ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಆನಂದಗೌಡ ಗೌಡರ ತೃತೀಯ ಸ್ಥಾನ.
ಹುನಗುಂದ ಅಕ್ಟೋಬರ್.17
![](https://i0.wp.com/sknewskannada.in/wp-content/uploads/2023/10/IMG-20231017-WA0032.jpg?resize=708%2C1001&ssl=1)
ಪಟ್ಟಣದ ವಿ.ಎಂ.ಕೆ.ಎಸ್.ಆರ್.ವಸ್ತೃದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿ ಆನಂದಗೌಡ ಗೌಡರ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ದಸರಾ ಸಿ.ಎಂ.ಕಪ್ ೨೦೨೩ ಕ್ರೀಡಾ ಕೂಟದಲ್ಲಿ ಪುರುಷರ ೧೦೦+ಉ/ಖ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದು ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾನೆ ಎಂದು ದೈಹಿಕ ನಿರ್ದೇಶಕ ಲೆಪ್ಟಿನೆಂಟ್ ಎಸ್.ಬಿ.ಚಳಗೇರಿ ತಿಳಿಸಿದ್ದಾರೆ.ಇತ್ತೀಚಗೆ ಮೈಸೂರನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಸರಾ ಕ್ರೀಡಾ ಉಪ ಸಮಿತಿಯಿಂದ ರಾಜ್ಯ ಮಟ್ಟದ ಕ್ರೀಡಾಕೂಟ ಸಿ.ಎಂ. ಕಪ್-೨೦೨೩ ವತಿಯಿಂದ ಅ.೧೦ ರಿಂದ ಅ.೧೪ ರವರಗೆ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದರೇ,ಬಾಗಲಕೋಟಿಯಲ್ಲಿ ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಸೆ.೨೯ ರಂದು ಬಾಗಲಕೋಟೆ ವಿಭಾಗ ಮಟ್ಟದ ದಸರಾ ಕ್ರೀಡಾದಲ್ಲಿ, ಪುರುಷ ವಿಭಾಗದ ೧೦೦+ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾನೆ.ಅ.೪ ಮತ್ತು ೫ ರಂದು ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾದಲ್ಲಿ ಭಾಗವಹಿಸಿ ಪುರುಷ ವಿಭಾಗದ ೧೦೦+ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಹುನಗುಂದದ ಕೀರ್ತಿ ಹೆಚ್ಚಿಸಿದ್ದಾನೆ ಎಂದರು.ಈ ವಿದ್ಯಾರ್ಥಿಯ ವಿಶೇಷ ಸಾಧನೆಗಳಿಗಾಗಿ ವಿ.ಮ.ವಿ.ವ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚಿರಂತಿಮಠ,ಗೌರವಕಾರ್ಯಾದರ್ಶಿ ಡಾ|| ಮಹಾಂತೇಶ ಕಡಪಟ್ಟಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು,ಪ್ರಾಚಾರ್ಯ ಶ್ರೀಮತಿ. ಎಸ್.ಕೆ.ಮಠ,ಒಕ್ಕೂಟದ ಕಾರ್ಯಧ್ಯಕ್ಷ ಪ್ರೊ.ಬಿ.ಎ.ಕಂಠಿ,ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ.ಎಸ್.ಆರ್.ಗೋಲಗೊಂಡ,ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ