“ಕರ್ನಾಟಕ ಈಶಾನ್ಯ ಪದವೀಧರ ನೋಂದಣಿಯ ಅಭಿಯಾನ”.

ಕೊಟ್ಟೂರು ಅಕ್ಟೋಬರ್.17

ಕರ್ನಾಟಕ ಈಶಾನ್ಯ ಪದವೀಧರರ ಮತ ಕ್ಷೇತ್ರದ ಮತದಾರರ ನೋಂದಣಿಯ ಕಾರ್ಯಕ್ರಮ ಈಗಾಗಲೇ ಪ್ರಾರಂಭವಾಗಿದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾಯದಿಂದ ದಿನಾಂಕ: 01.11.2020 ಕ್ಕಿಂತ ಹಿಂದೆ ಪದವೀಧರರಾಗಿರುವವರು ನಮೂನೆ-18ರ ಅರ್ಜಿಯನ್ನು ಭರ್ತಿ ಮಾಡಿ 2 ಭಾವಚಿತ್ರ, ಪದವಿಯ ಅಂಕಪಟ್ಟಿ, ವಿಳಾಸದ ಗುರುತಿನ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯ(ವೋಟರ್ ಐಡಿ) ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಹಾಗೂ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ದಿನಾಂಕ: 06.11.2023 ರೊಳಗೆ ತಹಶೀಲ್ದಾರರು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಕೊಟ್ಟೂರು ಇವರಿಗೆ ಸಲ್ಲಿಸಬಹುದಾಗಿದೆ. ಹಾಗೂ ದಿನಾಂಕ: 17.10.2023, 26.10.2023 ಹಾಗೂ 30.10.2023 ರಂದು ಕರ್ನಾಟಕ ಈಶಾನ್ಯ ಪದವೀಧರರು ಮತ ಕ್ಷೇತ್ರದ ಮತದಾರರ ನೋಂದಣಿಯ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅರ್ಹ ಪದವೀಧರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತದಾರರ ನೋಂದಣಿ ಮಾಡಿಸಿಕೊಳ್ಳುವಂತೆ ಹಾಗೂ ತಾಲೂಕಿನಲ್ಲಿ ಯಾವುದೇ ಪದವೀಧರ ಮತದಾರರು ನೋಂದಣಿಯಿಂದ ವಂಚಿತರಾಗದೇ ನೋಂದಾಯಿಸಿಕೊಳ್ಳುವಂತೆ ಕೊಟ್ಟೂರು ತಹಶೀಲ್ದಾರರಾದ ಕಾರ್ತಿಕ ವಿ ಇವರು ಪದವೀಧರ ಮತದಾರರಲ್ಲಿ ಈ ಮೂಲಕ ಕೋರಿರುತ್ತಾರೆ.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button