ಕಂದಾಯ ಇಲಾಖೆಯಿಂದ ಆಯೋಜಿಸಲಾಗಿದ್ದ “ಪಿಂಚಣಿ ಅದಾಲತ್” ಹಾಗೂ “ಜನಸ್ಪಂದನ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು.

ದೇವಸಮುದ್ರ ಸಪ್ಟೆಂಬರ್.16

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ದೇವಸಮುದ್ರ ಗ್ರಾಮದಲ್ಲಿ ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ “ಪಿಂಚಣಿ ಅದಾಲತ್” ಹಾಗೂ “ಜನಸ್ಪಂದನ” ಕಾರ್ಯಕ್ರಮ ಚಾಲನೆ ನೀಡಿದೆ ನಮ್ಮ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳು ಬಗ್ಗೆ ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು ದೇವಸಮುದ್ರ* ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಪೌಷ್ಠಿಕವಾದ ಆಹಾರದ ಕಿಟ್ಟುಗಳನ್ನು ಕೊಡಿಸುವುದರ ಮೂಲಕ ಮತ್ತು ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ರೀತಿಯಿಂದ ಕೆಲಸಗಳನ್ನು ಮಾಡಿಕೊಡಬೇಕೆಂದು ಮಾನ್ಯ ಶಾಸಕರು ಹೇಳಿದರು.

ರಾಂಪುರ ಗಡಿಭಾಗದ ಹಳ್ಳಿಗಳಿಗೆ ಹಿಂದೆ ನಾನು ಶಾಸಕನಾಗಿದ್ದಾಗ ಮಾತ್ರ ರಸ್ತೆಗಳು ಶಾಲೆ ಬಿಲ್ಡಿಂಗ್ ಗಳು ಚರಂಡಿ ವ್ಯವಸ್ಥಿತವಾಗಿ ಇವೆಲ್ಲವನ್ನೂ ನಾನು ಮಾಡಿಸಿದ್ದೆ ಈಗ ಹತ್ತು ವರ್ಷದಿಂದ ಸರಿಯಾದ ರೀತಿಯಿಂದ ಯೋಜನೆಗಳು ಆಗಿಲ್ಲ ಆದಕಾರಣ ಸಾರ್ವಜನಿಕ ಗೋಸ್ಕರ ಬೇಕಾಗಿರುವ ಯೋಜನೆಗಳನ್ನು ಮತ್ತು ಶಾಲೆ ಬಿಲ್ಡಿಂಗ್ ಆಗಿರಬಹುದು ಓಡಾಡುವಂತ ರಸ್ತೆಗಳು ಆಗಿರಬಹುದು ಕುಡಿಯ ನೀರಿನ ವ್ಯವಸ್ಥೆ ಆಗಿರಬಹುದು ಸ್ವಚ್ಛತೆ ಮತ್ತು ಚರಂಡಿ ಮೂಲಭೂತ ಸೌಕರ್ಯಗಳನ್ನು ಈ ಭಾಗದ ಸಾರ್ವಜನಿಕರಿಗೆ ಗ್ರಾಮಗಳ ಗ್ರಾಮಸ್ಥರು ಬಂದು ನಮ್ಮ ಗ್ರಾಮಕ್ಕೆ ಇಂಥ ಯೋಜನೆ ರೂಪಿಸಬೇಕೆಂದು ನನ್ನನ್ನು ಕೇಳಿದಾಗ ಆ ಯೋಜನೆಯನ್ನು ಎಲ್ಲಾ ಸಾರ್ವಜನಿಕರಿಗೆ ಬೇಕಾಗುವಂತ ಕೆಲಸಗಳನ್ನು ರೂಪಿಸುತ್ತೇನೆ.

ಎಂದು ಮಾನ್ಯ ಶಾಸಕರು ಮನಸ್ಸು ಆಗಿರುತ್ತದೆ ಮತ್ತು ಸರ್ಕಾರದಿಂದ ಬರತಕ್ಕಂತ ಸಾಲ ಸೌಲಭ್ಯಗಳು ನೇರ ಸಾಲುಗಳು ಗಂಗಾ ಕಲ್ಯಾಣ ಸಾಲುಗಳು ಐರಾವತ ಯೋಜನೆ ಪಶು ಸಂಗೋಪನೆ ಯೋಜನೆ ಕುರಿ ಮೇಕೆ ಸಾಲಗಳು ಕಿರಾಣಿ ಅಂಗಡಿ ಸಾಲಗಳು ತೀವ್ರ ಬಡವರ ಗೋಸ್ಕರ ರೂಪಿಸುತ್ತೇನೆ ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಹೇಳಿದರು*ಸಾರ್ವಜನಿಕರಿಂದ ಬಂದಂತಹ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಅವುಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು**ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಮುಖಂಡರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button