ಸ್ಮಶಾನ ರಸ್ತೆ ನಿರ್ಮಾಣ ಮಾಡಬೇಕು-ಡಾ. ಕಾಂತರಾಜ್.
ತರೀಕೆರೆ ಅಕ್ಟೋಬರ್.21

ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ರಸ್ತೆ ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದು ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್ ರವರು ಹೇಳಿದರು. ಉಪ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆಯಲ್ಲಿ ಚರ್ಚಿಸಲಾದ ಸಮಸ್ಯೆಯ ಕುರಿತು ಈ ಸ್ಮಶಾನಕ್ಕೆ ರಸ್ತೆ ಸಂಪರ್ಕ ಇಲ್ಲದೆ ಅಂಬೇಡ್ಕರ್ ನಗರ,ಕೋಟೆ ಕ್ಯಾಂಪ್, ತಮಿಳು ಕಾಲೋನಿ ಹಾಗೂ ಬ್ರಾಹ್ಮಣ ಸಮಾಜ,ವಿಶ್ವಕರ್ಮ ಸಮಾಜದವರು ಶವ ಸಂಸ್ಕಾರಕ್ಕೆ ಬಳಸುತ್ತಿದ್ದು ಈ ಕುರಿತು ಉಪ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಏನ್ ವೆಂಕಟೇಶ್, ಕೆ ನಾಗರಾಜ್, ಎಸ್ ಕೆ ಸ್ವಾಮಿ, ಎಸ್ ಎನ್ ಸಿದ್ದರಾಮಪ್ಪ, ಮುಂತಾದವರು ವಿಷಯ ಮಂಡಿಸಿ ರಸ್ತೆ ನಿರ್ಮಾಣ ಮತ್ತು ಸ್ಮಶಾನ ಸ್ವಚ್ಛತೆ ಬಗ್ಗೆ ಮನವಿ ಮಾಡಿದ್ದರು. ಈ ಮೇರೆಗೆ ಉಪ ವಿಭಾಗ ಅಧಿಕಾರಿಗಳಾದ ಡಾ. ಕಾಂತರಾಜುರವರು ಪುರಸಭಾ ಅಧ್ಯಕ್ಷ ಪರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರಪ್ಪ, ತಹಶೀಲ್ದಾರ್ ರಾಜೀವ, ಪುರಸಭಾ ಮುಖ್ಯ ಅಧಿಕಾರಿ ಹೆಚ್ಚು ಪ್ರಶಾಂತ್, ಡಾ. ಮಹಮ್ಮದ್ ಗೌಸ್, ತಾಲೂಕು ಸರ್ವೇಯರ್ ಜಯ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಧನಂಜಯ ಪುರಸಭಾ ಅಭಿಯಂತರರಾದ ಬಿಂದು, ರಾಜ್ಯ ಸ್ವ ನಿರೀಕ್ಷಕರಾದ ನಿರ್ಮಲ ಅಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಕೃಷ್ಣನಾಯಕ ಮುಂತಾದವರು ದೊಡ್ಡಕೆರೆ ಬಳಿ ಇರುವ ತರೀಕೆರೆ ಸರ್ವೆ ನಂಬರ್ 7 ರಲ್ಲಿ 1 ಎಕರೆ 23 ಗುಂಟೆ ಸ್ಮಶಾನಕ್ಕೆ ರಸ್ತೆ ನಿರ್ಮಾಣ ಮಾಡಲು ಮತ್ತು ಸ್ವಚ್ಛತೆ ಕುರಿತು ಪರಿಶೀಲನೆ ಮಾಡಿ ಡಾ. ಬಿಆರ್ ಅಂಬೇಡ್ಕರ್ ನಗರದ ರಸ್ತೆಯಿಂದ ನೇರವಾಗಿ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಕ್ಕದ ತೋಟದ ಮಾಲೀಕರಾದ ಪಾಟಲಿ ಕೃಷ್ಣಮೂರ್ತಿ ರವರು ರಸ್ತೆ ನಿರ್ಮಾಣಕ್ಕೆ ಸ್ಥಳ ಅವಕಾಶ ಮಾಡಿ ಕೊಡುವುದಾಗಿ ತಿಳಿಸಿದರು. ಟಿ ಜಿ ಪ್ರಕಾಶ್ ರವರು ಮಾತನಾಡಿ ಉಪ್ಪಾರ ಬಸವನಹಳ್ಳಿ ಸರ್ವೇ ನಂಬರ್ 22 ರಲ್ಲಿ 8 ಎಕರೆ 22 ಗುಂಟೆ ಸ್ಮಶಾನ ಇದ್ದು ಸ್ಥಳ ಪರಿಶೀಲನೆ ಮಾಡಿಸಿದರು.ನಂತರ ಗೋಣಿಕಟ್ಟೆಯಲ್ಲಿರುವ 8 ಎಕರೆ 20 ಗುಂಟೆ ಕ್ರೀಡಾಂಗಣಕ್ಕೆ ಎಂದು ಪಹಣಿಯಲ್ಲಿ ನಮೂದಾಗಿದ್ದು, ಅದನ್ನು ಸ್ಮಶಾನ ಎಂದು ಪರಿವರ್ತಿಸಲು ತಹಶೀಲ್ದಾರ್ ಅವರಿಗೆ ತಿಳಿಸಿದರು ಉಳಿದ 2 ಎಕರೆ ಗೋಣಿಕಟ್ಟೆಯನ್ನು ಅಳತೆ ಮಾಡಿಸಿ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ತಹಶೀಲ್ದಾರ್ ರವರಿಗೂ ಹಾಗೂ ಮುಖ್ಯ ಅಧಿಕಾರಿಗಳು ತಿಳಿಸಿದರು ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು.ಎನ್.ವೆಂಕಟೇಶ್.ತರೀಕೆರೆ