ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು – ಗುಡ್ಡಪ್ಪ ಕರೆ.
ಕೊಟ್ಟೂರು ಅಕ್ಟೋಬರ್.21

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಈಗಾಗಲೇ ಪದವೀಧರರಿಂದ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ದಿನಾಂಕ: 01.11.2020 ಕ್ಕಿಂತ ಹಿಂದೆ ಪದವಿಯನ್ನು ಪೂರ್ಣಗೊಳಿಸಿದ ತಾಲೂಕಿನಲ್ಲಿರುವ ಪದವೀಧರರು ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗದೇ ಇರಲು ಕಡ್ಡಾಯವಾಗಿ ನವಂಬರ್ -06- 2023 ರ ಒಳಗೆ ನಮೂನೆ-18ರ ಅರ್ಜಿ ಹಾಗೂ ಪದವಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಓಟರ್ ಐ.ಡಿ. 2 ಭಾವ ಚಿತ್ರದೊಂದಿಗೆ ದಾಖಲೆಗಳನ್ನು ಅಂತಿಮ ದಿನದ ವರೆಗೆ ಕಾಯದೇ ಕೂಡಲೇ ದೃಢೀಕರಿಸಿ ಸಲ್ಲಿಸುವಂತೆ ಕೋರಿದರು. ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರವನ್ನು ಕೈಗೊಂಡು ನೋಂದಣಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಕ್ಟೋಬರ್-26 ಹಾಗೂ ಅಕ್ಟೋಬರ್-30 ರ ವಿಶೇಷ ಮತದಾರರ ನೋಂದಣಿಯ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು,

ಎಲ್ಲರೂ ಜಾಗೃತಿ ಮೂಡಿಸಿ ನೋಂದಾಯಿಸಲು ಶ್ರೀ ಗುಡ್ಡಪ್ಪ, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ, ಕೊಟ್ಟೂರು ತಾಲೂಕು ಹಾಗೂ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹೊಸಪೇಟೆ ಇವರು ಸಭೆಯಲ್ಲಿ ಮಾಹಿತಿಯನ್ನು ನೀಡಿದರು. ತಹಶೀಲ್ದಾರರಾದ ಕಾರ್ತಿಕ್ ವಿ ಇವರು ಎಲ್ಲಾ ಗ್ರಾಮ ಲೆಕ್ಕಿಗರು ಹಾಗೂ ಪಿ.ಡಿ.ಒ.ಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಪದವಿದಾರ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಅವರಿಂದ ನಮೂನೆ-18ರ ಅರ್ಜಿಯನ್ನು ಭರ್ತಿಮಾಡಿಸಿ ಅರ್ಜಿಗಳ ಸಂಗ್ರಹಿಸಿ ಕಛೇರಿಗೆ ಸಲ್ಲಿಸಲು ಹಾಗೂ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಯವರು ಪದವಿ ಮುಗಿಸಿದ್ದಲ್ಲಿ ನೋಂದಾಯಿಸಲು ಸೂಚಿಸಿದರು. ಸದರಿ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ, ಸಿ.ಡಿ.ಪಿ.ಒ ಕಛೇರಿಯ ಮೇಲ್ವಿಚಾರಕರು, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ, ಅಜ್ಜಪ್ಪ ಸಿ, ಸ್ವೀಪ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿ.ಡಿ.ಒ.ಗಳು ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಜರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು