ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆ ಕುರಿತು ಚರ್ಚಿಸುವೆ – ಕೆ.ನೇಮಿರಾಜ್.ನಾಯ್ಕ್.
ಕೊಟ್ಟೂರು ಸಪ್ಟೆಂಬರ್.24

ಪಟ್ಟಣದ ಶ್ರೀ ಮರುಳುಸಿದ್ದೇಶ್ವರ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ವಿಜಯನಗರ ವತಿಯಿಂದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಇವರ 135ನೇ ಜಯಂತಿಯ ಅಂಗವಾಗಿ ಕೊಟ್ಟೂರು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು ಹಾಗೂ ಎನ್ ಪಿ ಎಸ್ ಸೇರಿದಂತೆ ಶಿಕ್ಷಕರ ಅನೇಕ ಸಮಸ್ಯೆಗಳ ಬಗ್ಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ 10 ಶಾಸಕರು ಸೇರಿ ಮಾತನಾಡುತ್ತೇವೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ತಿಳಿಸಿದರು. ಕೊಟ್ಟೂರು ಪಟ್ಟಣದಲ್ಲಿ ಗುರುಭವನ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಗಳ ಜೊತೆ ಚರ್ಚಿಸಿ ಶೀಘ್ರದಲ್ಲಿ ಒದಗಿಸಲು ಪ್ರಯತ್ನಿಸುತ್ತೇನೆ ಹಾಗೂ ಕೊಟ್ಟೂರಿನಲ್ಲಿ ತಾಲೂಕು ಮಟ್ಟದ ಕಚೇರಿಗಳ ನಿರ್ಮಾಣಕ್ಕೆ ಶ್ರಮಿಸುತ್ತೇನೆ ಎಂದು ತಿಳಿಸಿದರು.ನಂತರ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಮಾತನಾಡಿ ಕ್ಷೇತ್ರದ 201 ಶಾಲೆಗಳ ಅಭಿವೃದ್ಧಿಗೆ ಶಾಸಕರಾದ ನೇಮಿರಾಜ್ ನಾಯ್ಕ್ ಪಣತೊಟ್ಟಿದ್ದಾರೆ ಎಂದರು.

ಮತ್ತು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಮಹಾಬಲೇಶ್ವರಪ್ಪ ಉಪನ್ಯಾಸ ನೀಡಿ ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡಯುವುದೇ ಶಿಕ್ಷಣ ಈ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಜ್ಞಾನವನ್ನು ಪಡೆದು ಕೊಂಡಾಗ ಜ್ಞಾನದ ಮಹತ್ವ ಗೊತ್ತಾಗುತ್ತದೆ ಎಂದರು.ಸಂಸ್ಕಾರವನ್ನು ಕಲಿಸಿ ಭವ್ಯ ಭಾರತವನ್ನು ಕಟ್ಟುವುದು ಶಿಕ್ಷಕರ ಕೈಯಲ್ಲಿದೆ ಎಂದು ತಿಳಿಸಿದರು. ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಕೆ ಎಮ್ ಪ್ರಕಾಶ್ ಹಿಂದಿ ಶಿಕ್ಷಕರ ತಂದೆ ಶರಣಯ್ಯ ತಾಯಿ ಕೆ ಎಂ ಸುವರ್ಣಮ್ಮಇವರಿಗೆ ಶಾಸಕರು ಸನ್ಮಾನಿಸಿ ಸಾಂತ್ವಾನ ತಿಳಿಸಿದರು. ಈ ಸಂದರ್ಭದಲ್ಲಿ ರವಿಕುಮಾರ್ ವೈ ಕೆ ಕಾರ್ಯನಿರ್ವಾಹಕ ಅಧಿಕಾರಿಗಳು ಪದ್ಮನಾಭ ಕರಣಂ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಬೇವೂರು ಮಹೇಶ್ ಹಗರಿಬೊಮ್ಮನಹಳ್ಳಿ ಕ್ಷೇತ್ರದ ,ಜಯಪ್ಪ ನಿವೃತ್ತಿ , ಅಧ್ಯಕ್ಷರು ಪ್ರೌಢಶಾಲಾ ಶಿಕ್ಷಕರ ಸಂಘ,ಅಣಜಿ ಸಿದ್ದಲಿಂಗಪ್ಪ ತಾಲೂಕು ಶಿಕ್ಷಕರ ,ಮಂಜುನಾಥ್ ,ಬಸವರಾಜ್ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್. C ಕೊಟ್ಟೂರು