ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡಿ ನಿಮ್ಮ ಅನುಕೂಲಕ್ಕಲ್ಲ – ಡಿಸಿ. ಅಧಿಕಾರಿಗಳಿಗೆ ಲೆಫ್ಟ್ ರೈಟ್.
ಹುನಗುಂದ ಸಪ್ಟೆಂಬರ್.28

ಜನರ ಅನುಕೂಲವಾಗುವಂತೆ ಕೆಲಸ ಮಾಡಿ ನಿಮ್ಮ ಮನಸ್ಸಿಗೆ ಬಂದಂತೆ ಕೆಲಸ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅಧಿಕಾರಿಗಳಿಗೆ ಫುಲ್ ಲೆಫ್ಟ್ ರೈಟ್ ತಗೆದುಕೊಂಡ ಘಟನೆ ನಡೆಯಿತು.ಬುಧವಾರ ಪಟ್ಟಣದ ಅಂಬೇಡ್ಕರ್ ಕಾಲೋನಿಗೆ ಭೇಟಿ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿದ್ದ ಪುರಸಭೆ ಹಾಗೂ ಇತರೆ ಇಲಾಖೆಯ ಸಿಬ್ಬಂದಿಗಳಿಗೆ ಇರುವ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಿ ಅದನ್ನು ಬಿಟ್ಟು ಮುಂದಿನ ದಿನಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗವುದು ಎಂದು ಭರವಸೆ ನೀಡಬೇಡಿ.ನೀವುಗಳು ಕೈಗೊಂಡು ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಲಾಗುವುದು ಎಂದರು.ಸ್ಥಳೀಯ ನಿವಾಸಿಗಳಾದ ಶಾಂತಪ್ಪ ಮಸ್ಕಿ,ಗಂಗಾಧರ ಬದಾಮಿ,ನಿಂಗಪ್ಪ ಮಸ್ಕಿ,ತಿಮ್ಮಣ್ಣ ಬದಾಮಿ,ಮರುಳಸಿದ್ಧಪ್ಪ ಮಾದರ ಅವರು ಕಾಲೋನಿಯಲ್ಲಿನ ಚರಂಡಿ ದುರಸ್ಥಿಯಿಂದ ಸೊಳ್ಳೆಗಳ ಹಾವಳಿ ಜೊತಗೆ ಕ್ರಿಮಿಕೀಟಗಳು ಹೆಚ್ಚಾಗಿದ್ದರಿಂದ ಸಮಸ್ಯೆ ಅನುಭವಿಸುವಂತಾಗಿದೆ,ಮಹಿಳಾ ಶೌಚಾಲಯ,ಶುದ್ಧ ಕುಡಿಯುವ ನೀರಿನ ಘಟಕ, ದೇವಸ್ಥಾನ ಜೀರ್ಣೋದ್ಧಾರ,ದೋಬಿ ಘಾಟ್,ಸಮುದಾಯ ಭವನ ನಿರ್ಮಾಣ ಮಾಡುವುದರ ಜೊತಗೆ ಇನ್ನೀತರ ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಮಕ್ಕಳ ಹಾಜರಾತಿ ಪುಸ್ತಕ.ಆಹಾರ ವಿತರಣೆ ಸೇರಿದಂತೆ ಅಂಗನವಾಡಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅಂಗನವಾಡಿ ಶಿಕ್ಷಕಿಯಿಂದ ಮಾಹಿತಿ ಪಡೆದರು. ಮೊಬೈಲ್ ನಲ್ಲಿ ಯಾಕೆ? ಇಂದಿನ ಮಾಹಿತಿಯನ್ನು ಈ ವರಗೆ ಅಪ್ ಲೋಡ್ ಮಾಡಿಲ್ಲ ಎಂದು ಅಂಗನವಾಡಿ ಶಿಕ್ಷಕಿಯನ್ನು ಪ್ರಶ್ನಿಸಿದ ಘಟನೆ ನಡೆಯಿತು.ಆಹಾರ ಪುರೈಕೆಯಾಗದ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಅಂಗನವಾಡಿ ಶಿಕ್ಷಕಿ ತಿಳಿಸಿದರು.ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ,ತಹಶೀಲ್ದಾರ್ ನಿಂಗಪ್ಪ ಬಿರಾದಾರ,ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿ,ನಗರೋತ್ಥಾನ ಅಧಿಕಾರಿಗಳು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ