ಕೊಟ್ಟೂರಿನಲ್ಲಿ ಗಣೇಶನ ಮೂರ್ತಿ ವಿಸರ್ಜನೆ.

ಕೊಟ್ಟೂರು ಸಪ್ಟೆಂಬರ್.23

ಪಟ್ಟಣ ಸೇರಿದಂತೆ ತಾಲೂಕದ್ಯಾಂತ ಪ್ರತಿಯೊಂದು ಊರುಗಳಲ್ಲಿ ಗಣೇಶನ ವಿಸರ್ಜನೆಯ ಭವ್ಯ ಮೆರವಣಿಗೆ ಗುರುವಾರ ನಡೆಸಲಾಯಿತು.ಗೌರಿ ಗಣೇಶ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಗ್ರಾಮೀಣ ಪ್ರದೇಶದ ನಾನಾ ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ, ಗಣೇಶನನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಜನರ ಸಮ್ಮುಖದಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ಗುರುವಾರ ಸಂಜೆಯಿಂದ ಗಣೇಶನ ವಿಸರ್ಜನೆಗೆ ಕೊಂಡುಯ್ಯಲಾಯಿತು.ಮೆರವಣಿಗೆ ಆರಂಭವಾಗುತ್ತಿದ್ದಂತೆ ತಮಟೆಯ ಸದ್ದು ಮುಗಿಲು ಮುಟ್ಟಿದ್ದವು. ಅದಕ್ಕೆ ಪ್ರತಿಯಾಗಿ ಯುವ ಸಮೂಹ ಕೇಸರಿ ಬಾವುಟವನ್ನು ಹಿಡಿದು ತಮಟೆಯ ಸದ್ದಿಗೆ ಹುಚ್ಚೆದ್ದು ಕುಣಿದರು. ಗಣೇಶನ ವಿಸರ್ಜನೆಗೆ ಬನಶಂಕರಿ ದೇವಸ್ಥಾನದ ಪಕ್ಕದಲ್ಲಿರುವ ಬಾವಿಗೆ ವಿಸರ್ಜನೆ ಗೊಳಿಸಲಾಯಿತು. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗೆ ಅವಕಾಶಕ್ಕೆ ಎಡೆಯಾಗದಂತೆ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button