ಬೆಳಕಿನ ಹಬ್ಬಕ್ಕೆ ಎಲ್.ಇ.ಡಿ ದೀಪಗಳನ್ನು ಅಳವಡಿಸಲಾಗುತ್ತದೆ-ಜಿ.ಎಚ್. ಶ್ರೀನಿವಾಸ್.

ತರೀಕೆರೆ ಅಕ್ಟೋಬರ್.21

ಆಟೋಮ್ಯಾಟಿಕ್ ಆನ್ ಅಂಡ್ ಆಫ್ ವ್ಯವಸ್ಥೆಯಿಂದ ಅನವಶ್ಯಕ ವಿದ್ಯುತ್ ತಡೆಗಟ್ಟಬಹುದು. ಎಲ್.ಇ.ಡಿ ಬೀದಿ ದೀಪಗಳ ಅಳವಡಿಕೆಯಿಂದ ಶೇಕಡ 60% ವಿದ್ಯುತ್ ಉಳಿತಾಯವಾಗಲಿದೆ ಎಂದು ಶಾಸಕ ಜಿ ಎಚ್ ಶ್ರೀನಿವಾಸ್ ಹೇಳಿದರು. ಅವರು ಪುರ ಸಭೆಯ ಕಚೇರಿ ಮುಂದೆ ಏರ್ಪಡಿಸಿದ್ದ ಮಹಾರಾಷ್ಟ್ರದ ನಾಸಿಕ್ ಮೂಲದ ಇ ಸ್ಮಾರ್ಟ್ ಎನರ್ಜಿ ಸಲ್ಯೂಷನ್ ಲಿ, ರವರ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಬೆಳಕಿನ ಹಬ್ಬದ ಪ್ರಯುಕ್ತ ತರೀಕೆರೆ ಪಟ್ಟಣದಲ್ಲಿ 2384 ಕಂಬಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತದೆ. ಸಿಸಿಎಂಎಸ್ ತಂತ್ರಜ್ಞಾನದ ಮೂಲಕ ಜಿಲ್ಲಾ ನಗರ ಅಭಿವೃದ್ಧಿ ಕೋಶ ಚಿಕ್ಕಮಗಳೂರು ಇವರಿಂದ ಬೆಳಗ್ಗೆ ಮತ್ತು ಸಂಜೆ ಸಮಯ ನಿಗದಿಪಡಿಸಿ ಆಟೋಮ್ಯಾಟಿಕ್ ಕಂಟ್ರೋಲ್ ಮಾಡಲಾಗುವುದು ಎಂದು ಹೇಳಿದರು. ಪುರ ಸಭಾ ಅಧ್ಯಕ್ಷರಾದ ಪರಮೇಶ್ ರವರು ಮಾತನಾಡಿ 2018 –19ರಲ್ಲಿ ನಡೆದ ಸರ್ವೇ ಪ್ರಕಾರ ವಾರ್ಷಿಕ 6,83,762 ಕಿಲೋ ವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದೆ ವಾರ್ಷಿಕ ವಿದ್ಯುತ್ ಶುಲ್ಕ ಎರಡು ಕೋಟಿ ವೆಚ್ಚವಾಗುತ್ತಿದೆ ಎಲ್.ಇ.ಡಿ ಯೋಜನೆಯಿಂದ ಶೇಕಡ 60% ರಷ್ಟು ವಿದ್ಯುತ್ ಉಳಿತಾಯವಾಗಲಿದೆ ಬೆಳಕಿನ ಹಬ್ಬಕ್ಕೆ ತರೀಕೆರೆಯ ಜನತೆಗೆ ಪುರ ಸಭೆಯಿಂದ ವಿದ್ಯುತ್ ದ್ವೀಪಗಳ ಕೊಡುಗೆ ನೀಡುತ್ತಿದ್ದೇವೆ ಎಂದು ಹೇಳಿದರು. ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ಮಾತನಾಡಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಚರಂಡಿಗಳಲ್ಲಿ ಸೊಳ್ಳೆಗಳ ಉತ್ಪತ್ತಿ ತಡೆಯಲು ಮೇಲಾತಿನ್ ಮಿಶ್ರಣ ಸಿಂಪಡಣೆ ಕಾರ್ಯ ಪ್ರಾರಂಭವಾಗಿದೆ. ಮಾಂಸದ ಅಂಗಡಿಗಳಲ್ಲಿ ಸ್ವಚ್ಛತೆ ಮಾಡಿಸಲಾಗಿದೆ. ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಪ್ಲಾಸ್ಟಿಕ್ ಮಾರಾಟ ಉತ್ಪಾದನೆ ಸಂಪೂರ್ಣ ನಿಷೇಧಿಸಿದೆ ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪುರ ಸಭೆಯಿಂದ ತೆರಿಗೆ ವಸೂಲಾತಿ ಆಂದೋಲನ ನಡೆಸಲಾಗುತ್ತಿದೆ ಆಸ್ತಿ ಮಾಲೀಕರು ಸಕಾಲದಲ್ಲಿ ತೆರಿಗೆ ಪಾವತಿಸ ಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪುರ ಸಭಾ ಉಪಾಧ್ಯಕ್ಷರಾದ ರಿಹಾನ ಪರ್ವೀನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರಪ್ಪ ಸದಸ್ಯರಾದ ಶಶಾಂಕ್, ಅಶೋಕ್ ಕುಮಾರ್, ಅನಿಲ್ ಕುಮಾರ್, ವಸಂತ ಕುಮಾರ್ ಕವಾಲಿ, ಚೇತನ್, ಚಂದ್ರಶೇಖರ್ ಗಿರಿಜಾ ಪ್ರಕಾಶ್ ವರ್ಮ, ಪಾರ್ವತಮ್ಮ, ಆರ್ಯ ಈಡಿಗ ಸಮಾಜದ ಮುಖಂಡರಾದ ರಾಘವೇಂದ್ರ, ರಾಜೇಂದ್ರ ಅಭಿಯಂತರರಾದ ಬಿಂದು, ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button