ನೂತನ ದುರ್ಗಮ್ಮ ದೇವಿ ದೇವಸ್ಥಾನ ಉದ್ಘಾಟನೆ ಮತ್ತು ಪ್ರತಿಷ್ಠಾಪನೆ.
ಕಾನಾ ಹೊಸಹಳ್ಳಿ ಅಕ್ಟೋಬರ್.21
![](https://i0.wp.com/sknewskannada.in/wp-content/uploads/2023/10/IMG-20231021-WA0047.jpg?resize=708%2C531&ssl=1)
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ದುರ್ಗಮ್ಮ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.
![](https://i0.wp.com/sknewskannada.in/wp-content/uploads/2023/10/IMG-20231021-WA0046.jpg?resize=708%2C944&ssl=1)
ನಂತರ ಮಾತನಾಡಿ ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಮತ್ತು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಬೇಕೆಂದು ಹೇಳಿದರು. ಕಾನಾಮಡಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯರು ಮಾತನಾಡಿ. ಧರ್ಮ ಸಭೆಗೂ ಮುನ್ನ ವೇದಮೂರ್ತಿ ಎ ಎಂ ಚನ್ನವೀರಸ್ವಾಮಿ. ಎಚ್ಎಂಬಿ ಗುರುಮೂರ್ತಿ ಸ್ವಾಮಿ. ಎಚ್ಎಮ್ ಬಸವರಾಜಯ್ಯ ಇವರುಗಳ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ಹೋಮ ಹವನಗಳನ್ನು ಹಾಗೂ ಪೂರ್ಣಾಹುತಿ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯ ಕ್ರಮಗಳು ಜರುಗಿದವು.
![](https://i0.wp.com/sknewskannada.in/wp-content/uploads/2023/10/IMG-20231021-WA0045.jpg?resize=708%2C531&ssl=1)
ಇದೇ ಸಂದರ್ಭದಲ್ಲಿ ಕಾನಾ ಹೊಸಹಳ್ಳಿ ಗ್ರಾಮದ ದೈವಸ್ಥರು ಮುಖಂಡರು. ಸುತ್ತ ಮುತ್ತಲಿನ ಗ್ರಾಮದ ಗ್ರಾಮಸ್ಥರು ಇನ್ನಿತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ