ಬಲರಾಮನ ಜಯಂತಿಯಲ್ಲಿ ರೈತರ ಕುರಿತು ಸಾವಯವ ಕೃಷಿಯಿಂದ ಸ್ವಾವಲಂಬಿಗಳಾಗಿ – ಕೆ. ಸುಭಾಷ್ ಚಂದ್ರ.

ಕೂಡ್ಲಿಗಿ ಅಕ್ಟೋಬರ್.2

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ಮಾಳೆಹಳ್ಳಿಯಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಶ್ರೀ ಬಲರಾಮ ಜಯಂತಿ ಕಾರ್ಯಕ್ರಮ ಜರುಗಿತು. ಈ ಕಾರ್ಯ ಕ್ರಮದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಕೆ ಸುಭಾಷ್ ಚಂದ್ರ. ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್. ಭಾರತೀಯ ಕಿಸಾನ್ ಸಂಘದ ಗ್ರಾಮ ಘಟಕದ ಅಧ್ಯಕ್ಷ ಬಸವರಾಜ್. ಚಳ್ಳಕೆರೆ ತಾಲೂಕ ಅಧ್ಯಕ್ಷರಾದ ಏಕಾಂತಪ್ಪ ಇವರು ಗೋಮಾತೆಗೆ ಗೋಗ್ರಾಸ ಕೊಡುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಲಾಯಿತು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಕೆ ಸುಭಾಷ್ ಚಂದ್ರ ಉದ್ಘಾಟಿಸಿ ಮಾತನಾಡಿ ರೈತರು ಸ್ವಾವಲಂಬಿ ಯಾಗಿರಬೇಕು ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಮೌಲ್ಯ ರೈತರಿಗೆ ದೊರೆಯಬೇಕು. ಜೊತೆಗೆ ಗೋಮಾತೆಯನ್ನು ಸಂರಕ್ಷಿಸುವ ಕೆಲಸ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ರೈತರು ಬೆಳೆದ ಬೆಳೆಯನ್ನು ಸಂಸ್ಕರಣೆ ಮಾಡಿ ಕೊಳ್ಳುವುದರ ಮೂಲಕ ಬೆಳೆದ ಬೀಜಗಳನ್ನು ತಾವೇ ಉತ್ಪಾದನೆ ಮಾಡಿ ಕೊಂಡು ಮತ್ತೊಮ್ಮೆ ಬೆಳೆದರೆ ರೈತರಿಗೆ ಲಾಭ ದಾಯಕವಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ಏಕಾಂತಪ್ಪ ಮಾತನಾಡಿ ರೈತರು ತೋಟಗಾರಿಕೆ ಮತ್ತು ಕೃಷಿ ಇಲಾಖೆಯಲ್ಲಿ ಬರುವ ಬೀಜ. ಕೃಷಿ ಯಂತ್ರೋಪ ಕರಣಗಳು. ಸರ್ಕಾರ ಸಬ್ಸಿಡಿ ರೂಪದಲ್ಲಿ ಕೊಡುವುದನ್ನು ರೈತರುಗಳಾದ ನಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ರೈತರುಗಳು ಸಾವಯವ ಬೆಳೆಗಳನ್ನು ಮತ್ತು ಸಿರಿ ಧಾನ್ಯಗಳು ಬೆಳೆಗೆ ಒತ್ತು ನೀಡಬೇಕು ಎಂದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ. ಸಾವಯುವ ಕೃಷಿಕರಾದ ವಿಶ್ವೇಶ್ವರ ಸಜ್ಜನ್ ಮಾತನಾಡಿ ರೈತರು ಕಾಡು ಕೃಷಿ ಮಾಡುವುದರ ಮೂಲಕ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿ ಬೆಳೆಗಳನ್ನು ಬೆಳೆಯಬೇಕು ಜೊತೆಗೆ. ಕಾಡು ಜಾತಿ ಗಿಡಗಳನ್ನು ಬೆಳೆಸುವುದರ ಮೂಲಕ ನೇರಳೆ. ಸೀತಾಫಲ. ರಾಮ ಸೀತಾ ಫಲ. ಲಕ್ಷ್ಮಣ ಸೀತಾಫಲ. ಜಂಬು ನೇರಳೆ. ಬೆಳ್ಳೆಹಣ್ಣು. ಸೇರಿದಂತೆ ಅನೇಕ ಮರ ಖುಷಿ ಮಾಡುವುದರಿಂದ ರೈತರ ಆದಾಯ ದ್ವಿಗುಣವಾಗುತ್ತದೆ. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್. ಕಲ್ಲಳ್ಳಿ ಬಸವರಾಜು. ಹುಲಿಕೆರೆ ರಮೇಶ್ ಬಾಬು. ಮಹೇಶ್.ಮಲ್ಲೇಶಪ್ಪ. ಪೂಜಾರಿ ತಿಪ್ಪೇಸ್ವಾಮಿ ಸೇರಿದಂತೆ ಮಾಳೆಹಳ್ಳಿ ಕಲ್ಲಳ್ಳಿ ಪೂಜಾರಿ ಸೇರಿದಂತೆ ಅನೇಕ ಗ್ರಾಮ ಘಟಕಗಳ ಪದಾಧಿಕಾರಿಗಳು ಗ್ರಾಮದ ಮುಖಂಡರು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button