ದಸರಾ ಹಬ್ಬ …. !

ನಾಡಹಬ್ಬ ದಸರಾ .

ಅಕ್ಟೋಬರ್.20 :

ದಸರಾ ಹಬ್ಬ ಭಾರತದ ಸಾಂಪ್ರದಾಯಿಕ ಹಬ್ಬಗಳಲ್ಲಿ ಅಗ್ರಸ್ಥಾನ . ದೇಶದಾದ್ಯಂತ ಸರ್ವ ಧರ್ಮದ ಜನರು ನಂಬಿಕೆ , ಭಕ್ತಿ – ಭಾವ ವಿಜೃಂಭಣೆಯಿಂದ ಆಚರಿಸುತ್ತಾರೆ . ದೇಶದಲ್ಲಿ ಆಚರಿಸಲ್ಪಡುವ ಹಬ್ಬ – ಹರಿದಿನಗಳು , ಜಾತ್ರೆ , ಉತ್ಸವಗಳ ಹಿಂದೆ ಐತಿಹಾಸಿಕ ಮತ್ತು ಅರ್ಥಪೂರ್ಣ ಹಿನ್ನೆಲೆ ಇರುತ್ತದೆ . ಅದರಲ್ಲೂ ನಾಡಹಬ್ಬ ದಸರಾವನ್ನು ಉತ್ತರ ಕರ್ನಾಟಕದ ಬಾಗಲಕೋಟ , ಕೊಪ್ಪಳ , ಕಲಬುರ್ಗಿ ಸಹಿತ ಇನ್ನಿತರ ಜಿಲ್ಲೆಗಳಲ್ಲಿ ಸೌಹಾರ್ದತೆಯ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಾರೆ . ಜಾತಿ , ಮತ , ದ್ವೇಷಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಆಚರಿಸುತ್ತಾರೆ . ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ , ಒಂಬತ್ತು ದಿನಗಳ ಕಾಲವೂ ದೇವಿ ಪುರಾಣವನ್ನು ಪಾರಯಣ ಮಾಡಲಾಗುತದೆ . ದಸರಾ ಹಬ್ಬವು ವಿಶೇಷವಾಗಿ ಹೆಂಗಸರಿಗೆ ಭಕ್ತಿ ಭಾವದ ಹಬ್ಬ .ಹಬ್ಬದ ಒಂಬತ್ತು ದಿನಗಳ ಕಾಲ ಹೆಂಗಸರು ಊರಿನ ಬನ್ನಿ ಮರದ ಗಿಡಕ್ಕೆ ಹರಕೆ ಹೊತ್ತು ಪೂಜೆ ಮಾಡುತ್ತಾರೆ . ಗೋಧೂಳಿ ಕಾಲದಲ್ಲಿ ಎದ್ದು ಇಡೀ ಮನೆಯನ್ನು ಸ್ವಚ್ಛಗೊಳಿಸಿ , ಮಡಿಯಾಗಿ ಊರಿನ ಬನ್ನಿ ಮಹಾಂಕಾಳಿ ದೇವಿಗೆ ಪೂಜೆ ಮಾಡುವ ಮೂಲಕ ಇಷ್ಟಾರ್ಥ ಸಿದ್ದಿಗೆ ಹರಕೆ ಕಟ್ಟುತ್ತಾರೆ . ಈ ದಿನಗಳಲ್ಲಿ ಪ್ರತೀ ಮನೆಯಲ್ಲಿಯೂ ದೇವಿಯದ್ದೆ ಆರಾಧನೆ , ಒಂಭತ್ತು ದಿನಗಳಲ್ಲಿಯೂ ದೇವಿ ಒಂದೊಂದು ಅವತಾರ ತಾಳುವುದು ಈ ಹಬ್ಬದ ಮತ್ತೊಂದು ವಿಶೇಷ.ನಾಡಹಬ್ಬ ದಸರಾ ಹೆಸರು ಕೇಳುತ್ತಿದ್ದಂತೆ ಹೆಮ್ಮೆ ಮತ್ತು ಖುಷಿ ಎರಡು ಆಗುತ್ತದೆ . ಇನ್ನು ಉತ್ತರ ಕರ್ನಾಟಕದ ಭಾಗದಲ್ಲಿಯೂ ಕೂಡ ದಸರಾವನ್ನು ಅದ್ಧೂರಿಯಿಂದಲೇ ಆಚರಿಸಲಾಗುತ್ತದೆ ಪ್ರತಿ ಮನೆಯಲ್ಲಿಯೂ ಹಬ್ಬದ ಪ್ರಯುಕ್ತ ಘಟಸ್ಥಾಪನೆ ಮಾಡಲಾಗುತ್ತದೆ . ಅಂದರೆ ಸಂಪ್ರದಾಯದನ್ವಯ ಮನೆಯ ದೇವರ ಜಗಲಿ ಮೇಲೆ ಔಡಲ ಗಿಡದ ಎಲೆಯನ್ನು ಹಾಸಿ ಅದಕ್ಕೆ ಹೊಲದಿಂದ ತಂದ ಮಣ್ಣನ್ನು ಹಾಕಿ ಐದು ಬಗೆಯ ಧಾನ್ಯಗಳಾದ ಗೋಧಿ , ಜೋಳ ಹೆಸರುಕಾಳು , ತೊಗರಿ , ಕಡಲೆಕಾಳು ಹೀಗೆ ಧಾನ್ಯಗಳನ್ನು ಹಾಕಲಾಗುತ್ತದೆ . ಈ ಧಾನ್ಯ ಬೆರೆಸಿದ ಅನಂತರ ಮನಯ ನಡುವೆ ದೀಪವನ್ನು ಇರಿಸಿ ಪೂಜೆ ಮಾಡಲಾಗುತ್ತದೆ ಘಟಸ್ಥಾಪನೆಯಲ್ಲಿ ಇರಿಸಿದಂತೆ ದೀಪ ಹಬ್ಬುವರೆಗೂ ಅಂದರೆ ಒಂಬತ್ತು ದಿನಗಳ ಕಾಲ ನಿರಂತರವಾಗಿ ಬೆಳಗುವಂತೆ ಕಾದಿರಿಸಲಾಗುತ್ತದೆ ಕೆಲವು ಜನ ಐದು ದಿನ ಏಳು ದಿನ ಅಥವಾ ಒಂಬತ್ತು ದಿನಗಳ ಕಾಲ ಈ ಘಟಸ್ಥಾಪನೆ ಮಾಡುತ್ತಾರೆ . ಪ್ರತೀ ದಿನ ನೈವೇದ್ಯ ಮಾಡಿ ಪೂಜೆ ಮಾಡುವುದು ರೂಢಿ . ಕಡೆಯ ದಿನ ವಿಜಯ ದಶಮಿಯೆಂದು ಒಳ್ಳೆಯ ಮುಹೂರ್ತಕ್ಕೆ ಸಸಿಯನ್ನು ದೇವರ ಜಗಲಿಯಿಂದ ಸರಿಸಿ , ಕೆರೆ , ಬಾವಿ , ಬೋರವೆಲ್‌ಗಳತ್ತ ನೈವೇದ್ಯ ಇಟ್ಟು ಪೂಜೆ ಮಾಡಿ ಮನೆಗೆ ಮರಳುತ್ತಾರೆ ಸಸಿ ತೆಗೆದುಕೊಂಡು ಹೋಗುವುದು ಸಂಪ್ರದಾಯವಾಗಿತ್ತು ಬುಟ್ಟಿ ಮರ ಹೀಗೆ ಸಾಂಪ್ರದಾಯಿಕ ವಸ್ತುಗಳಲ್ಲಿ ಸಸಿ ಇರಿಸಿಮನೆಯ ಹೆಣ್ಣು ಮಕ್ಕಳು ಅದನ್ನು ತಲೆಮೇಲೆ ಹೊತ್ತುಕೊಂಡು ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.

ಆಯುಧ ಪೂಜೆ
ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ , ತಮಿಳುನಾಡು ಮತ್ತು ಕರ್ನಾಟಕಗಳು ದಸರಾ ಆಚರಣೆಯ ಅಂಗವಾಗಿ ಆಯುಧ ಪೂಜೆಯನ್ನು ಆಚರಿಸುತ್ತವೆ . ಈ ಪೂಜೆಯು ಜನರು ತಮ್ಮ ದೈನಂದಿನ ಜೀವನದ ಭಾಗವಾಗಿ ಬಳಸುವ ಉಪಕರಣಗಳು , ಉಪಕರಣಗಳು ಮತ್ತು ವಾಹನಗಳ ಪೂಜೆಯನ್ನು ಒಳಗೊಂಡಿರುತ್ತದೆ

ಬನ್ನಿ ಗಿಡದ ಎಲೆ ಮತ್ತು ಕಾಯಿಯೇ ಈ ಹಬ್ಬಕ್ಕೆ ಮುಖ್ಯ . ವಿಜಯ ದಶಮಿಯೆಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಬನ್ನಿ ಎಲೆ ಕಾಯಿ ತರಲಾಗುತ್ತದೆ . ಊರಿನ ಹಿರಿಯರಿಗೆ , ಮನೆ ಮಂದಿಗೆಲ್ಲ ಬನ್ನಿ ನೀಡಿ ಆಶೀರ್ವಾದ ಪಡೆಯಲಾಗುತ್ತದೆ ‘ ಬನ್ನಿ ಕೊಟ್ಟು , ಬನ್ನಿ ತಗೊಂಡು , ನಾವು – ನೀವು ಬಂಗಾರದಂಗ ಇರೋಣ ಎನ್ನುವುದು ಪ್ರತಿ ಬಾರಿ ಬನ್ನಿ ನೀಡುವಾಗ ಹೇಳುವ ಮಾತು . ಹೀಗೆ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಒಂಬತ್ತು ದಿನಗಳ ಕಾಲ ನವ ರಾತ್ರಿಯನ್ನು ಸಂಭ್ರಮ ಸಂತೋಷ , ಭಕ್ತಿ , ಭಾವದಿಂದ ಆಚರಿಸಲಾಗುತ್ತದೆ .

ಲೇಖನ : ಭೂಮಿಕಾ ರಂಗಪ್ಪ ದಾಸರಡ್ಡಿ . (ವಿದ್ಯಾರ್ಥಿನಿ)

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button