ಹಣ ಕೊಡದೇ ಜಾಮೀನು ಸರ್ವೇ ಸಾಧ್ಯವೇ ಇಲ್ಲವಂತೆ?- ರೈತರ ಆರೋಪ.
ಕೊಟ್ಟೂರು ಅಕ್ಟೋಬರ್.3
![](https://i0.wp.com/sknewskannada.in/wp-content/uploads/2023/10/IMG-20230925-WA0036.jpg?resize=422%2C229&ssl=1)
ತಾಲೂಕ ಕಛೇರಿಯ ಭೂ ದಾಖಲೆಗಳ ಇಲಾಖೆಗೆ ಲಂಚ ಕೊಡದೇ ಜಮೀನುಗಳ ಸರ್ವೇಗಳೇ ಮಾಡುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ರೈತರು ತಮ್ಮ ಜಮೀನುಗಳ ಹದ್ದು ಬಸ್ತು, ಸರ್ವೆ, ಇತರೆ ಭೂ ಸರ್ವೇ ಮಾಡಲು ಭೂ ಮಾಪಕರು ರೈತರಿಗೆ ಲಂಚದ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಅವರಿಗೆ ಲಂಚ ಕೊಡದೇ ಇದ್ದರೆ ಸುಖಾ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ಹಣ ಕೊಟ್ಟರೆ ತಕ್ಷಣವೇ ಬಂದು ಕೆಲಸ ಮಾಡಿ ಕೊಡುತ್ತಾರೆ. ಹಣ ಕೊಡಲು ಸಾಧ್ಯವಾಗದವರು ಭೂಮಿ ಸರ್ವೇ ಮಾಡಿಸಲು ಹೆಣಗಾಡುತ್ತಿದ್ದಾರೆ. ಕಛೇರಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಸರ್ಕಾರದಿಂದ ಸಂಬಳ ಪಡೆಯುವ ಅಧಿಕಾರಿಗಳು ಈ ರೀತಿಯಾಗಿ ರೈತರಿಗೆ ಹಿಂಸೆ ಕೊಟ್ಟರೆ ಯಾರ ಹತ್ತಿರ ತಮ್ಮ ಕಷ್ಟವನ್ನು ಹೇಳುವುದು. ಭೂ ದಾಖಲೆಗಳ ಇಲಾಖೆ ನೋಡಿ ಕೊಂಡೂ ಸುಮ್ಮನೆ ಇರುವುದನ್ನು ನೋಡಿದರೆ ಇಲಾಖೆಯ ಮೇಲಾಧಿಕಾರಿಗಳ ಸಹಕಾರವೂ ಇದೆ ಎನ್ನುವುದು ರೈತರ ಆರೋಪ..! ರೈತರು ಲಂಚದ ಹಣವನ್ನು ಫೋನ್ ಪೇ ಮೂಲಕ ಕೊಡುತ್ತೇವೆ ಎಂದರೆ ಸುತಾರಾಂ ಒಪ್ಪದೇ ನಗದು ಹಣವೇ ಬೇಕು ಎಂದು ಕೇಳುತ್ತಾರೆ.! ಸರ್ಕಾರಕ್ಕೆ ಭರಿಸಬೇಕಾದ ಶುಲ್ಕ ಕಟ್ಟಿದರೂ ಇವರಿಗೆ ಹಣ ಕೊಡಲೇ ಬೇಕು. ನಕ್ಷೆಗಾಗಿ ಅರ್ಜಿ ಹಾಕಿದರೆ, ಹೋಗಿ ಕೇಳುವವರೆಗೂ ಆ ನಕ್ಷೆ ಹಾಗೇ ಧೂಳೀಡಿದು ಬಿದ್ದಿರುತ್ತದೆಯೇ ವಿನಾಃ ಹಣ ಕೊಡುವವರೆಗೂ ಆ ಕೆಲಸ ಆಗುವುದಿಲ್ಲ ಎಂದು ರೈತರು ಎಂ.ಶ್ರೀನಿವಾಸ್, ಮರುಳುಸಿದ್ದಪ್ಪ , ಜಿ ಮಲ್ಲಿಕಾರ್ಜುನ್,ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೋಟ್ -1ಸರ್ವೇ ಇಲಾಖೆಯ ಭೂ ಮಾಪಕರಿಗೆ ಇನಾಮು ಕೊಡದೇ ಇದ್ದರೆ ನಮ್ಮ ಕೆಲಸಗಳು ನಡೆಯುವುದೇ ಇಲ್ಲ. ಹಣ ಕೊಟ್ಟರೆ ಮಾತ್ರ ಸಲೀಸಾಗಿ ಕೆಲಸ ಮಾಡಿಕೊಡುತ್ತಾರೆ. ಇಲ್ಲವಾದರೆ ಇಂದು ನಾಳೆ ಎಂದು ಸತಾಯಿಸುತ್ತಿದ್ದಾರೆ. ರೈತರ ಸಂಕಷ್ಟವನ್ನು ಮೇಲಾಧಿಕಾರಿಗಳು ಗಮನ ಹರಿಸಬೇಕು.ಎಂದು ಆರೋಪ ಮಾಡಿದರು .ಸೋಮಶೇಖರ, ಅಂಬಳಿಕೋಟ್ -2ತಾಲ್ಲೂಕು ಆಡಳಿತದಲ್ಲಿ ಸರ್ವೇ ಇಲಾಖೆಯೊಂದೇ ಅಲ್ಲ, ಕಂದಾಯ ಇಲಾಖೆಯ ಎಲ್ಲಾ ಕೆಲಸಗಳಲ್ಲಿ ಇದೇ ರೀತಿಯಿದೆ. ಸಂಘ ಸಂಸ್ಥೆಗಳು ಮನವಿ ಅರ್ಜಿಗಳು ಕೊಟ್ಟು ತಿಂಗಳುಗಳು ಕಳೆದರೂ ಆ ಮನವಿ ಹಾಗೇ ಇಲ್ಲೇ ಬಿದ್ದಿರುತ್ತದೆಯೇ ವಿನಾಃ ಮೇಲಾಧಿಕಾರಿಗಳ ಗಮನಕ್ಕೆ ಹೋಗುವುದೇ ಇಲ್ಲ ಎಂದು ಆರೋಪಿಸಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು