ಆಲೂರು ಕುಟುಂಬವೊಂದು ತನ್ನ ಮಗನ ಸಾವಿನಲ್ಲೂ ಎಂಟು ಜನರ ಬದುಕಿಗೆ ಬೆಳಕು ತಂದು ಸಾರ್ಥಕತೆ ಮೆರೆದಿದ್ದಾರೆ.

ಕಾನಾ ಹೊಸಹಳ್ಳಿ ಕುಟುಂಬವೊಂದು ತನ್ನ ಮಗನ ಸಾವಿನಲ್ಲೂ ಎಂಟು ಜನರ ಬದುಕಿಗೆ ಬೆಳಕು ತಂದು ಸಾರ್ಥಕತೆ ಮೆರೆದಿದ್ದಾರೆ.

ತಾಲೂಕಿನ ಆಲೂರು ಗ್ರಾಮದ ಟಿ.ಚಿಕ್ಕಣ್ಣಜ್ಜ ಇವರ ಮೊಮ್ಮಗ ಕೆ.ಪಿ. ಸಾತ್ವಿಕ್(11) ಎನ್ನುವ ಬಾಲಕ ಮೂಗಿನ ಶಸ್ತ್ರ ಚಿಕಿತ್ಸೆ ವಿಫಲವಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ. ಮೃತ ಬಾಲಕ ಕಾನಾ ಹೊಸಹಳ್ಳಿಯ ವೈಭವ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಸಾತ್ವಿಕ್ ಚಿಕಿತ್ಸೆಗೆ ಫಲಿಸದೇ ಮೆದುಳು ನಿಷ್ಕ್ರಿಯವಾಗಿದೆ ಮೃತ ಪಟ್ಟಿದ್ದಾನೆ. ಬಾಲಕ ಮೃತ ಪಟ್ಟಿದ್ದನ್ನು ಖಚಿತ ಪಡಿಸಿಗೊಂಡು. ದುಃಖದ ನಡುವೆಯೂ ನನ್ನ ಮಗನ ಅಂಗಾಂಗಗಳು ಇನ್ನೋಬರ ಬಾಳಿಗೆ ಬೆಳಕಾಗಲಿ ಎಂದು ನಿರ್ಧರಿಸಿ ಕುಟುಂಬದ ಜತೆ ಮಾತನಾಡಿ, ನಿರ್ಧರಿಸಿ ಸಾತ್ವಿಕ್ ಅಂಗಾಂಗಗಳನ್ನು ದಾನಮಾಡಿ ಮಾನವೀಯತೆ ಮೆರೆದಿದ್ದಾರೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ತಾಯಿಯ ಕಣ್ಣೀರಿನ ಕಂಬನಿ ಹರಿಸಿತ್ತು.
ತಮ್ಮ ಮಗು ಇಹಲೋಕ ತ್ಯಜಿಸದರು ಅವನಿಂದ ಮತ್ತೊಬ್ಬರ ಮನೆ ಬೆಳಗಲಿ ಎಂಬ ಹೃದಯ ವೈಶಾಲ್ಯತೆಯ ಕುಟುಂಬದ ಮನೆ ಬಾಗಿಲಿಗೆ ತಡಮಾಡದೇ ಕೂಡ್ಲಿಗಿ ಶಾಸಕ ಡಾ ಎನ್ ಟಿ ಶ್ರೀನಿವಾಸ್ ಭೇಟೆ ನೀಡಿ ಮಗುವಿನ ಅಂತ್ಯ ಸಂಸ್ಕಾರಕ್ಕೆ ಪ್ರಾಮುಖ್ಯತೆ ನೀಡುತ್ತಾ, ಸಾತ್ವಿಕ್ ಮನೆಯ ಮುಂದೆ ಕುಟುಂಬ ಸದಸ್ಯನಂತೆ ಭಾರವಾದ ಮನಸ್ಸಿನಿಂದ ಕಣ್ಣು ಒದ್ದೆಯಾಗಿಸಿ ಕೊಂಡು ಶಾಸಕರು ಕುಟುಂಬಕ್ಕೆ ಧೈರ್ಯ ತುಂಬಿ ಅಂಗಾಂಗ ದಾನದ ವಿಶಾಲ ಹೃದಯವಂತಿಕೆ ಪ್ರತಿಯೊಬ್ಬರಲ್ಲಿ ಬೆಳೆಯಲಿ ಎಂದು ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು ನಂತರ ಅಲ್ಲಿ ನೆರೆದಿದ್ದ ತಾಲ್ಲೂಕಿನ ಎಲ್ಲಾ ಮುಖಂಡರಿಗೆ ಅಂಗಾಗ ದಾನದ ಮಹತ್ವವನ್ನು ತಿಳಿಸಿದರು. ಆಲೂರು ಗ್ರಾಮದ ವೀರಶೈವ ರುದ್ರ ಭೂಮಿಯಲ್ಲಿ ಶನಿವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ನೆರವೇರಿತು. ಈ ವೇಳೆ ತಾಲೂಕಿನ ಮುಖಂಡರು ಊರಿನ ಗ್ರಾಮಸ್ಥರು ಇತರರು ಇದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button