ಪಿಒಪಿ ಗಣೇಶ ಬಳಕೆ ನಿಷೇಧ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಬಳಸಿ -ಗಣೇಶ ಸ್ಥಾಪನೆ ಆನುಮತಿ ಕಡ್ಡಾಯ.
ಹುನಗುಂದ ಸಪ್ಟೆಂಬರ್.14

ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ಧಯುತವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಬ್ಬವನ್ನು ಆಚರಿಸಬೇಕು ಮತ್ತು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.ಗುರುವಾರ ಪಟ್ಟಣದ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಪೋಲೀಸ್ ಇಲಾಖೆಯ ವತಿಯಿಂದ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಪರವಾನಿಗೆ ನಾಲ್ಕು ಇಲಾಖೆಯಿಂದ ಪಟ್ಟಣದ ಪುರಸಭೆಯಲ್ಲಿ ವ್ಯವಸ್ಥೆಯನ್ನು ಮಾಡಲಾಗುವುದು ಒಂದೇ ರಸ್ತೆಯಲ್ಲಿ ಒಂದೇ ಸಮಯಕ್ಕೆ ಮೂರ್ತಿ ವಿಸರ್ಜನೆ ಅನುಮತಿಯಿಲ್ಲ ಐದಾರು ಗಂಟೆಯ ವ್ಯತ್ಯಾಸದ ಮೇಲೆ ಅನುಮತಿಯನ್ನು ನೀಡಲಾಗುವುದು ಎಂದರು.ಪಿಎಸ್ಐ ಚನ್ನಯ್ಯ ದೇವೂರ ಮಾತನಾಡಿ ಪಿಒಪಿ ಗಣೇಶ ಮೂರ್ತಿಯನ್ನು ಬಳಸದೇ ಪರಿಸರ ಸಂರಕ್ಷಣೆಗಾಗಿ ಮಣ್ಣಿನ ಗಣೇಶ ಮೂರ್ತಿಯನ್ನು ಬಳಸಿ ಇನ್ನೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಕ್ಕೆ ಕೆಲವೊಂದಿಷ್ಟು ಸರ್ಕಾರದ ಗೈಡ್ಲೈನ್ಸ್ ಪಾಲನೆ ಮಾಡಲೇಬೇಕು.ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಪೊಲೀಸ್ ಇಲಾಖೆ,ನಗರಸಭೆ,ಪುರಸಭೆ,ಪಟ್ಟಣ ಪಂಚಾಯತ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾತಯ,ಹೆಸ್ಕಾಂ,ಅಗ್ನಿಶಾಮಕದಳ ಇಲಾಖೆಗಳ ಅನುಮತಿ ಕಡ್ಡಾಯ,ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದ ಮಾಲೀಕನ ಜಾಗೆ ಉತ್ತಾರೆ ಮತ್ತು ಒಪ್ಪಿಗೆ ಪತ್ರ ಪಡೆಯಬೇಕು.ಗಣೇಶ ಕಾಯಲು ಮಂಡಳಿಯ ಸದಸ್ಯರ ಹೆಸರನ್ನು ಕೊಡಬೇಕು,ಧ್ವನಿ ವರ್ಧಕ ಅನುಮತಿಯು ಕೂಡಾ ಅಷ್ಟೆ ಮುಖ್ಯವಾಗಿದೆ,ಸೌಂಡ್ ಬಾಕ್ಸ್ ಗಳಿಗೆ ಅನುಮತಿ ಇದೆ ಆದರೇ ಡಿಜೆಗೆ ಅನುಮತಿವಿಲ್ಲ ಮತ್ತು ಗಣೇಶ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಇಸ್ಪೀಟ್ ಆಡೋದ್ದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಹಾಗೇನಾದರೂ ಕಂಡು ಬಂದರೇ ಅಂತವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.ಪೊಲೀಸ್ ಇಲಾಖೆಯಿಂದ ಗಣೇಶ ಮೂರ್ತಿ ಯಾವಾಗ ಸ್ಥಾಪನೆ ಮಾಡ್ತೀರಾ,ಎಷ್ಟು ದಿನ ಹಿಡ್ತೀರಿ,ಯಾವಾಗ ವಿಸರ್ಜನೆ ಮಾಡ್ತೀರಾ ಎನ್ನವ ಒಂದು ಪಾರ್ಮೆಟ್ ಮಾಡಿದ್ದೇವೆ ಅದರಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು,ಇನ್ನು ಮೂರ್ತಿ ಮೆರವಣೆಗೆ ಮತ್ತು ವಿಸರ್ಜನೆಗೆ ಬಳಸುವ ವಾಹನದ ಡಿಎಲ್,ಪಾಸಿಂಗ್ ಮತ್ತು ಇನ್ಯೂರೆನ್ಸ್ ಕಡ್ಡಾಯವಾಗಿ ಇರಲೇಬೇಕು.ವಿಸರ್ಜನೆಗೆ ಸಂಜೆ ೭ ಗಂಟೆಯವರಗೆ ಅನುಮತಿ ಇರುತ್ತದೆ ಎಂದರು.ವಿ,ಮ.ಬ್ಯಾಂಕ್ ನಿರ್ದೇಶಕ ಮಹಾಂತೇಶ ಅವಾರಿ ಮತ್ತು ಮಹಾಂತೇಶ ಹಳ್ಳೂರ ಹಾಗೂ ಶಬ್ಬೀರ್ ಮೌಲ್ವಿ ಮಾತನಾಡಿ ಹುನಗುಂದ ಪಟ್ಟಣ ಶಾಂತಿ ಸೌಹಾರ್ಧಕ್ಕೆ ಹೆಸರಾದುದ್ದು.ಭಾವೈಕ್ಯೆತೆಯಿಂದ ಹಿಂದು ಮತ್ತು ಮುಸ್ಲಿಂ ಹಬ್ಬವನ್ನು ಆಚರಿಸುತ್ತಾ ಅನ್ಯೋನ್ಯತೆಯಿಂದ ಬಾಳುತ್ತಿದ್ದೇವೆ ಇಲ್ಲಿ ಯಾವದೇ ಅಹಿತಕರ ಘಟನೆಗಳು ಇಲ್ಲಿವರಗೆ ನಡೆದಿಲ್ಲ ಸಧ್ಯನೂ ನಡೆಯೋದಿಲ್ಲ.ಗೌರಿಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಗ್ಗಟ್ಟಿನಿಂದ ಅತ್ಯಂತ ಪ್ರೀತಿ ವಿಶ್ವಾಸ ಸಡಗರ ಸಂಭ್ರಮದಿಂದ ಸಹೋದರತೆ ಮನೋಭಾವದಿಂದ ಆಚರಣೆ ಮಾಡುತ್ತೇವೆ.ಹೆಸ್ಕಾಂ ಇಲಾಖೆ ಗಣೇಶ ಹಬ್ಬದಲ್ಲಿ ಲೋಡ್ಶೆಡಿಂಗ್ ಮಾಡಬಾರದು ಎಂದರು.ಈ ಸಂದರ್ಭದಲ್ಲಿ ವಿ.ಮ.ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ,ಮುಖಂಡರಾದ ಶಿವಾನಂದ ಕಂಠಿ,ಮಹಾಂತೇಶ ಲಗಮ್ನನವರ,ಮುತ್ತು ಲೋಕಾಪೂರ,ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿ,ಹೆಸ್ಕಾಂ ಅಧಿಕಾರಿ ಮಹಾಂತೇಶ ಬಣ್ಣಾಕದಿನ್ನಿ ಸೇರಿದಂತೆ ವಿವಿಧ ಗ್ರಾಮ ಮತ್ತು ಪಟ್ಟಣಗಳಿಂದ ಆಗಮಿಸಿದ ಮುಖಂಡರು ಸಭೆಯಲ್ಲಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡಗಲ್ಲ.ಹುನಗುಂದ