ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡುವಂತೆ ಆರ್.ಪಿ.ಐ(ಅ) ಕಾರ್ಯಕರ್ತರಿಂದ ಮನವಿ.
ಇಂಡಿ ಅಕ್ಟೋಬರ್.9

ತಾಲೂಕಿನ ಕೊನೆಯ ಗ್ರಾಮವಾದ ತೆಗ್ಗಿ ಹಳ್ಳಿ ಗ್ರಾಮಕ್ಕೆ ಹಲವಾರು ವಷ೯ಗಳಿಂದ ಬಸ್ಸಿನ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ.ಈ ಗ್ರಾಮದಿಂದ ವಿದ್ಯಾರ್ಥಿಗಳು ಬೇರೆ ಗ್ರಾಮದ,ತಾಲೂಕಿಗೆ ಹೋಗಿ ಶಿಕ್ಷಣ ಕಲಿಯಲಿಕ್ಕೆ ಬಸ್ಸಿನ ಅವ್ಯವಸ್ಥೆಯೇ ಕಾರಣ.ಆದ ಕಾರಣ ಇಂದು ಅನೇಕ ವಿದ್ಯಾರ್ಥಿಗಳು,ಪಾಲಕರು ಸೇರಿಕೊಂಡು ತಾಲೂಕಿಗೆ ಆಗಮಿಸಿ, ಮಾನ್ಯ ವ್ಯವಸ್ಥಾಪಕರು ಬಸ್.ಡಿಪೋ ಇಂಡಿ ಇವರಿಗೆ ಮನವಿಯನ್ನು ಸಲ್ಲಿಸಿದರು.

ಈ ಮನವಿ ಮುಖಾಂತರ ಇನ್ನು ಮುಂದೆ ಸರಿಯಾದ ಸಮಯಕ್ಕೆ ಸರಿಯಾಗಿ ತೆಗ್ಗಿ ಹಳ್ಳಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು.ವಿದ್ಯಾಥಿ೯ಗಳಿಗೆ ಗ್ರಾಮಸ್ಥರಿಗೆ ಅನುಕೂಲ ಮಾಡಬೇಕು.ಒಂದು ವೇಳೆ ಬಸ್ಸಿನ ಅನಾನುಕೂಲವಾದರೆ ತಾಲೂಕಾ ಬಸ್ ನಿಲ್ದಾಣದ ಎದುರು ಪ್ರತಿಭಟನೆಯ ದಾರಿ ಹಿಡಿಯಬೇಕಾಗುತ್ತದೆ ಎಂದು -ಆರ್.ಪಿ.ಐ.(ಅ) ತಾಲೂಕಾಧ್ಯಕ್ಷ ಶ್ರೀ ನಾಗೇಶ ತಳಕೇರಿಯವರು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಯುವ ಆರ್.ಪಿ.ಐ.(ಅ)ನಾಯಕರಾದ ಬಾಬು ಕಾಂಬಳೆ.ಲಕ್ಕಪ್ಪ ಲಚ್ಚ್ಯಾಣ.ಮಾಳು ಪೂಜಾರಿ .ಗೌತಮ ಬನಸೋಡೆ.ಸಂಜು ಯರಳ್ಳಿ.ವಿಶಾಲ ಮೇಲಿನಮನಿ.ಚೇತನ ಬಗಲಿ.ಸುಧಾಕರ ಜಾಧವ.ನವೀನ ದಶವಂತ ಇತರರು ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ