ಇಂಜಿನೀಯರ್ ದಿನಾಚರಣೆಗೆ ಶುಭಾಶಯಗಳು ತಿಳಿಸಿದ ಶೇಖರ್ ಬಹುರೂಪಿ.(ಇ.ಇ).
ಹಗರಿಬೊಮ್ಮನಹಳ್ಳಿ ಸಪ್ಟೆಂಬರ್.15





ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪಟ್ಟಣದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಕಾರ್ಯ ಮತ್ತು ಪಾಲನ ವಿಭಾಗ ಹಗರಿಬೊಮ್ಮನಹಳ್ಳಿ ರವರ ಕಚೇರಿಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ ಎಲ್ಲಾರೂ ಸಮ್ಮುಖದಲ್ಲಿ ಭಾರತ ಕಂಡ ಅತ್ಯಂತ ಶ್ರೇಷ್ಠ ಇಂಜಿನೀಯರ್ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ ಹುಟ್ಟು ಹಬ್ಬದ ದಿನವನ್ನು ಇಂಜಿನೀಯರ್ ದಿನಾಚರಣೆ ಎಂದು ಕಾರ್ಯಕ್ರಮವನ್ನು ಕಚೇರಿಯಲ್ಲಿ ಸರಳವಾಗಿ ಆಚರಣೆ ಮಾಡುವುದರೊಂದಿಗೆ ಸರ್ ಎಂ ವಿಶ್ವೇಶ್ವರರಯ್ಯ ನವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಹಾಗೂ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ದಿನದ ಕೇಕ್ ಅನ್ನು ಕಟ್ ಮಾಡುವುದರೊಂದಿಗೆ ಸಿಹಿ ಹಂಚಿ ಸರಳವಾಗಿ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾನ್ಯ ಶೇಖರ್ ಬಹುರೂಪಿ, ಕಾರ್ಯನಿರ್ವಾಹಕ ಇಂಜಿನೀಯರ್ ಇವರು ಸರ್ ಎಂ ವಿಶ್ವೇಶ್ವರಯ್ಯ ರವರಿಗೆ ಗೌರವಪೂರ್ವಕವಾಗಿ ಶುಭಾಶಯಗಳು ತಿಳಿಸುವುದರೊಂದಿಗೆ ಮಾತನಾಡುತ್ತಾ ಎಲ್ಲಾ ಕಾರ್ಯನಿರತ ಇಂಜಿನೀಯರ್ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ಭಾಗವಹಿಸಿದ್ದಂತಹ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಶುಭಾಶಯ ಹಾಗೂ ಧನ್ಯವಾದಗಳು ತಿಳಿಸಿದರು. ಈ ಸಂದರ್ಭದಲ್ಲಿ ಆರ್ ತೇಜ ನಾಯಕ್ ಎ ಇ ಇ , ಮೋಟ್ಲಾ ನಾಯಕ್ ಎಇ ಇ, ಸಾವಿತ್ರಿ ಎ.ಒ, ರಾಘವೇಂದ್ರ ಎ.ಇ, ಬಿ ನಾರಪ್ಪ ಸಿ.ಇ.ಸಿ, ಕೆ.ರಾಮು, ಬಿ ಹೊನ್ನೂರಪ್ಪ, ಎ.ಪ್ರಕಾಶ್, ಸಹನಾ, ಅಶ್ವಿನಿ,ವಿಜಯಲಕ್ಷ್ಮಿ, ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ