ಬಾಳಿಗೊಂದು ಸ್ಪೂರ್ತಿ ಮಾತು.

• ಬದುಕಿನಲ್ಲಿ ಬಾಳೆಗೊನೆಯ ಹಾಗೆ ಒಗ್ಗಟ್ಟಿರ

ದಾಳಿಂಬೆಯ ಬೀಜಗಳಂತೆ ಕೂಡಿ ಬಾಳೋಣ

ಜೇನಿನ ಗೂಡಿನಂತೆ ಒಂದೇ ಕಡೆ ಇರೋಣ

ಒಂದೇ ಮರದ ಹೂ ಹಣ್ಣುಗಳಂತೆ

ಜೊತೆಯಾಗಿರೋಣ.

• ಕಷ್ಟ ಬಂದಾಗ ನೆನಪಾಗುವ

ದೇವರು,ಮತ್ತೊಬ್ಬರಿಗೆ ಮೋಸ ವಂಚನೆ

ಮಾಡುವಾಗ ಕೂಡ ನೆನಪಾಗಲಿ

.• ಅಕ್ಷರಗಳು ತಪ್ಪಾದಾಗ ತಿದ್ದಿ ಮತ್ತೆ ಸರಿಯಾಗಿ

ಬರೆಯುವ ನಾವು, ಬದುಕು ತಪ್ಪಾದಾಗ ಕೂಡ

ತಿದ್ದಿಕೊಂಡು ಸರಿಯಾದ ಮಾರ್ಗದಿ

ಮುನ್ನಡೆಯಬೇಕೆ ವಿನಹ, ತಪ್ಪಾದ ಬದುಕಿನ

ಬಗ್ಗೆ ಚಿಂತಿಸುತ್ತಾ ಸಮಯ ವ್ಯರ್ಥ

ಮಾಡಬಾರದು.•

ಮತ್ತೊಬ್ಬರು ಕಷ್ಟದಲ್ಲಿದ್ದಾಗ ಸಹಾಯ

ಮಾಡದಿದ್ದರೂ ಪರವಾಗಿಲ್ಲ, ಸಾಂತ್ವಾನದ

ಮಾತನ್ನಾದರೂ ಹೇಳಿ.

ನಮ್ಮ ಧೈರ್ಯದ ಸಾಂತ್ವನದ ಮಾತು ಅವರ

ನೊಂದ ಬದುಕಿಗೆ ಸಂಜೀವಿನಿ ಇದ್ದಾಗೆ.•

ನಾನೇ ಶ್ರೇಷ್ಠನೆಂಬ ದುರಹಂಕಾರ

ನನ್ನಿಂದಲೇ ಎಲ್ಲಾ ಎಂಬ ಅಹಂಕಾರ.

ಇವೆರಡು ಮನುಷ್ಯನನ್ನು ಆದಷ್ಟು ಬೇಗ

ಮಣ್ಣಾಗಿಸುತ್ತವೆ. ಅಹಂಕಾರ ದುರಂಕಾರಗಳ

ಮಧ್ಯೆ ಪ್ರೀತಿ ಮಮಕಾರ ಮೂಡಲಿ

ಶ್ರೀ ಮುತ್ತು.ಯ.ವಡ್ಡರ

( ಶಿಕ್ಷಕರು, ಹಿರೇಮಾಗಿ)

ಬಾಗಲಕೋಟ

Mob-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button