ಗೃಹ ಭಾಗ್ಯ ಯೋಜನೆಯ ಮನೆಗಳನ್ನು ಅತೀ ಶೀಘ್ರದಲ್ಲಿ ಕೊಡುತ್ತೇನೆ – ಪರಮೇಶ್.
ತರೀಕೆರೆ ಸಪ್ಟೆಂಬರ್.20
ಉತ್ತಮ ಗುಣಮಟ್ಟದಲ್ಲಿ ಪೌರ ಕಾರ್ಮಿಕರಿಗೆ ಗೃಹ ಭಾಗ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿ ಮಾಡಬೇಕು,ಎಂದು ಪುರಸಭಾ ಅಧ್ಯಕ್ಷರಾದ ಪರಮೇಶ್ ಹೇಳಿದರು. ಅವರು ಇಂದು ತರೀಕೆರೆ ಪಟ್ಟಣದ ಬಾಪೂಜಿ ಕಾಲೋನಿಯಲ್ಲಿ ನಿರ್ಮಾಣವಾಗುತ್ತಿರುವ 16 ಮನೆಗಳ ಕಾಮಗಾರಿ ವೀಕ್ಷಣೆ ಮಾಡಿ ಗುತ್ತಿಗೆದಾರರಾದ ಲೋಕೇಶ್ ರವರಿಗೂ ಹಾಗೂ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ ರವರಿಗೂ ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಲೋನಿಯ ನಿವೇಶನ ರಹಿತರಾದ ನೇತ್ರಮ್ಮ, ಸುಧಾ ಭಾಸ್ಕರ್, ಜಯಮ್ಮ, ಶುಭ, ಕವಿತ, ರುದ್ರಮ್ಮ, ರವರು ಪುರಸಭೆಯ ಅಧ್ಯಕ್ಷರು ಮತ್ತು ಮುಖ್ಯ ಅಧಿಕಾರಿ ಹಾಗೂ ವಾರ್ಡ್ ಸದಸ್ಯರಾದ ಪಾರ್ವತಮ್ಮ ತಿಮ್ಮಣ್ಣ ರವರಲ್ಲಿ ಮನವಿ ಮಾಡಿ ನಮಗೆಲ್ಲ ಮನೆ ನಿವೇಶನ ಕೊಡಿಸಿ ಕೊಡಬೇಕು ಎಂದು ಆಗ್ರಹಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ರಾಘವೇಂದ್ರ ಮಾತನಾಡಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 28 ಜನ ಫಲಾನುಭವಿಗಳನ್ನು ಗುರುತಿಸಿ ಸ್ಲಂ ಬೋರ್ಡ್ ನಿಂದ ಮನೆಗಳನ್ನು ಕಟ್ಟಿಸಿಕೊಡಲು ಮನವಿ ಮಾಡಿದ್ದೇವೆ,
ಈ ಕುರಿತು ಪುರಸಭಾ ಮುಖ್ಯ ಅಧಿಕಾರಿಗಳು ಅಧ್ಯಕ್ಷರು, ಸೂಕ್ತ ಕ್ರಮ ಕೈಗೊಂಡು ಮನೆ ನಿವೇಶನ ರಹಿತರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು. ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ರವರು ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯ ಮನೆಗಳನ್ನು ಪರಿಶೀಲನೆ ನಡೆಸಿ ವೀಕ್ಷಣೆ ಮಾಡಿ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸ ಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಅತಿ ಶೀಘ್ರದಲ್ಲಿಯೇ ಈ ಮನೆಗಳನ್ನು ಪೌರಕಾರ್ಮಿಕರಿಗೆ ಕೊಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷರಾದ ರಿಹನಾ ಪರ್ವೀನ್ ಸದಸ್ಯರಾದ ಪಾರ್ವತಮ್ಮ ತಿಮ್ಮಣ್ಣ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ