ಇಂಡಿ to ಧರ್ಮಸ್ಥಳ ನೂತನ ಬಸ್ ಗೆ ಚಾಲನೆ ನೀಡಿದ ಶಾಸಕರು.
ಇಂಡಿ ಅಕ್ಟೋಬರ್.9

ಜನತೆಯ ಬಹು ದಿನಗಳ ಆಸೆಯಂತೆ ನಮ್ಮ ನಾಡಿನ ಐತಿಹಾಸಿಕ ಧಾರ್ಮಿಕ ಸುಕ್ಷೇತ್ರ ಧರ್ಮಸ್ಥಳಕ್ಕೆ ಇಂಡಿಯಿಂದ ನೂತನ ಬಸ್ಗೆ ಶಾಸಕ ಯಶವಂತರಾಯಗೌಡ ಪಾಟೀಲ ಹಸಿರು ನಿಶಾನೆ ತೋರಿಸಿದರು ಸದರಿ ಬಸ್ ಮಧ್ಯಾಹ್ನ 2 ಗಂಟೆಗೆ ಇಂಡಿಯಿಂದ ಹೊರಟು ಮರುದಿನ ಬೆಳಗ್ಗೆ 9 ಗಂಟೆಗೆ ಧಮ೯ಸ್ಥಳ ತಲುಪುವದು .ಅಲ್ಲಿಂದ ಮಧ್ಯಾಹ್ನ 2.30 ಗಂಟೆಗೆ ಬಿಟ್ಟ ನಂತರ ಮರುದಿನ ಬೆಳಗ್ಗೆ 8ಗಂಟೆಗೆ ಇಂಡಿಗೆ ತಲುಪುವುದು ಎಂದು , ಡಿ.ಟಿ.ಓ ಡಿ.ಎ. ಬಿರಾದಾರ ತಿಳಿಸಿದರು. ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರಾದ ಸಂಗನಗೌಡ ಬಿರಾದಾರ, ಜಾವವೀದ ಮೋಮಿನ್, ಭೀಮುಅಣ್ಣಾ ಕೌಲಗಿ, ಸುಭಾಶ ಬಾಬರ, ಪ್ರಶಾಂತ ಕಾಳೆ, ಶಿವಯೋಗಪ್ಪ ಜ್ಯೋತಗೊಂಡ, ಜೀತಪ್ಪ ಕಲ್ಯಾಣ, ಹಲವಾರು ಮುಖಂಡರು ಹಾಗೂ ನಿಂಗಪ್ಪ ಕೌಲಗಿ ವಾಹನ ಚಾಲಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ