ಸಾಲ ಬಾಧೆಯನ್ನು ತಾಳಲಾರದೆ ರೈತನೋರ್ವ ಆತ್ಮಹತ್ಯೆ.
ಹುನಗುಂದ ಸಪ್ಟೆಂಬರ್.26

ಮಳೆಯಿಲ್ಲದೇ ಜಮೀನನಲ್ಲಿ ಬೆಳೆಯು ಬಾರದೇ ಕೃಷಿಗಾಗಿ ಮಾಡಿದ ಲಕ್ಷಾಂತರ ರೂಪಾಯಿ ಸಾಲವನ್ನು ತೀರಸಲಾಗದೇ ಸಾಲ ಬಾಧೆಯಿಂದ ರೈತನೊರ್ವನು ಸೋಮವಾರ ನೇಣಿಗೆ ಶರಣಾದ ಘಟನೆ ಹುನಗುಂದ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಮೇಗಲಪೇಟಿಯ ನಿವಾಸಿ ಈರಪ್ಪ ಭರಮಪ್ಪ ಹೊಸೂರ (೬೨) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.ಮೃತರಿಗೆ ಪತ್ನಿ,ಮೂವರ ಹೆಣ್ಣುಮಕ್ಕಳು,ಒರ್ವ ಪುತ್ರ ಇದ್ದಾರೆ.ಘಟನೆಯ ವಿವರ-ಆತ್ಮಹತ್ಯೆಗೆ ಶರಣಾದ ರೈತ ಈರಪ್ಪ ಹೊಸೂರ ಕೃಷಿ ಸಾಗುವಳಿಗಾಗಿ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ೫೦ ಸಾವಿರ ಸಾಲವನ್ನು ಪಡೆದುಕೊಂಡಿದ್ದು.ಇನ್ನು ಮಗನ ಹೆಸರಿನಲ್ಲಿ ವಿಜಯ ಮಹಾಂತೇಶ ಬ್ಯಾಂಕಿನಲ್ಲಿ ೧೦ ಲಕ್ಷ ರೂ ಸಾಲ,ಇನ್ನು ಹೆಣ್ಣು ಮಕ್ಕಳ ಮದುವೆಗಾಗಿ ಬೇರೆ ಬೇರೆಯವರ ಕಡೆಯಿಂದ ೧೦ ಲಕ್ಷ ರೂ ಸಾಲ ಸೇರಿದಂತೆ ಒಟ್ಟು ೨೦ ರಿಂದ ೨೨ ಲಕ್ಷ ರೂ ಸಾಲವನ್ನು ಮಾಡಿದ್ದು ಭಾರಿ ಸಾಲದ ಬಾಧೆ ಹಾಗೂ ಸರಿಯಾಗಿ ಮಳೆಯಾಗದೇ ಬರಗಾಲ ಆವರಿಸಿದ್ದರಿಂದ ಯಾವದೇ ಬೆಳೆ ಬರದೇ ಇರೋದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸೋದು ಎಂದು ಮನ ನೊಂದುಕೊಕಡು ಸಾಲ ಬಾಧೆಯನ್ನು ತಾಳಲಾರದೇ ಸೋಮವಾರ ಹುನಗುಂದ ಸೀಮೆಯ ತಮ್ಮ ಜಮೀನನಲ್ಲಿರುವ ಬೇವಿನಮರಕ್ಕೆ ಹನಿನೀರಾವರಿ ಪೈಪಿನಿಂದ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು.ಸ್ಥಳಕ್ಕೆ ಹುನಗುಂದ ಠಾಣಿಯ ಪಿಎಸ್ಐ ಚನ್ನಯ್ಯ ದೇವೂರ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ