ಸರ್ಕಾರದ ಯೋಜನೆಗಳು ಎಲ್ಲಾ ರೈತರಿಗೆ ತಲುಪಲಿ – ಶಾಸಕರು ಡಾ. ಎನ್.ಟಿ.ಶ್ರೀ ನಿವಾಸ್.
ಕಾನಾ ಹೊಸಹಳ್ಳಿ ಅಕ್ಟೋಬರ್27

ಬರಗಾಲ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು ಎಂದು ಕೂಡ್ಲಿಗಿ ಶಾಸಕ ಡಾ ಎನ್.ಟಿ.ಶ್ರೀನಿವಾಸ್ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಸರ್ವ ಸದಸ್ಯರಿಗೆ ಸಭೆಯಲ್ಲಿ ತಿಳಿಸಿದರು. ಇಲ್ಲಿನ ಕಾನ ಹೊಸಹಳ್ಳಿ ಹೋಬಳಿಯ ನಾಡ ಕಛೇರಿ ಹಾಗೂ ಕೃಷಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಮಹತ್ವದ ಸಭೆ ನಡೆಸಿದರು.

ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ಕೊಡುವ ಮೂಲಕ ಕಾಲರಾ ಹಾಗೂ ಮಲೇರಿಯಾ ಬರದಂತೆ ಗಮನ ಹರಿಸಬೇಕು. ನಿಮ್ಮ ಕೆಲಸ ಕಾರ್ಯಗಳ ಪರವಾಗಿ ಇರುತ್ತೇನೆ. ನೀವುಗಳು ರೈತರು, ಬಡವರು ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಮೂಲ ದಾಖಲೆಗಳಲ್ಲಿ ಸಣ್ಣ ಪುಟ್ಟ ತಪ್ಪುಗಳು ಆಗದಂತೆ ಎಚ್ಚರ ವಹಿಸಬೇಕು. ರೈತರು ಕೆಲಸ ಕಾರ್ಯಗಳಿಗಾಗಿ ಅಲೆದಾಡುವ ಸ್ಥಿತಿ ಬರಬಾರದು.

ಅರ್ಹ ಫಲಾನುಭವಿಗಳಿಗೆ ಬೆಳೆ ಪರಿಹಾರ ಸಿಗಬೇಕು. ಎಂದೂ ನಾಡ ಕಛೇರಿ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಣುಕಾ, ಕೃಷಿ ಇಲಾಖೆಯ ಸಹಾಯ ನಿರ್ದೇಶಕರಾದ ಸುನೀಲ್ ಕುಮಾರ್, ನಾಡ ಕಛೇರಿ ಆರ್ ಐ ಮುರುಳಿಕೃಷ್ಣ.ಪಿಡಿಒ ಬಿ.ಬಸಮ್ಮ, ಗ್ರಾ.ಪಂ ಅಧ್ಯಕ್ಷರಾದ ಚೇತನ್, ಉಪಾಧ್ಯಕ್ಷರು, ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿಗಳು, ನಾಡ ಕಚೇರಿ ಸಿಬ್ಬಂದಿ. ಕೃಷಿ ಇಲಾಖೆ ಸಿಬ್ಬಂದಿ. ಸೇರಿದಂತೆ ಸಾರ್ವಜನಿಕರು ಉಪಸಿತರಿದ್ದರು.
ತಾಲೂಕ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ