ಶೌರ್ಯ ಜಾಗರಣ ರಥ ಯಾತ್ರೆಗೆ ಅದ್ದೂರಿ ಸ್ವಾಗತ ಮತ್ತು ಮೆರವಣಿಗೆ.

ಹುನಗುಂದ ಅಕ್ಟೋಬರ್.7

ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗದಳ ಹಮ್ಮಿಕೊಂಡ ಶೌರ್ಯ ಜಾಗರಣೆ ರಥ ಯಾತ್ರೆ ಹುನಗುಂದ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಪಟ್ಟಣದ ಹಿಂದೂ ಜಾಗರಣೆ ವೇದಿಕೆ ಮತ್ತು ಬಜರಂಗದಳದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.ಪಟ್ಟಣದ ಪುರಸಭೆಗೆ ರಥ ಯಾತ್ರೆ ಆಗಮಿಸುತ್ತಿದ್ದಂತೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಪಟ್ಟಣದ ಚನ್ನಮ ಸರ್ಕಲ್,ವಿ.ಮ.ವೃತ್ತ,ಬಸ್ ನಿಲ್ದಾಣ ಮಾರ್ಗವಾಗಿ ಮೆರವಣೆಗೆ ನಡೆಸಿ ನಂತರ ಇಳಕಲ್ಲ ತಾಲೂಕಿಗೆ ಬೀಳ್ಕೊಟ್ಟರು.ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಚೂರಿ,ಅಪ್ಪು ಅಲೂರ,ಲಕ್ಷ್ಮಣ ಗಾಯಕವಾಡ,ವೀರೇಶ ಬಂಡಿ,ಸಂತೋಷ ಬಡಿಗೇರ,ಪ್ರಶಾಂತ ಐಹೊಳೆ,ಮುತ್ತು ಪಾಟೀಲ,ಮಲ್ಲು ಗಂಧದ,ಮಲ್ಲಪ್ಪ ಕುಂಬಾರ,ರಮೇಶ ಗೋವಿನಗಿಡದ,ಜಗದೀಶ ದಾದ್ಮಿ,ಕೆಂಚಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡಂರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button