ಮೊಳಕಾಲ್ಮುರು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ತಂದೆ ತರ್ತೇನೆ ಎಂದ ಶಾಸಕರು.
ಮೊಳಕಾಲ್ಮೂರು ಸಪ್ಟೆಂಬರ್.24
![](https://i0.wp.com/sknewskannada.in/wp-content/uploads/2023/09/IMG-20230924-WA0023.jpg?resize=429%2C242&ssl=1)
ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಮೊಳಕಾಲ್ಮೂರು ಪಟ್ಟಣದಲ್ಲಿ ಶ್ರೀ ಮಹಾ ಗಣಪತಿ ಗಣೇಶನ ಆಶೀರ್ವಾದ ಪಡೆದು ಕ್ಷೇತ್ರದ ಜನ ಚೆನ್ನಾಗಿರಲಿ ಮಳೆ ಬೆಳೆ ಚೆನ್ನಾಗಿ ಆಗಲಿ ಇಂದು ದೇವರಲ್ಲಿ ಪ್ರಾರ್ಥಿಸುತ್ತಾ ಶಾಸಕರು ಆಶೀರ್ವಾದ ಪಡೆದರು ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪನೆ ಗೊಳಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಮಳೆ ಚೆನ್ನಾಗಿ ಆಗಲಿ ರೈತರು ಸುಖವಾಗಿರಲಿ ಇಡೀ ಕ್ಷೇತ್ರಾದ್ಯಂತ ಗದ್ದಲ ಗಲಾಟೆ ಇಲ್ಲದ ಹಾಗೂ ಒಂದು ಕುಟುಂಬದ ಹಾಗೆ ಬದುಕಬೇಕು ಮತ್ತು ಯಾವುದೇ ಗ್ರಾಮದಲ್ಲಿ ಸಾರ್ವಜನಿಕರಿಗೆ ಬೇಕಾಗುವಂತ ಯೋಜನೆ ಅಭಿವೃದ್ಧಿ ನನ್ನ ಹತ್ತಿರ ಬಂದು ಹೇಳಿದರೆ ಅದು ಅಂತಾ ಕೆಲಸವನ್ನು ಖಂಡಿತವಾಗಿ ನಾನು ರೂಪಿಸುತ್ತೇನೆ.
![](https://i0.wp.com/sknewskannada.in/wp-content/uploads/2023/09/IMG-20230924-WA0024.jpg?resize=418%2C205&ssl=1)
ಮತ್ತು ಮೊಳಕಾಲ್ಮೂರು ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ನನ್ನ ಆಶಯವಾಗಿರುತ್ತದೆ ಇಲ್ಲಿನ ಬರ ಮಳೆ ಬೇಸಾಯವಾಗಿರತಕ್ಕಂಥ ರೈತರ ಇದ್ದು ಇಂತಹ ಯೋಜನೆ ರೂಪಿಸಿದರೆ ಎಲ್ಲಾ ನಾಗರಿಕರಿಗೂ ರೈತರಿಗೂ ಮತ್ತು ಬಡವರಿಗೂ ಪ್ರಾಣಿ-ಪಕ್ಷಿ ದನ ಕರು ಮೇಕೆ ಪ್ರಕೃತಿ ಸಹ ಗಿಡ ಮರ ಇಂಥವುಕೆಲ್ಲ ಅನುಕೂಲವಾಗುತ್ತದೆ ಎಂದು ನೀರಾವರಿ ಯೋಜನೆ ರೂಪಿಸಬೇಕೆಂದು ಮಾನ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹತ್ತಿರ ಮಾತನಾಡಿದ್ದೇನೆ ಅವರು ಅದಕ್ಕೆ ಆಗಲಿ ಮಾಡಿಸಿ ಅಣ್ಣ ನಿಮಗೆಲ್ಲಾ ಸಪೋರ್ಟ್ ನಾವು ಇರುತ್ತೇವೆ ಎಂದು ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು