ಬೆಂಚಮಟ್ಟಿ 20 ವರ್ಷ ಸೇನೆಯಲ್ಲಿ ಸಾರ್ಥಕ ಸೇವೆ – ನಿವೃತ್ತಿಗೊಂಡ ಸ್ವಗ್ರಾಮಕ್ಕೆ ಆಗಮನ: ಅದ್ದೂರಿ ಸ್ವಾಗತ ಮತ್ತು ಗೌರವ.
ಹುನಗುಂದ ನವೆಂಬರ್.1

ಮಳೆ,ಬಿಸಿಲು,ಚಳಿಯನ್ನು ಲೆಕ್ಕಿಸದೇ ಕುಟುಂಬದ ಬಗ್ಗೆ ಚಿಂತಿಸದೇ ದೇಶ ರಕ್ಷಣೆಗಾಗಿ ತ್ಯಾಗಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯವಾದುದು ಎಂದು ತುರ್ವಿಹಾಳ ಗುರು ಅಮೋಘ ಸಿದ್ದೇಶ್ವರ ಮಠದ ಮಾದಯ್ಯಸ್ವಾಮಿ ಗುರುವಿನವರ ಶ್ರೀಗಳು ಹೇಳಿದರು.ಬುಧವಾರ ತಾಲೂಕಿನ ಸಮೀಪದ ಚಿಕ್ಕ ಮಳಗಾವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹುನಗುಂದ ಮತ್ತು ಚಿಕ್ಕ ಮಳಗಾವಿ ಗ್ರಾಮಸ್ಥರಿಂದ ಹಮ್ಮಿಕೊಳ್ಳಲಾಗಿದ್ದ 2೦ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ಚಂದ್ರಶೇಖರ ಬೆಂಚಮಟ್ಟಿ ಅವರ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಅವರು ಸೈನ್ಯಕ್ಕೆ ಸೇರಬೇಕಾದರೇ ಪುಣ್ಯ ಮಾಡಿರಬೇಕು.ಅಂತಹ ಪುಣ್ಯ ಚಂದ್ರಶೇಖರ ಬೆಂಚಮಟ್ಟಿ ಪಡೆದುಕೊಂಡು ಬಂದಿದ್ದರೂ ಎನ್ನುವುದರಿಂದಲೇ ಅವರ 2೦ ವರ್ಷ ಸೇನೆಯಲ್ಲಿನ ಸುದೀರ್ಘ ಭಾರತಾಂಭೆ ಸೇವೆಗೆ ಇಂದು ಗೌರವ ಸಿಕ್ಕಂತಾಗಿದೆ.ಚಂದ್ರಶೇಖರ ಅವರಂತೆ ಈ ಗ್ರಾಮದಲ್ಲಿ ಇನ್ನು ಮುಂದೆ ನೂರಾರು ಸಂಖ್ಯೆ ಯುವಕರು ಸೈನ್ಯವನ್ನು ಸೇರವಂತಾಗಲಿ ಎಂದರು.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಂಗಾಧರ ದೊಡಮನಿ ಮಾತನಾಡಿ ದೇಶದ ಏಳ್ಗೆ ಮತ್ತು ರಕ್ಷಣೆ ದೇಶದ ಅನ್ನದಾತ ಮತ್ತು ಗಡಿ ಕಾಯುವ ಯೋಧರಿಂದ ಮಾತ್ರ ಸಾಧ್ಯ ಅಂತ ಮಾಜಿ ಪ್ರಧಾನಮಂತ್ರಿ ಲಾಲ್ ಬಹುದ್ದೂರ ಶಾಸ್ತ್ರಿ ತಿಳಿದುಕೊಂಡು ಜೈ ಜವಾನ ಮತ್ತು ಜೈ ಕಿಸಾನ ಘೋಷ ವಾಕ್ಯವನ್ನು ಹೇಳಿದ್ದಾರೆ.ಇಂದು ಕನ್ನಡ ರಾಜ್ಯೋತ್ಸದ 5೦ ನೆಯ ವರ್ಷದ ಸಂಭ್ರಮ ಅಂತಹ ಸುಸಂದರ್ಭದಲ್ಲಿ ಚಂದ್ರಶೇಖರ ಬೆಂಚಮಟ್ಟಿ ಅವರ 2೦ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ಸ್ವಗ್ರಾಮ ಮರಳಿದ್ದು ಸಂತೋಷ ತಂದಿದೆ ಎಂದರು.ನಿವೃತ್ತಿಗೊಂಡ ಸ್ವಗ್ರಾಮಕ್ಕೆ ಮರಳಿದ ಯೋಧ ಚಂದ್ರಶೇಖರ ಬೆಂಚಮಟ್ಟಿ ಮಾತನಾಡಿ ದೇಶ ರಕ್ಷಣೆ ಜವಾಬ್ದಾರಿ ಬಹಳ ಕಷ್ಟವಿದ್ದರೂ ಅದನ್ನು ಸಂತಸದಿಂದ ತಾಯಿ ಭಾರತಾಂಭೆಯ ರಕ್ಷಣೆ ಮಾಡುತ್ತಿದ್ದೇನಲ್ಲ ಎನ್ನುವ ಹೆಮ್ಮೆಯಿಂದ 2೦ ವರ್ಷ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದೇನೆ.ಇನ್ನೊಂದು ಜನ್ಮ ಅಂತಾ ಇದ್ದರೇ ನಾನು ಮತ್ತೇ ಸೈನಿಕನಾಗಿ ಭಾರತ ಸೇವೆ ಮಾಡಲು ಸಿದ್ದ.ಪಕ್ಕದಲ್ಲಿಯೇ ಶವ ಇದ್ದರೂ ಸಹ ಕುಟುಂಬದವರು ಯೋಗ ಕ್ಷೇಮ ಕೇಳಿದರೇ ಚನ್ನಾಗಿಯೇ ಇದ್ದೇನೆ ಅಂತಾ ಹೇಳುವ ದೊಡ್ಡ ಗುಣ ಸೈನಿಕರಲ್ಲಿದೆ.ನನ್ನ ತಂದೆ ತೀರಿ ಹೋದಾಗಲೂ ನಾನು ಬರಲಿಲ್ಲ ಯಾಕೆಂದರೇ ಸೈನಿಕರ ಕೆಲಸನೇ ಅಂತಾದ್ದು ತಂದೆ ತೀರಿದ ಮೂರನೆಯ ದಿನಕ್ಕೆ ಮನೆಗೆ ಬಂದೆ.ಸೈನಿಕರಿಗೆ ಕಷ್ಟ ಮತ್ತು ಸುಖ ಎರಡು ಬರುತ್ತೇ ಅದನ್ನು ಸಮಾನವಾಗಿ ಸ್ವೀಕರಿಸುವ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ನಮ್ಮಲ್ಲಿ ಇರುತ್ತದೆ.ನಾನು ಮಾಜಿ ಸೈನಿಕರ ಸಂಘಕ್ಕೆ 1೦ ಸಾವಿರ ದೇಣಿಗೆಯನ್ನು ನೀಡುತ್ತೆನೆ ಎಂದರು.ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಅರ್ಜುನ ಕೋರೆ ಮತ್ತು ಮಾಜಿ ಸೈನಿಕ ಗದಿಗೆಪ್ಪ ಅರಕೇರಿ ಮಾತನಾಡಿ ಸೈನಿಕರು ಲಡಕ್ ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವಾಗ -4೦ ಡಿಗ್ರಿ ಚಳಿಯಲ್ಲಿ ಕಾರ್ಯ ಮಾಡಬೇಕೆಂದರೆ ತುಂಬಾನೇ ಕಷ್ಟ ಕೆಲಸ.ಸೈನಿಕನಿಗೆ ದೇಶ ರಕ್ಷಣೆಯೊಂದೇ ಗುರಿ.ಇಂತಹ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ಬಂದಾಗ ಅವರ ಕಷ್ಟದಲ್ಲಿ ತಾವೆಲ್ಲರು ಭಾಗಿ ಯಾಗಬೇಕು.ಸಮಸ್ಯೆಯಂತಾ ಪೊಲೀಸ್ ಠಾಣೆಗೆ ಹೋದರೆ ಗೌರವದಿಂದ ಕಾಣುವಂತಾಗಲಿ ಎಂದರು.ಪಿಎಸ್ಐ ಚನ್ನಯ್ಯ ದೇವೂರ ಮತ್ತು ಆರ್ಎಸ್ಆಯ್ ರೇವಣ್ಣ ಗುರಿಕಾರ,ಶಿಕ್ಷಕ ಮೇಟಿ ಮಾತನಾಡಿದರು.ಈ ಸಂದರ್ಭದಲ್ಲಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಸೈನಿಕ ಚಂದ್ರಶೇಖರ ಬೆಂಚಮಟ್ಟಿ ದಂಪತಿ ಮತ್ತು ಅವರ ಮಾತೃಶ್ರೀ ಅವರನ್ನು ಗಣ್ಯರು,ಸ್ನೇಹಿತರು,ಹಿತೈಸಿಗಳು,ಕುಟುಂಬ ವರ್ಗ ಮತ್ತು ಸಂಬಂಧಿಕರು ಸನ್ಮಾನಿಸಿ ಗೌರವಿಸಿದರು.ಮತ್ತು ಮಾಜಿ ಸೈನಿಕರಿಗೆ ಬೆಂಚಮಟ್ಟಿ ಕುಟುಂಬದಿಂದ ಸತ್ಕರಿಸಲಾಯಿತು.ಅಧ್ಯಕ್ಷತೆಯನ್ನು ಮಾಜಿ ಸೈನಿಕರ ಸಂಘದ ತಾಲೂಕಧ್ಯಕ್ಷ ಬಾಲಪ್ಪ ಕಿರಸೂರ ವಹಿಸಿಕೊಂಡಿದ್ದರು.ವೇ.ಮೂ.ಜಗದೀಶಯ್ಯ ಹಿರೇಮಠ,ಶ್ರೀಕಾಂತ ಹಿರೇಮಠ,ವಕೀಲ ಮಾಧವ ದೇಶಪಾಂಡೆ,ವಸಂತ ದೇಶಪಾಂಡೆ,ಎಲ್,ಎಂ.ಪಾಟೀಲ,ಮಹಾಂತೇಶ ಲಗಮನ್ನನವರ,ಬಸವರಾಜ ಹಲ್ಪಿ,ಸೋಮಶೇಖರ ಬಂಡಿವಡ್ಡರ,ನಾಗಪ್ಪ ಆಲೂರ,ಸಂಗಪ್ಪ ಕಲಾದಗಿ,ಶಿವಾನಂದ ನಿರವಾದಿ,ಸೇರಿದಂತೆ ಅನೇಕರು ಇದ್ದರು.ವಿಜಯ ದಳವಾಯಿ ಪ್ರಾರ್ಥಿಸಿದರು,ದೈಹಿಕ ಶಿಕ್ಷಕ ಸಿ.ವಾಯ್.ಕುರಿ ಸ್ವಾಗತಿಸಿದರು, ಮಾಜಿ ಸೈನಿಕ ಪರಪ್ಪ ಅಥಣಿ ನಿರೂಪಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ