ಪುರಾತನ ಕಾಲದ ಬಾವಿ ಸ್ವಚ್ಛತೆ.
ಕೆ.ಆಯ್ಯನಹಳ್ಳಿ ಕೊಟ್ಟೂರು.ಅಕ್ಟೋಬರ್.1

ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಪುರತನ ಕಾಲದಲ್ಲಿರುವ ಬಾವಿಯನ್ನು ನರೇಗಾ ಯೋಜನೆ ಸಹಾಯದೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಕೆ.ಅಯ್ಯನಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಮತ್ತು ನರೇಗಾದ ಕೂಲಿ ಕಾರ್ಮಿಕರು ಸೇರಿ ಸ್ವಚ್ಛಗೊಳಿಸಿದರು. ಹಳೆ ಕಾಲದ ಬಾವಿಯಾಗಿರುವುದರಿಂದ ಇದರಲ್ಲಿ ಸಾರ್ವಜನಿಕರು ಕಸಕಡ್ಡಿ ತಂದು ತುಂಬುತ್ತಿದ್ದರು ಹೀಗಾಗಿ ಇಲ್ಲಿ ಮಲೀನವಾಗಿತ್ತು.

ಆದರೆ ಈಗ ಸಾರ್ವಜನಿಕರ ಉಪಯೋಗಕ್ಕಾಗಿ ಈ ಬಾವಿಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಹಾಗೂ ಊರಿನ ಎಲ್ಲಾ ಮಹಿಳೆಯರು ಗಂಗೆ ಪೂಜೆ ಮಾಡಲು ಸಹಾಯವಾಗುತ್ತದೆ ಎಂದು ಈ ಪುರಾತನ ಕಾಲದ ಬಾವಿಯನ್ನು ಸ್ವಚ್ಛಗೊಳಿಸಿ ನೀರು ಬೀಡುವ ಕಾರ್ಯಕ್ರಮವನ್ನು ನಡೆಸಲಿದ್ದೇವೆ ಎಂದು ಬಿ ಎಂ ಕರಬಸಯ್ಯ ಸಿದ್ದಲಿಂಗಯ್ಯ ಸ್ವಾಮಿ ಕೆ ಪರಸಪ್ಪ ಅ. ಗುರುವಯ್ಯ ಇವರು ಸಾಮಾಜಿಕ ಕಳಕಳಿಯಿಂದ ಗ್ರಾಮ ಪಂಚಾಯಿತಿಗೆ ಒತ್ತಾಯ ಮಾಡಿ ಕೆಲಸವನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಇದಕ್ಕೆ ಅಧಿಕಾರಿಗಳು ಸಹ ಮತದೊಂದಿಗೆ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ನೆನೆಯುತ್ತಾ ಕಾರ್ಯನಿರ್ವಹಿಸಿ ಯಶಸ್ವಿ ಮಾಡಲು ಮುಂದಾಗಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು