ಸಾರ್ವಜನಿಕರು ಐ.ಸಿ.ಯು ಸೇವೆ ಉಪಯೋಗಿಸಿಕೊಳ್ಳಿರಿ – ಜಿ.ಎಚ್. ಶ್ರೀನಿವಾಸ್.
ತರೀಕೆರೆ ಅಕ್ಟೋಬರ್.31

ಸಾರ್ವಜನಿಕರ ಸೇವೆ ಮಾಡುವುದೇ ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಶಾಸಕ ಜಿ ಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆದಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಪ್ರತಿದಿನ ಕನಿಷ್ಠ 500 ರಿಂದ 600 ಜನ ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ,ಆದ್ದರಿಂದ ವೈದ್ಯರ ಸೇವೆ ಅವಶ್ಯಕವಾಗಿದೆ ಜವಾಬ್ದಾರಿಯು ಹೆಚ್ಚಾಗಿರುತ್ತದೆ. ಆಸ್ಪತ್ರೆಗೆ ಏನೇನು ಬೇಕಾಗಿದೆ, ಅವಶ್ಯಕತೆ ಇರುವುದನ್ನು ವ್ಯವಸ್ಥೆ ಮಾಡಲು ಆರೋಗ್ಯ ರಕ್ಷಾ ಸಮಿತಿ ರಚನೆ ಮಾಡಲಾಗಿದೆ,ಈ ಆರೋಗ್ಯ ರಕ್ಷಾ ಸಮಿತಿಯಲ್ಲಿ ಉಪ ವಿಭಾಗ ಅಧಿಕಾರಿಗಳು, ತಹಶೀಲ್ದಾರರು, ಪೋಲಿಸ್ ಉಪ ಅಧೀಕ್ಷಕರು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿ, ವೈದ್ಯಧಿಕಾರಿ, ಪುರಸಭಾ ಮುಖ್ಯಾಧಿಕಾರಿ, ಡಿ ಎಚ್ ಓ ಚಿಕ್ಕಮಗಳೂರು, ಮೆಸ್ಕಾಂ ಎ ಇ ಇ, ಲೋಕೊಪಯೋಗಿ ಇಲಾಖೆ ಎ ಇ ಇ, ಕೆಎಚ್ಎಸ್ಆರ್ಡಿಪಿ, ಎ ಇ ಇ, ಡಾ. ಜಿ ಸಿ ಶರತ್, ಡಾ. ವಸಂತ್, ಡಾ.ಜಿ ಎನ್ ನಾಗರಾಜ್, ಮುಖ್ಯ ವೈದ್ಯಧಿಕಾರಿ, ಸರ್ಕಾರಿಯೇತರ ಸದಸ್ಯರಾದ ದುಗ್ಲಾಪುರ ದರ್ಶನ್, ಟಿ ಎಚ್ ಕೃಷ್ಣಮೂರ್ತಿ, ಸಂತವೇರಿ ಮಂಜ ನಾಯಕ, ಡಿಜಿ ವಲಜಾಕ್ಷಿ, ಬಾವಿಕೆರೆ ವೆಂಕಟೇಶ್, ಮೊಹಮ್ಮದ್ ಇರ್ಷಾದ್, ರವರನ್ನು ಆರೋಗ್ಯ ರಕ್ಷಾ ಸಮಿತಿಯಲ್ಲಿ ನೇಮಕ ಮಾಡಲಾಗಿದೆ. ಆದ್ದರಿಂದ ಈಗ ಆಸ್ಪತ್ರೆಯಲ್ಲಿ ಐಸಿಯು ಇಲ್ಲದೆ ಸಾರ್ವಜನಿಕರಿಗೆ ತುರ್ತು ಚಿಕಿತ್ಸೆಗೆ ತೊಂದರೆ ಯಾಗದಂತೆ ಐಸಿಯು ತೆರೆಯಲಾಗಿದೆ. ಸಾರ್ವಜನಿಕರು ಬೇರೆ ಬೇರೆ ಕಡೆ ಹೋಗದೆ ಸರ್ಕಾರಿ ಆಸ್ಪತ್ರೆಯಲ್ಲಿ ಇದರ ಉಪಯೋಗ ಪಡೆದು ಕೊಳ್ಳಬೇಕು ಎಂದು ಹೇಳಿದರು. ಈ ಸಭೆಯಲ್ಲಿ ಆಸ್ಪತ್ರೆಯ ಮೊದಲನೇ ಮಹಡಿ ಕಟ್ಟಡ ನಿರ್ಮಾಣ, ಆಸ್ಪತ್ರೆ ಮುಂಭಾಗದ ರಸ್ತೆಗೆ ಹಂಪ್ಸು ಹಾಕಿಸುವ ಬಗ್ಗೆ, ಪೊಲೀಸ್ ಔಟ್ ಪೋಸ್ಟ್ ತೆರೆಯುವ ಬಗ್ಗೆ, ಹಾಳಾಗಿರುವ ಶೌಚಾಲಯ ದುರಸ್ತಿ,, ಹೊಸ ಲ್ಯಾಬ್ ನಿರ್ಮಿಸುವ ಬಗ್ಗೆ, ಹಾಳಾಗಿರುವ ಕಿಟಕಿಗಳ ದುರಸ್ತಿ ಬಗ್ಗೆ, ಹೀಗೆ ಒಟ್ಟು 34 ವಿಷಗಳ ಬಗ್ಗೆ ಚರ್ಚಿಸಲಾಗಿದೆ, ಈ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್, ತಹಶೀಲ್ದಾರ್ ರಾಜೀವ, ಪೋಲಿಸು ಉಪ ಅಧೀಕ್ಷಕರಾದ ಹಾಲುಮೂರ್ತಿ ರಾವ್, ವೈದ್ಯಧಿಕಾರಿ ಡಾ. ದೇವರಾಜ್ , ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್, ಡಾ. ಶರತ್, ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್, ಮತ್ತು ಸರ್ಕಾರೇತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ