ದಸರಾ ಕಲಾ ಶಿಬಿರಕ್ಕೆ ಸರೋದೆ ಆಯ್ಕೆ.
ಹುನಗುಂದ ಅಕ್ಟೋಬರ್.7
ಪಟ್ಟಣದ ಆದರ್ಶ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ಹಾಗೂ ಪ್ರಸಿದ್ಧ ರಾಷ್ಟ್ತ್ರೀಯ ಚಿತ್ರ ಕಲಾವಿದ ಚಂದ್ರಕಾಂತ ಸರೋದೆ ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಕಲಾ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಶಿಬಿರ ಅ.12 ರಿಂದ 15 ರ ವರೆಗೆ ಮೈಸೂರಿನಲ್ಲಿ ನಡೆಯುವುದು. ಇವರನ್ನು ಎಸ್ಡಿಎಂಸಿ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ, ಉಪಾಧ್ಯಕ್ಷ ಬಸು ರಕ್ಕಸಗಿ, ಸದಸ್ಯರು, ಮುಖ್ಯ ಅಧ್ಯಾಪಕರು ಎಸ್.ಜಿ.ಕಡಿವಾಲ ಹಾಗೂ ಗುರು ವೃಂದ್ದದವರು ಅಭಿನಂದಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡಂರಗಲ್ಲ ಹುನಗುಂದ