ಪೋಲಿಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆ ಸಭೆ.

ತರೀಕೆರೆ ಅಕ್ಟೋಬರ್.8

ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರ ಸಭೆಯನ್ನು ಪೊಲೀಸು ನಿರೀಕ್ಷಕರಾದ ವೀರೇಂದ್ರ ರವರು ನಡೆಸಿದರು ಈ ಸಭೆಯಲ್ಲಿ ಭಾಗವಹಿಸಿದ್ದ ಕ ದ ಸಂ ಸ,ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಎಸ್ಸಿ,ಎಸ್‌ಟಿ. ಕಾಲೋನಿಗಳಲ್ಲಿ ಕಾನೂನು ಅರಿವು ಮತ್ತು ಜಾಗೃತಿ ಸಭೆಯನ್ನು ನಡೆಸಬೇಕು, ಯುವಕರು ದಾರಿ ತಪ್ಪದಂತೆ ತಿಳುವಳಿಕೆ ಹೇಳಬೇಕು ಎಂದು ಹೇಳಿದರು. ಛಲುವಾದಿ ಸಂಘದ ಅಧ್ಯಕ್ಷ ಎಸ್ ಕೆ ಸ್ವಾಮಿ ಮಾತನಾಡಿ ಪಟ್ಟಣದ ಸುಂದರೇಶ್ ಬಡಾವಣೆಯಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ನಡೆಯುತ್ತಿದೆ ಅಂತವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪೋಲೀಸ್ ಇಲಾಖೆಯವರು ಹಾಸ್ಟೇಲ್ ಗಳಿಗೆ ಭೇಟಿ ನೀಡಬೇಕು ಎಂದು ಹೇಳಿದರು. ಮಾಹಿತಿ ಹಕ್ಕು ಕಾರ್ಯಕರ್ತರಾದ ಓಂಕಾರಪ್ಪ ಮಾತನಾಡಿ ನೇರಲಕೆರೆ ಸರ್ಕಾರಿ ಶಾಲಾ ಆವರಣದಲ್ಲಿ ಸಂಜೆ ಸಮಯ ಕೆಲವರು ಮಧ್ಯ ಸೇವನೆ ಮಾಡುತ್ತಾರೆ ಎಂದು ಹೇಳಿದರು. ಹಾದಿಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜು ಮಾತನಾಡಿ ಎಂ ಸಿ ಹಳ್ಳಿಯಲ್ಲಿ ಅಕ್ರಮ ಮಧ್ಯ ಮಾರಾಟ ದಂಧೆ ನಡೆಯುತ್ತಿದೆ ಎಂದು ಹೇಳಿದರು. ಬಾಲರಾಜು ಮಾತನಾಡಿ ಅಟ್ರಾಸಿಟಿ ಕೇಸುಗಳನ್ನು ಹಾಕಿದಾಗ ದಲಿತರ ಮೇಲೆ ಸುಳ್ಳು ಕೌಂಟರ್ ಕೇಸುಗಳು ದಾಖಲಾಗುತ್ತಿದೆ ಇದರಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ಕ ದ ಸಂ ಸ ತಾಲೂಕು ಸಂಚಾಲಕರಾದ ಎನ್ಎಚ್ ಬಸವರಾಜ್, ಸಂಘಟನಾ ಸಂಚಾಲಕರಾದ ಎನ್ ಸಿದ್ದಪ್ಪ, ಬಿ ಕೃಷ್ಣ ನಾಯ್ಕ, ಜಿ ಟಿ ರಮೇಶ, ಮಾದಿಗ ಮಹಾಸಭಾದ ತಾಲೂಕು ಅಧ್ಯಕ್ಷರಾದ ಕೆ ಚಂದ್ರಪ್ಪ, ದೋರನಾಳ್ ಸುನಿಲ್, ಶರತ್, ಎಸ್ ಎನ್ ಸಿದ್ದರಾಮಯ್ಯಪ್ಪ, ಬಿ ಎನ್ ನಾಗರಾಜ್, ಮುಂತಾದ ದಲಿತ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button