ಪ್ಲಾಸ್ಟಿಕ್ ಮುಕ್ತ ರಾಜ್ಯ ಮಾಡಲು ಜನರ ಸಹಕಾರ ಬೇಕು – ಪರಮೇಶ್.

ತರೀಕೆರೆ ಅಕ್ಟೋಬರ್.12

ನಗರ ವ್ಯಾಪ್ತಿಯಲ್ಲಿ ನೆನ್ನೆ ಸುಮಾರು 60 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ಅಮಾನತ್ತು ಮಾಡಲಾಗಿದೆ ಎಂದು ಪುರಸಭಾ ಅಧ್ಯಕ್ಷರಾದ ಪರಮೇಶ್ ಇಂದು ಪುರಸಭಾ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪ್ಲಾಸ್ಟಿಕ್ ಬಳಸುವುದರಿಂದ ಪರಿಸರಕ್ಕೆ ತೊಂದರೆ ಯಾಗುತ್ತಿದೆ ಪರಿಸರಕ್ಕೆ ಹಾನಿ ಯಾಗುತ್ತಿದೆ ಎಂಬುದನ್ನು ಜನರು ಅರಿತು ಕೊಳ್ಳಬೇಕು ಪ್ಲಾಸ್ಟಿಕ್ ಮುಕ್ತ ಭಾರತ ಮತ್ತು ರಾಜ್ಯ ಮಾಡಲು ಜನರ ಸಹಕಾರ ಬೇಕು ಎಂದು ಹೇಳಿದರು. ಪುರಸಭಾ ಸದಸ್ಯರಾದ ಟಿಎಮ್ ಬೋಜರಾಜು ಮಾತನಾಡಿ ಪರಿಸರಕ್ಕೆ ಹಾನಿ ಕಾರಕವಾದಂತಹ ಪ್ಲಾಸ್ಟಿಕ್ ನ್ನು ಸೀಜ್ ಮಾಡಲಾಗಿದೆ. ಪುರಸಭೆಯಿಂದ ಸಾರ್ವಜನಿಕ ಅಭಿಯಾನ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪ್ಲಾಸ್ಟಿಕ್ ಮುಕ್ತ ತರೀಕೆರೆ ಮಾಡುವಲ್ಲಿ ಪುರಸಭೆ ದಾಪುಗಾಲು ಇಡುತ್ತಿದೆ. ಸರ್ವೋಚ್ಚ ನ್ಯಾಯಾಲಯವು ಪ್ಲಾಸ್ಟಿಕ್ ಬಳಸದಂತೆ ನಿಷೇಧವನ್ನು ಮಾಡಿದೆ ಇದರಿಂದ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸಹಕರಿಸ ಬೇಕೆಂದು ಮನವಿ ಮಾಡಿದರು. ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ ಮಾತನಾಡಿ ತರೀಕೆರೆ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಅಧ್ಯಕ್ಷರು ಸರ್ವ ಸದಸ್ಯರು ಸಂಕಲ್ಪ ಮಾಡಿದ್ದೇವೆ. ಘನ ಸರ್ಕಾರದ ಆದೇಶದಂತೆ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಮೊದಲ ಬಾರಿಗೆ ತಿಳುವಳಿಕೆ ಹೇಳಿದ್ದೇವೆ,ಎರಡನೇ ಬಾರಿಗೆ ಎಚ್ಚರಿಕೆ ಕೊಟ್ಟಿದ್ದೇವೆ,ಈಗ ಮೂರನೇ ಹಂತವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಅಮಾನತ್ತು ಮಾಡಿ ದಂಡ ಹಾಕುತ್ತಿದ್ದೇವೆ. ನೆನ್ನೆ ಒಂದೇ ದಿನಕ್ಕೆ ಆರು ಸಾವಿರ ರೂಗಳ ದಂಡ ಹಾಕಿದ್ದೇವೆ ಕಳೆದ ಮೂರು ತಿಂಗಳಿನಿಂದ ಸುಮಾರು 32,700 ದಂಡ ಹಾಕಲಾಗಿದೆ ಇನ್ನು ಮುಂದೆ ಮತ್ತೆ ಪುನರಾವರ್ತನೆ ಯಾದರೆ ಪರವಾನಿಗೆ ರದ್ದು ಮಾಡುವಂತಹ ಕಠಿಣವಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು. ಪರಿಸರ ಅಭಿಯಂತರರಾದ ತಹೇರ ತಸ್ಮೀನ್ ರವರು ಮಾತನಾಡಿ ವಶಪಡಿಸಿ ಕೊಂಡಿರುವ ಪ್ಲಾಸ್ಟಿಕ್ ವಸ್ತುಗಳನ್ನು ನಾಶ ಪಡಿಸುತ್ತೇವೆ ಹಾಗೂ ಸಿಮೆಂಟ್ ಪ್ಲಾಂಟ್ ಗೆ ಕಳುಹಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಮಹೇಶ್, ಮೇಸ್ತ್ರಿ ಪ್ರಕಾಶ, ಸಿಬ್ಬಂದಿಗಳಾದ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button