ವಿಜಯನಗರ ಹಂಪಿಯ ಕರ್ನಾಟಕ 50.ರ ಸಂಭ್ರಮಕ್ಕೆ ಚಾಲನೆ ನೀಡಿದ – ಸಿ.ಎಂ ಸಿದ್ದರಾಮಯ್ಯ.

ಹಂಪಿ ನವೆಂಬರ್.3

ಕಲ್ಲು ಕಲ್ಲಿನಲ್ಲಿ ಕನ್ನಡ ಕಲರವ ಮೇಳೈಸಿದ. ಸ್ಮಾರಕಗಳು, ಸಾಲು ಮಂಟಪಗಳು, ದೇಗುಲಗಳನ್ನು ಕೆಂಪು-ಹಳದಿ ಬಣ್ಣದ ಬಟ್ಟೆಗಳಿಂದ ಸಿಂಗರಿಸಲಾಗಿದ್ದು, ಐತಿಹಾಸಿಕ ಹಂಪಿ ಕನ್ನಡದ ಕಂಪು ಸೂಸುತ್ತಿದೆ.”ರಾಜ್ಯಕ್ಕೆ ‘ಕರ್ನಾಟಕ’ವೆಂದು ನಾಮಕರಣ ವಾಗಿ 50 ವರ್ಷ ಪೂರೈಸಿದ ಸ್ಮರಣೆಗೆ ಹಂಪಿಯ ನೆಲದಿಂದ ಆಚರಿಸುತ್ತಿರುವ ‘ಕರ್ನಾಟಕ ಸಂಭ್ರಮ 50’ ಕಾರ್ಯಕ್ರಮಕ್ಕಾಗಿ ಕನ್ನಡದ ವಾತಾವರಣ ಸೃಷ್ಟಿಸಲಾಗಿದೆ. ಹಂಪಿ ಪ್ರವೇಶಿಸುತಿದ್ದಂತೆ ಪ್ರತಿ ಹೆಜ್ಜೆಯಲ್ಲೂ ಕನ್ನಡತನವೇ ಎದ್ದುಕಾಣುತ್ತಿದೆ.ಹಂಪಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿಗೆ, ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ. ಮೆರವಣಿಗೆಯಲ್ಲಿ ಜನಪದ ಕಲಾ ತಂಡಗಳು ಕಲಾವಿದರು ಪಾಲ್ಗೊಂಡಿದ್ದ ಕನ್ನಡ ತಾಯಿಯ ಸನ್ನಿಧಿಯಿಂದ ಜ್ಯೋತಿ ತೆಗೆದುಕೊಂಡು ಎದುರು ಬಸವಣ್ಣ ಮಂಟಪದ ಮುಂಭಾಗದ ದೀಪ ಸ್ತಂಭಕ್ಕೆ ದೀಪ ಬೆಳಗಿಸಿದರು. ಆನಂತರ ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಿದ್ದಾರೆ.ವೇದಿಕೆ ಮೇಲೆ ಆಗಮಿಸಿದ ನಂತರ ಡೊಳ್ಳು ಬಾರಿಸುವುದರ ಮುಖಾಂತರ ವೇದಿಕೆ ಚಾಲನೆ ನೀಡಿದರು ಹಾಗೂ ಮುಖ್ಯಮಂತ್ರಿ ತವರು ಜಾನಪದ ಹಾಡುಗೆ ಹೆಜ್ಜೆ ಹಾಕಿ ನೆರೆದ ಜನರಲ್ಲಿ ಹರ್ಷ ಮೂಡಿಸಿದ್ದರು ಕೋಕಿಲ್ ಸಾಧು ಅವರು ತಂಡದಿಂದ ಗಾಯನ ಏರ್ಪಡಿಸಲಾಯಿತು.ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾತನಾಡಿದರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಅರಸು ಅವರ ಬಳಿಕ ನಮ್ಮ ನಾಯಕ ಸಿದ್ದರಾಮಯ್ಯ ಅವರಿಗೆ ಯೋಗ ಸಿಕ್ಕಿದೆ. ಹಂಪಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.”ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು ಇಡೀ ರಾಜ್ಯಾದ್ಯಂತ ಸುತ್ತಿ ಜನರಲ್ಲಿ ಕನ್ನಡತನವನ್ನು ಜಾಗೃತಿ ಗಳಿಸುವಂತಹ ಕೆಲಸವನ್ನು ಮಾಡುತ್ತೇವೆ ಸ್ವಾತಂತ್ರ್ಯ ಬಂದ ಮೇಲೆ ಕೂಡ ಕನ್ನಡ ಮಾತನಾಡುವಂತಹ ಜನರು ಬೇರೆ ಬೇರೆ ರಾಜ್ಯಗಳಲ್ಲಿ ಹಂಚಿ ಹೋಗಿದ್ದರು ಅವರ್ನೆಲ್ಲ ಹೋಗ್ಬುಡಿಸಬೇಕು ಕನ್ನಡ ಮಾತನಾಡುವಂತಹ ಒಂದು ಆಡಳಿತದ ತೆಕ್ಕೆಗೆ ಬರಬೇಕು ಸಾಹಿತ್ಯ ಕಲೆ ಸಂಸ್ಕೃತಿ ಸಂಪ್ರದಾಯ ಭಾಷೆ ನೆಲ ಜಲ ಕನ್ನಡ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡ್ಯೋಯಬೇಕು ಎಂಬ ಅನೇಕ ಮಹನೀಯರು ಏಕೀಕರಣಕ್ಕೆ ಹೋರಾಟ ಮಾಡಿದರು ಕೆಲವರು ತ್ಯಾಗ ಬಲಿದಾನ ಮಾಡಿದ್ದಾರೆ ಅವರೆಲ್ಲರನ್ನು ಈ ಸಂದರ್ಭದಲ್ಲಿ ಸ್ವರಿಸಬೇಕಾಗುತ್ತದೆ ವಿಶಾಲ ಕರ್ನಾಟಕ ರಾಜ್ಯ 1973 ವರೆಗೂ ಹೇಗಿರಲಿಲ್ಲ ನವೆಂಬರ್ 1 ರಂದು1973ರಲ್ಲಿ ಅ೦ದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದರು.

ಹಂಪಿಯಿಂದಲೇ ಕರ್ನಾಟಕ ನಾಮಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಎಂದು ವಿಶಾಲ ಕರ್ನಾಟಕ ನೋಡಲು ಸಾಧ್ಯವಾಗುತ್ತಿದೆ.ನನ್ನ ಪ್ರಕಾರ ಇಂದಿನ ಸರ್ಕಾರ ಕಳೆದ ವರ್ಷ ಮಾಡಬೇಕಾಗಿತ್ತು ಸುವರ್ಣ ಸಂಭ್ರಮ ಇದ್ಯಲ್ಲಾ ಕಳೆದ ವರ್ಷ ಆಗಬೇಕಾಗಿತ್ತು ನಿನ್ನೆವರೆಗೆ ಇಡೀವರ್ಷ ಕನ್ನಡ ಸಂಭ್ರಮಾಚರಣೆ ಮಾಡಬೇಕಾಗಿತ್ತು ಆದರೆ ಇಂದಿನ ಸರ್ಕಾರ ಮಾಡಲಿಲ್ಲ ನಮ್ಮ ಸರ್ಕಾರ ಬಂದ ನಂತರ ಜುಲೈ ತಿಂಗಳಲ್ಲಿ ಬಜೆಟ್ ಮಂಡನೆ ಮಾಡಿದೆ ಕರ್ನಾಟಕ ಅಂತಾ ಹೇಳಿ 50 ವರ್ಷ ತುಂಬಿದಂತಹ ಸಂದರ್ಭದಲ್ಲಿ ನಾವು ಆ ಸಂಭ್ರಮ ಆಚರಣೆಯನ್ನು ಮಾಡದೆ ಇದ್ದರೆ ಕರ್ತವ್ಯ ಲೋಪ ಆಗುತ್ತದೆ ಎಂದು ಹೇಳಿ ಬಜೆಟ್ ಭಾಷಣದಲ್ಲಿ ಇದನ್ನು ಘೋಷಣೆ ಮಾಡಿದೆ .ಈ ಸಂದರ್ಭದಲ್ಲಿ ಒಂದು ಘೋಷ ವಾಕ್ಯ ಕೂಡ ಮಾಡುತ್ತೇವೆ ಆ ಘೋಷವಾಕ್ಯ ಏನೆಂದರೆ ಹೆಸರಾಯಿತು ಕರ್ನಾಟಕ ಊಸರಾಯಿತು ಕನ್ನಡ ಇಡೀ ವರುಷ ಈ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಮಾಡ್ತಾ ಇದ್ದೇವೆ ರಾಜ್ಯದಲ್ಲಿ ಅನೇಕ ಕಾರ್ಯ ಕ್ರಮಗಳನ್ನು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕಲೆ ಕನ್ನಡ ಭಾಷೆಗೆ ಸಂಬಂಧಪಟ್ಟಂತೆ ಸಂಸ್ಕೃತಿಗೆ ಸಂಬಂಧಪಟ್ಟಂತೆ ಪರಂಪರೆ ಸಂಬಂಧಪಟ್ಟಂತೆ ಇವೆಲ್ಲಾ ಕೂಡ ಮತ್ತೆ ಮತ್ತೆ ಮರುಕಳಿಸುವ ಅಂತಾ ಕೆಲಸವನ್ನು ಮಾಡತಕ್ಕದ್ದು ಹಂಪಿಯಿಂದ ಗದಗಕ್ಕೆ ಜ್ಯೋತಿರಥ ಯಾತ್ರೆ ತೆರಳಿತ್ತು. ಈಗ ಅದೇ ಮಾದರಿಯಲ್ಲಿ 50.ನೇ ವರ್ಷದ ಹಿಂದೆ ನಡೆದ ಕಾರ್ಯಕ್ರಮ ಮರುಕಳಿಸುವಂತೆ ಹಂಪಿಯಿಂದ ನ.2.ರಂದುಜ್ಯೋತಿ ರಥಯಾತ್ರೆ ಕೊಪ್ಪಳದ ಮಾರ್ಗವಾಗಿ ಗದಗಿಗೆ ತೆರಳಲಿದೆ. ಈ ನಿಟ್ಟಿನಲ್ಲಿ ಸಕಲ ತಯಾರಿ ನಡೆದಿದೆ.ಈ ಕನ್ನಡ ಜ್ಯೋತಿರಥಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ. ಈ ನವೆಂಬರ್‌ನಿಂದ ಮುಂದಿನ ವರ್ಷ ನವೆಂಬರ್ ವರೆಗೆ ವರ್ಷದುದ್ದಕ್ಕೂ ಕಾರ್ಯಕ್ರಮ ನಡೆಯಲಿದ್ದು, ವಿಧಾನಸೌಧದಲ್ಲಿ ವಿಶೇಷ ಕಾರ್ಯಕ್ರಮ ಜರುಗಲಿದೆ.1983 ಇಸವಿಯಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದೆ ನಾನು ಆ ಸಂದರ್ಭದಲ್ಲಿ ಎಂಎಲ್ಎ ಆಗಿದ್ದೆ ರಾಮಕೃಷ್ಣ ಹೆಗಡೆ ಅವರು ಕರೆದು ಕನ್ನಡ ಕಾವಲು ರಚನೆ ಮಾಡ್ತಾ ಇದ್ದೇವೆ ಅದರ ಅಧ್ಯಕ್ಷತೆಯನ್ನು ನೀವು ವಹಿಸಬೇಕು ಎಂದು ಹೇಳಿದರು ನಾನು ಹೇಳಿದೆ ನಾನು ಸಾಹಿತ್ಯ ಅಲ್ಲ ಬೇರೆ ಯಾರನ್ನಾದರೂ ಮಾಡಿ ಎಂದೆ ಇಲ್ಲಾ ನಿಮಗೆ ಕನ್ನಡದ ಮೇಲೆ ಅಭಿಮಾನ ಇದೆ ನೀನೇ ಆಗಬೇಕು ಅಂತ ಹೇಳಿದ್ದರು ಈ ರಾಜ್ಯದಲ್ಲಿ ಕನ್ನಡ ಕಾವಲು ಸಮಿತಿ ಮೊದಲನೇ ಅಧ್ಯಕ್ಷ ರಾಜ್ಯದಲ್ಲಿ . ಈ ಹೈದರಾಬಾದ್ ಕರ್ನಾಟಕ ಬಳ್ಳಾರಿ ಬಿಟ್ಟು ತಮಿಳುನಾಡಲ್ಲಿ ಇತ್ತು ಬಳ್ಳಾರಿ ಕೂಡ ಹಿಂದುಳಿದ ಪ್ರದೇಶವಾಗಿತ್ತು ಅದಕ್ಕೋಸ್ಕರ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ 371 ಜೆ ಸಂವಿಧಾನ ತಿದ್ದುಪಡೆ ತಂದು ಈ ಭಾಗದ ಅಭಿವೃದ್ಧಿ ಕಾರ್ಯಕ್ರಮ ಮಾಡ್ಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೇವೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಆಗಬೇಕೆಂದು ಹೇಳಿ ಇವತ್ತು ಅಭಿವೃದ್ಧಿಯನ್ನು ಇದಕ್ಕೆ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಈ ಭಾಗದ ಅನೇಕ ಜನ ಹೋರಾಟ ಮಾಡಿದರು ಈ ಹೋರಾಟದ ಪ್ರತಿ ಫಲವಾಗಿ ಈ ಅಭಿವೃದ್ಧಿ ಕಾಣ್ಲಿಕ್ಕೆ ಸಾಧ್ಯವಾಗಿದೆ 2000.ಖರ್ಚಾಗದೆ ಉಳಿದಿತ್ತು ಕೋಟಿ ರೂಪಾಯಿ ಬಿಡುಗಡೆ ಮಾಡುವ ಹೆಚ್ಚುವರಿ ಆಗಿ 3000.ಕೋಟಿ ರೂಪಾಯಿ ಈ ಭಾಗದ ಅಭಿವೃದ್ಧಿಗೋಸ್ಕರ ಕೊಡುತ್ತೇನೆ ಒಂದೇನ ವರ್ಷ ಇನ್ನು ಹೆಚ್ಚು ಕೊಡತಕ್ಕಂತಹ ಪ್ರಯತ್ನವನ್ನು ಮಾಡುತ್ತೇನೆ ಏಕೆಂದರೆ ಇದು ಬಸವಣ್ಣನ ನಾಡು ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಕರೆಯುತ್ತೇವೆ ನಾವು ಬರಿ ಕಲ್ಯಾಣ ಕರ್ನಾಟಕ ಎಂದು ಹೇಳಿದರೆ ಸಾಲದು ನಿಜವಾದಂತಹ ಕಲ್ಯಾಣ ಆಗಬೇಕು ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಕೆಲಸವನ್ನು ಮಾಡುತ್ತೇವೆ.

ನನಗೆ ಬರುವಾಗ ಪತ್ರಿಕೆ ಅವರು ಪ್ರಶ್ನೆ ಕೇಳಿದರು ನೀವು ಕೂಡ ನಂಬಿಕೆಗಳಲ್ಲಿ. ಮೌಢ್ಯತೆ ಬಗ್ಗೆ ನಂಬಿಕೆ ಇಡುತ್ತೀರಾ ನನಗೆ ಮೂಡ ನಂಬಿಕೆಗಳಲ್ಲಿ ನಂಬಿಕೆ ಇಲ್ಲ ಎಂದು ಹೇಳಿದೆ ಜನರಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ ಜನರು ಆಶೀರ್ವಾದ ಮಾಡಿದ್ದಾರೆ ಕಳೆದ ಚುನಾವಣೆಯಲ್ಲಿ ಐದು ವರ್ಷ ಅಧಿಕಾರ ಮಾಡಿ ಎಂದು ಆಶಿರ್ವಾದ ಮಾಡಿ ಕಳಿಸಿದ್ದಾರೆ .ನಾನು ಹಿಂದೆ ಮುಖ್ಯಮಂತ್ರಿ ಆದಾಗ 168 ಭರವಸೆಗಳನ್ನು ಕೊಟ್ಟಿದ್ದೆವು ಅದರಲ್ಲಿ 165 ಭರವಸೆಗಳನ್ನು ಈಡೇರಿಸಿದ್ದೇವೆ ಈಗಲೂ ಕೂಡ ನಮ್ಮ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ಕೊಟ್ಟಿದ್ದೇವೆ ಈಗಲೂ ಸಹ 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಶಕ್ತಿ ಯೋಜನೆ ಸುಮಾರು 87 ಕೋಟಿ ಏಕೆಂದರೆ ಮಹಿಳೆಯರು ಕೂಡ ದುರ್ಬಲ ವರ್ಗಕ್ಕೆ ಸೇರಿದವರು ಅವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿಯನ್ನು ತುಂಬುವಂತ ಕೆಲಸ ಅವರಿಗೆ ಉಚಿತವಾಗಿ ಸರ್ಕಾರಿ ಬಸ್ ಪ್ರಯಾಣ ಮಾಡಲು ವ್ಯವಸ್ಥೆಯನ್ನು ಕಟ್ಟಿಸಿ ಕೊಟ್ಟಿದ್ದೇವೆ1,10,000000 ಮಹಿಳೆಯರಿಗೆ ತಿಂಗಳಿಗೆ 2000. ರೂಪಾಯಿ ಮನೆ ಒಡತಿಗೆ ಕೊಡುತ್ತಾ ಇದ್ದೇವೆ ಗೃಹಲಕ್ಷ್ಮಿ ಎನ್ನುವ ಕಾರ್ಯಕ್ರಮ ಮಾಡಿದ್ದೇವೆ ಜೊತೆಗೆ ಗೃಹಜೋತಿ ಅಂತ ಕಾರ್ಯಕ್ರಮವನ್ನು ಜಾರಿಗೆ ತರುತ್ತೇವೆ 200. ವಿದ್ಯುತ್ ವರೆಗೂ ಯಾರು ಕರೆಂಟ್ ಕಟ್ಟೋ ಆಗಿಲ್ಲ ಉಚಿತವಾಗಿ ಇದು ಕೊಡತಕ್ಕಂತಹ ಕೆಲಸವನ್ನು ಮಾಡಿದ್ದೇವೆ ಅದರ ಜೊತೆಗೆ 5 ಕೆಜಿ ಅಕ್ಕಿ ಅದರ ಜೊತೆಗೆ ಇನ್ನೂ 5 ಕೆಜಿ ಅಕ್ಕಿ ಕೊಡದೆ ಆಗದೆ ಇದ್ದಾಗ 170, 5 ಗ್ಯಾರಂಟಿಗಳಲ್ಲಿ ಈಗಾಗಲೇ 4 ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಇನ್ನು ಒಂದು ಗ್ಯಾರಂಟಿಯನ್ನು ಸಾರಿಗೆ ಕೊಟ್ಟಿದದೇವೆ ನಾವು ಕನ್ನಡ ನಾಡಿಗೆ ಸಲ್ಲಿಸು ತಕ್ಕಂತ ಪ್ರಾಮಾಣಿಕವಾದಂತ ಕನ್ನಡ ನಾಡಿನ ಜನರಿಗೆ ಈ ಸಂದರ್ಭದಲ್ಲಿ ಸಲ್ಲಿಸ್ತಾ ಇದ್ದೇವೆ ಅಂತಾ ಹೇಳಲಿಕ್ಕೆ ಬಯಸ್ತಾ ಇದ್ದೇನೆ 2,40,0000 ಮನೆಗಳನ್ನು ವಿತರಣೆ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಈ ಕೆಲಸವನ್ನು ಮಾಡುತ್ತೇವೆ ಅಂತಾ ಈ ಸಂದರ್ಭದಲ್ಲಿ ಹೇಳಿಕ್ಕೆ ಬಯಸ್ತಾ ಇದ್ದೇನೆ ಈ ಸಂದರ್ಭದಲ್ಲಿ ಆಗಮಿಸಿದ ಮುಖ್ಯ ಅತಿಥಿಗಳಾದ ಇಲ್ಲಿಯ ಸಚಿವರಾದಂತ ರಾಮಲಿಂಗ ರೆಡ್ಡಿ , ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರು ಜಮೀರ್ ಅಹ್ಮದ್ ಖಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಿವರಾಜ್ ತಂಗಡಗಿ, ನಾಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ಮಾಜಿ ಸಚಿವರಾದಂತ ತುಕಾರಾಂ, ವಿಜಯನಗರ ಜಿಲ್ಲೆ ಶಾಸಕರಾದ ಎಚ್ ಆರ್ ಗವಿಯಪ್ಪ, ಕೂಡ್ಲಿಗಿ ಶಾಸಕರಾದ ಡಾ. ಶ್ರೀನಿವಾಸ್, ಕಂಪ್ಲಿ ಶಾಸಕರಾದ ಗಣೇಶ್, ಸಿರುಗುಪ್ಪ ನಾಗರಾಜ್, ಶಾಸಕಿ ಲತಾ ಮಲ್ಲಿಕಾರ್ಜುನ್, ಶ್ರೀ ಮಂಜುನಾಥ, ಲೋಕಸಭಾ ಸದಸ್ಯರಾದಂತಹ ಉಗ್ರಪ್ಪ , ಮಾಜಿ ಶಾಸಕರು ಕೆಎಂಎಫ್ ಅಧ್ಯಕ್ಷರಾದ ಹೇಮಾ ನಾಯಕ್ , ಮಾಜಿ ಮೇಲ್ಮನೆ ಸದಸ್ಯರಾದ ಸ್ವಾಮಿ, ಇನ್ನು ಹಲವಾರು ಕಾಂಗ್ರೆಸ್ ಮುಖಂಡರು ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button