“ಬಾಲ ಕಾರ್ಮಿಕರ ಟಾಸ್ಕ್ ಫೋರ್ಸ್ ಸಮಿತಿಯಿಂದ. ಅಂಗಡಿ ಗ್ಯಾರೇಜ್ ಹೋಟೆಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲು”.

ಕೊಟ್ಟೂರು ಸಪ್ಟೆಂಬರ್.29

ತಾಲ್ಲೂಕಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಿಜಯನಗರ ಜಿಲ್ಲೆಯ  ಶುಕ್ರವಾರ ರಂದು ತಾಲೂಕು ಮಟ್ಟದ ಬಾಲ ಕಾರ್ಮಿಕರ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಶುಕ್ರವಾರ ದಿನದಂದು ಕೊಟ್ಟೂರು ಪಟ್ಟಣದ ವಿವಿಧ ಸ್ಥಳಗಳಲ್ಲಿ ತಂಡದ ಮುಖಾಂತರ ಬಾಲ ಕಾರ್ಮಿಕರ ಆಕಸ್ಮಿಕ ದಾಳಿಯನ್ನು ನಡೆಸಿ ಮೂರು ಕಿಶೋರ ಕಾರ್ಮಿಕ ರಕ್ಷಣೆ ಮಾಡಿ ಮುಚ್ಚಳಿಕೆ ಪಡೆದುಕೊಂಡು ಪೋಷಕರಿಗೆ ಒಪ್ಪಿಸಿದ್ದು,ಈ ಸಂಬಂಧಪಟ್ಟ ಮಾಲೀಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ  ಎಫ್ಐಆರ್ ದಾಖಲಿಸಲಾಗುತ್ತದೆ.ತಂಡದಲ್ಲಿ  ತಹಶೀಲ್ದಾರರು ಶ್ರೀ ಅಮರೇಶ.ಜಿ.ಕೆ ಕಾರ್ಮಿಕ ಅಧಿಕಾರಿ ಶ್ರೀ ಸೂರ್ಯಪ್ಪ, ಕಾರ್ಮಿಕ ನಿರೀಕ್ಷಕರು ಚೇತನಕುಮಾರ್ ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲ ಕಾರ್ಮಿಕ ಯೋಜನೆಯ  ಸಿಬ್ಭಂದಿˌಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು , BCM ˌ BEO ಅಧಿಕಾರಿ ಹಾಗೂ ಸಂಬಂಧಿಸಿದ ಇತರೆ ಇಲಾಖೆ ಅಧಿಕಾರಿಗಳು ಭಾಗವಹಿಸಿರುತ್ತಾರೆ.ಎಂದು ಪತ್ರಿಕೆಗೆ ತಹಸಿಲ್ದಾರ್ ಅವರು ತಿಳಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button