ಕಾಯಕದಲ್ಲಿ ತನ್ನನ್ನು ತಾನು ಅರಿತವರೇ ನಿಜವಾದ ಶರಣರು-ಗುರುಮಹಾಂತ ಶ್ರೀಗಳು.

ಹುನಗುಂದ ಸಪ್ಟೆಂಬರ್.16

ಕಾಯಕದಲ್ಲಿಯೇ ತನ್ನನ್ನು ತಾನು ಅರಿತುಕೊಂಡವರೇ ನಿಜವಾದ ಶರಣರು ಆ ಹಾದಿಯಲ್ಲಿ ನಡೆದು ತೋರಿಸಿದವರೇ ಗುದ್ಲಿ ಕಾಯಕಯೋಗಿ ಬಸವಪ್ಪ ಶರಣರಾಗಿದ್ದಾರೆ ಎಂದು ಚಿತ್ತರಗಿ ಸಂಸ್ಥಾನಮಠ ಇಳಕಲ್ಲದ ಗುರುಮಹಾಂತ ಶ್ರೀಗಳು ಹೇಳಿದರು.ಪಟ್ಟಣದ ಗದ್ಲಿ ಕಾಯಕಯೋಗಿ ಬಸವಪ್ಪ ಶರಣರ ಕತೃ ಗದ್ದಿಯಲ್ಲಿ ಶ್ರೀ ಬಸವಪ್ಪ ಹಾದಿಮನಿ ಶರಣ ತತ್ವ ದರ್ಶನ ಟ್ರಸ್ಟ್ ಮತ್ತು ತಾಲೂಕ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಡೆದ ೪೨ ನೆಯ ಗುದ್ಲಿ ಕಾಯಕಯೋಗಿ ಬಸವಪ್ಪ ಶರಣರ ಪುಣ್ಯ ಸ್ಮರಣೆ ಹಾಗೂ ದತ್ತಿ ಉಪನ್ಯಾಸ ಹಾಗೂ ಕೃಷಿ ಪ್ರಶಸ್ತಿ,೧೫ ನೆಯ ಮನೆ ಮನೆಗಳಿಗೆ ವಚನ ಸೌರಭ ಸಮಾರಂಭದ ದಿವ್ಯ ಸಾನಿಧ್ಯ ವಹಿಸಕೊಂಡು ಮಾತನಾಡಿದ ಅವರು ೧೨ ನೆಯ ಶತಮಾನದ ಬಸವಣ್ಣನಾದಿಯಾಗಿ ಎಲ್ಲ ಶಿವಶರಣರು ಹೇಳಿದ್ದಂತೆ ಕಾಯಕ ಮತ್ತು ಸಂಸಾರ ಒಟ್ಟೊಟ್ಟಿಗೆ ಸಾಗಿದಾಗ ಮಾತ್ರ ನಿಜವಾದ ಜೀವನದಲ್ಲಿ ಮುಕ್ತಿ ದೊರೆಯಲು ಸಾಧ್ಯ.ಬಸವತತ್ವ ನಿಷ್ಠೆಯುಳ್ಳ ಬಸವಪ್ಪ ಶರಣರು ನಿಷ್ಠೆಯ ಕಾಯಕ ಇಂದಿಗೂ ಅವರ ಸ್ಮರಣೆ ಮಾಡಿಕೊಳ್ಳುವಂತಾಗಿದೆ ಎಂದರು.ವಿಶ್ರಾAತಿ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿ ಪ್ರೋ.ಬಸವರಾಜ ಕಡ್ಡಿ ಮಾತನಾಡಿ ಶರಣ ಸಂಸ್ಕೃತಿ ಬೇಡಿ ತಿನ್ನುವ ಸಂಸ್ಕೃತಿಯಲ್ಲ ಅದು ದುಡಿದು ತಿನ್ನುವ ಸಂಸ್ಕೃತಿಯಾಗಿದೆ,ಸತ್ಯ ಶುದ್ದ ಮತ್ತು ನ್ಯಾಯ ಸಮ್ಮತ ಕಾಯಕವನ್ನು ತಿಳಿಸಿಕೊಟ್ಟ ಬಸವಣ್ಣನವರ ಹಾದಿಯಲ್ಲಿ ಗುದ್ಲಿ ಕಾಯಕಯೋಗಿ ಬಸವಪ್ಪ ಶರಣರು ನಡೆದರು.ಕಾಯಕದಲ್ಲಿ ಯಾವದೇ ಬೇಧಭಾವವಿಲ್ಲ. ಕಾಯಕದಲ್ಲಿ ದೇವರನ್ನು ಕಂಡ ಮಹಾನ ಶರಣರು.ಅದರ ಜತೆಗೆ ಸಮಾನತೆ,ಕಾಯಕ,ದಾಸೋಹ,ಸಮನ್ವಯತೆ,ವೈಚಾರಿಕತೆ ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ ಎಂದರು.ರಾಷ್ಟçಪ್ರಶಸ್ತಿ ಪುರಸ್ಕೃತರು ಹಾಗೂ ಜಾನಪ್ ಕಲಾವಿದೆ ಗುರಮ್ಮ ಸಂಕಿನಮಠ ಮಾತನಾಡಿ ಮಕ್ಕಳನ್ನು ಹೆರುವುದು ಮುಖ್ಯವಲ್ಲ ಮಕ್ಕಳಿಗೆ ಸಂಸ್ಕಾರ ಕೊಡುವುದು ಮುಖ್ಯ.ಇಂದಿನ ಮಹಿಳೆಯರು ಭಾರತದ ಸಂಸ್ಕೃತಿಯನ್ನು ಮರೆತು ತಪ್ಪು ಹಾದಿಯಲ್ಲಿ ನಡೆಯುತ್ತಿದ್ದು ಅವರು ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಭಾರತೀಯ ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ,ಮೋಬೈಲ್ ಬಂದ ಮೇಲೆ ಗಂಡ ಹೆಂಡತಿಯ ಸಂಬAಧಗಳು ಬಿರುಕು ಬಿಟ್ಟು ಅನೈತಿಕ ವ್ಯವಸ್ಥೆಯಲ್ಲಿ ನಡೆಯುತ್ತಿದ್ದಾರೆ ಅದರ ಜತೆ ಸಂಸ್ಕಾರ ಮತ್ತು ಸಂಸ್ಕೃತಿ ಕಣ್ಣಮರೆಯಾಗುತ್ತಿದೆ ಎಂದರು.ಬಸವಲಿAಗ ಶ್ರೀಗಳು ಸಾನಿಧ್ಯ ವಹಿಸಿಕೊಂಡು ಮಾತನಾಡಿ,ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಲಲಿತಾ ಹೊಸಪ್ಯಾಟಿ ಪ್ರಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಬದಾಮಿಯ ಶಿವಪ್ಪ ಕುರಿ ಅವರಿಗೆ ಕೃಷಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಇನ್ನು ಜಮಖಂಡಿಯ ಲಕ್ಷಿö್ಮÃಬಾಯಿ ಜುಲ್ಪಿ ಹಾಗೂ ಅಶೋಕ ತೋಟದ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ತಾಲೂಕ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ,ತಾಲೂಕ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಡಾ.ಶಿವಗಂಗಾ ರಂಜಣಗಿ,ಟ್ರಸ್ಟ್ ಕಾರ್ಯಾಧ್ಯಕ್ಷ ವ್ಹಿ.ಎಂ.ಹಾದಿಮನಿ ಸೇರಿದಂತೆ ಹಾದಮನಿ ಕುಟುಂಬ ಪರಿವಾರ ಉಪಸ್ಥಿತಿರಿದ್ದರು.ಪ್ರಭು ಮಾಲಗಿತ್ತಿಮಠ ಕಾರ್ಯಕ್ರಮ ನಿರೂಪಿಸಿದರು.ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎಸ್,ಎನ್,ಹಾದಿಮನಿ ವಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button