ಉಜ್ಜಿನಿ ಪೀಠಕ್ಕೆ ಕಾಶಿ ಶ್ರೀಶೈಲ ಜಗದ್ಗುರುಗಳನ್ನು ವೈಭವದ ಸ್ವಾಗತ.
ಕೊಟ್ಟೂರು ಸಪ್ಟೆಂಬರ್.28
![](https://i0.wp.com/sknewskannada.in/wp-content/uploads/2023/09/IMG-20230928-WA0067.jpg?resize=405%2C304&ssl=1)
ಉಜ್ಜಯಿನಿ ಪೀಠಕ್ಕೆ ಬುಧುವಾರ ಆಗಮಿಸಿದ ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ 1008 ಡಾ. ಚೆನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶಿ ಪೀಠದ ನೂತನ ಶ್ರೀ ಶ್ರೀ ಶ್ರೀ1008 ಜಗದ್ಗುರು ಡಾ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿ ಉಜ್ಜಿನಿ ಪೀಠಕ್ಕೆ ಆಗಮಿಸಿದಾಗ ಎಲ್ಲಾ ಸದ್ಭಕ್ತರು ಅತ್ಯಂತ ವೈಭವ ಪೂರಿತವಾಗಿ ಬರ ಮಾಡಿಕೊಂಡರು.ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳೊಂದಿಗೆ ಶ್ರೀ ಪೀಠದ ಕ್ಷೇತ್ರನಾಥ ಮರಳು ಸಿದ್ದಸ್ವಾಮಿ, ಹಾಗೂ ಶಕ್ತಿ ದೇವತೆ ಗೌರಿ ದೇವಿ, ಮಹಾ ತಪಸ್ವಿ ಸಿದ್ದಲಿಂಗ ಜಗದ್ಗುರುಗಳ ಕರ್ತೃ ಗದ್ದುಗೆ ಜಗದ್ಗುರು ಮಹಾ ಸನ್ನಿಧಿಯವರುಗಳು ಪೂಜೆ ಸಲ್ಲಿಸಿ, ನೆರೆದಂತಹ ಭಕ್ತರಿಗೆ ಆಶೀರ್ವಾದವನ್ನು ನೀಡಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು