ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ 83.96. ಲಕ್ಷ ನಿವ್ವಳ ಲಾಭ – ಸಂಘದ ಸದಸ್ಯರ ಮಕ್ಕಳಿಗೆ ಸನ್ಮಾನ.
ಹುನಗುಂದ ಸಪ್ಟೆಂಬರ್. 24

ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಡಾವೆ ಪತ್ರಿಕೆಯಲ್ಲಿನ ಅಂಕಿ ಅಂಶಗಳಲ್ಲಿ 9 ಕೋಟಿ ವ್ಯತ್ಯಾಸದ ಲೋಪ ದೋಷವನ್ನು ಸಂಘದ ಸದಸ್ಯ ನೀಲಪ್ಪ ಮುಕ್ಕಣ್ಣನವರ ಸಭೆಯ ಗಮನ ಸೆಳೆದಾಗ ಸಂಘದ ಅಧ್ಯಕ್ಷ,ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಹಾಗೂ ಸಿಬ್ಬಂದಿಗಳು ಸೇರಿದಂತೆ ಸಭೆಯಲ್ಲಿನ ಗ್ರಾಹಕರು ಆಢಾವೆ ಪತ್ರಿಕೆ ಅಂಕಿ ಅಂಶಗಳನ್ನು ನೋಡಿ ದಂಗು ಬಡಿದು ಕೆಲಹೊತ್ತು ಗೊಂದಲಕ್ಕೀಡಾದ ಘಟನೆ ನಡೆಯಿತು.ರವಿವಾರ ಪಟ್ಟಣದ ಪುರಸಭೆ ಸಮುದಾಯ ಭವನದಲ್ಲಿ ನಡೆದ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ 21 ನೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಡಾಸವೆ ಪತ್ರಿಕೆಯಲ್ಲಿ ಅಂಕಿ ಸಂಖ್ಯೆಯಲ್ಲಿ ಅನೇಕ ಲೋಪಗಳಿವೆ ಇದಕ್ಕೆ ಜವಾಬ್ದಾರಿ ಯಾರು ? ಎನ್ನುವ ಪ್ರಶ್ನೆಗೆ ಕೆಲ ಸಮಯ ಸ್ಥಬ್ಧವಾಗಿದ್ದ ಆಡಳಿತ ಮಂಡಳಿ ನಂತರ ಸಂಘದ ನಿರ್ದೇಶಕ ಅರುಣೋದಯ ದುದ್ಗಿ ಇದು ಮುದ್ರಣ ದೋಷವಾಗಿದ್ದು ಇದ್ದನ್ನು ಸರಿಯಾಗಿ ಗಮನಿಸದೇ ಇರೋದು ಬ್ಯಾಂಕಿನ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ದೋಷವಾಗಿದೆ.ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.ಆದರೂ ಪಟ್ಟುಬಿಡದೇ ಸದಸ್ಯ ನೀಲಪ್ಪ ಮುಕ್ಕಣ್ಣನವರ ಈ ವಿಷಯದ ಕುರಿತು ಸಹಕಾರಿ ಸಂಘಗಳ ಉಪನಿಬಂಧಕರಿಗೆ ದೂರ ನೀಡಲಾಗುವುದು ಎಂದರು.

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಹೊಸೂರ ಮಾತನಾಡಿ ಸನ್-2೦೨22-23 ನೆಯ ಸಾಲಿನಲ್ಲಿ ಗ್ರಾಹಕರ ಸಹಕಾರ ಮತ್ತು ಸಿಬ್ಬಂದಿಗಳ ಪರಿಶ್ರಮ ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನದಿಂದ ಪ್ರಸಕ್ತ ವರ್ಷದಲ್ಲಿ 83,96,52೦ ರೂ ನಿವ್ವಳ ಲಾಭವನ್ನು ಗಳಿಸಲು ಸಾಧ್ಯವಾಗಿದೆ ಎಂದರು.ಮುಖ್ಯ ಕಾರ್ಯನಿರ್ವಾಹಕ ಶರಣು ಸಿ ಚಳಗೇರಿ ಸಂಘದ ವಾರ್ಷಿಕ ವರಿದಿಯನ್ನು ಮಂಡಿಸಿ ಮಾತನಾಡಿ ಬಸವೇಶ್ವರ ಪತ್ತಿನ ಸಹಕಾರಿ ಸಂಘ 12733 ಸದಸ್ಯರನ್ನು ಹೊಂದಿದ್ದು.3,65,54,6೦೦ ರೂ ಶೇರು ಬಂಡವಾಳ ಸಂಗ್ರಹವಾಗಿದೆ.81,೦3,62,455 ರೂ ಠೇವು ಸಂಗ್ರಹವಿದೆ.ಸಧ್ಯ 1,೦365,9183೦ ರೂ ದುಡಿಯುವ ಬಂಡವಾಳವನ್ನು ಹೊಂದಿದ್ದು ಪ್ರಸಕ್ತ ವರ್ಷದಲ್ಲಿ 83,96,52೦ ರೂ ನಿವ್ವಳ ಲಾಭವನ್ನು ಬಂದಿದೆ ಎಂದರು.ಈ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ರಾಮೇಶ ಮೂಲಿಮನಿ,ನಿರ್ದೇಶಕರಾದ ಹೊನ್ನಪ್ಪ ಗಂಜೀಹಾಳ,ಸಕಗಣ್ಣ ಹುನ್ನಳ್ಳಿ,ಸೋಮಶೇಖರ ತೋಟಗೇರ,ಮಹಾಂತೇಶ ಶಿವಪ್ಪಯ್ಯನಮಠ,ಸಂಗಪ್ಪ ಹೂಲಗೇರಿ,ಶಿವುಕುಮಾರ ಬಾದವಾಡಗಿ,ಅರಣೋದಯ ದುದ್ಗಿ,ಅನ್ನದಾನೇಶ್ವರ ಹಾದಿಮನಿ,ಹಿರೇಣ್ಯಪ್ಪ ಆಲೂರ,ಚಂದ್ರಪ್ಪ ತಳವಾರ,ಅನ್ನಪೂರ್ಣ ಹೊಸೂರ,ಶಾಂತಾ ಹಳಪೇಟಿ ಸೇರಿದಂತೆ ಸಂಘದ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ