್ರತಿಭೆಗಳು ಗುರುತಿಸಿ ಅವರನ್ನು ಸ.ರಿ.ಗ.ಮ.ಪಾ. ಕನ್ನಡ ಕೋಗಿಲೆ, ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುವ ಹಾಗೇ ಇಂತಹ ಸಂಗೀತಾ ಪಾಠ ಶಾಲೆಗಳು ಬೆಳಕಿಗೆ ಬರಬೇಕು ಎಂದು ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ್ ರವರು ಹೇಳಿದರು ಕೊಟ್ಟೂರು ಪಟ್ಟಣದ ಬಾಲಾಜಿ ಕನ್ವೇಷನ್ ಹಾಲ್ ನಲ್ಲಿ ನಡೆದ ಸ್ವರ ಸಂಗಮ ಟ್ರಸ್ಟ್ ಹಾಗೂ ಸ್ವರ ಸಂಗಮ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸಂಗೀತದ ಬಗ್ಗೆ ಅಪಾರ ಜ್ಞಾನ ಉಳ್ಳವರು ಎಲೆ ಮರೆ ಕಾಯಿಂತಿರುವ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬರದೇ ಹಾಗೇ ಉಳಿದುಕೊಂಡಿದ್ದಾರೆ ಇಂತಹವರನ್ನು ಗುರುತಿಸಿ ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವೇದಿಕೆ ನಿರ್ಮಿಸಲು ಈ ಸ್ವರ ಸಂಗಮ ಟ್ರಸ್ಟ್ ಸಹಾಯವಾಗಿ ಕೈ ಜೋಡಿಸಬೇಕು ಹಾಗೂ ನಮ್ಮ ಕ್ಷೇತ್ರದಲ್ಲಿ ರಂಗ ಮಂದಿರ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ನಮ್ಮ ತಾಲೂಕಿನಲ್ಲಿ ಅದ್ಭುತ ಪ್ರತಿಭೆಗಳಿದ್ದರು ಸರಿಯಾದ ವೇದಿಕೆ ಸಿಗದೇ ಬೆಳಕಿಗೆ ಬರುತ್ತಿಲ್ಲ ತಾಲೂಕಿನಲ್ಲಿ ಈ ತರಹದ ಸಂಗೀತ ಪಾಠ ಶಾಲೆ ಅತ್ಯವಶ್ಯಕವಾಗಿದೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ಹಾಗೆ ಉತ್ತಮ ಪ್ರತಿಭೆಗಳನ್ನು ಈ ಸ್ವರ ಸಂಗಮ ಟ್ರಸ್ಟ್ ಒದಗಿಸಲಿ ಎಂದು ಎಂಎಂಜೆ ಹರ್ಷವರ್ಧನ್ ರವರು ಹೇಳಿದರುನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಈ ಸ್ವರ ಸಂಗೀತ ಟ್ರಸ್ಟ್ ಸಂಸ್ಥಾಪಕರು ಉತ್ತಮ ಪ್ರತಿಭೆಗಳನ್ನು ಗುರುತಿಸಿ ಸಂಗೀತ ಕ್ಷೇತ್ರದಲ್ಲಿ ಒಂದು ಹೊಸ ಅಲೆ ನಿರ್ಮಾಣ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಇಂತಹ ಕಲಾ ಟ್ರಸ್ಟ್ ಗಳಿಗೆ ನಾವುಗಳು ಸದಾ ಪ್ರೋತ್ಸಾಹ ನೀಡುತ್ತೇವೆ ಎಂದು ಡಿಎಸ್ಎಸ್ ಜಿಲ್ಲಾಧ್ಯಕ್ಷ ಬಿ. ಮರಿಸ್ವಾಮಿ ಯವರು ಮಾತನಾಡಿದರು.ಈ ಸಂದರ್ಭದಲ್ಲಿ ಟ್ರಸ್ಟ್ ಸಂಸ್ಥಾಪಕರಾದ ಶ್ವೇತಾ ಬಸವರಾಜ್, ಶೀಲಾ ಮಹದೇವ್ ಭರತನಾಟ್ಯ ಶಿಕ್ಷಕರು, ಶಾಂತ್ ಕುಮಾರಿ ಪಿಡಿಓ, ವಿರೇಶ್ ಗೌಡ , ಸಂಗೀತ ಶಾಲಾ ಮಕ್ಕಳಿಂದ ನೃತ್ಯ, ಗಾಯನ, ನೆರವೇರಿಸಿದರು, ಲತಾ ಬಳ್ಳಾರಿ, ಸ್ವಾಗತಿಸಿ ವಂದಿಸಿದರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button