ನಿಂಬಳಗೆರೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಗ್ರಾಮ ಶಾಖೆ ಉದ್ಘಾಟನೆ.

ನಿಂಬಳಗೆರೆ ನವೆಂಬರ್.4

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಂಘಟನೆಯನ್ನು ಗ್ರಾಮದಲ್ಲಿ ಮಾಡುವುದರೊಂದಿಗೆ ಗ್ರಾಮದಲ್ಲಿ ನಾಮ ಫಲಕವನ್ನು ಕಟ್ಟಡ ಕಾರ್ಮಿಕರ ಮುಖಂಡರಾದ ಸಿ. ವಿರೂಪಾಕ್ಷಪ್ಪ ವಕೀಲರು ಹಾಗೂ ಗುನ್ನಳ್ಳಿ ರಾಘವೇಂದ್ರ ಇವರ ಸಮ್ಮುಖದಲ್ಲಿ ನಾಮಫಲಕ ಉದ್ಘಾಟನೆ ಮಾಡಲಾಗಿಯಿತು. ಈ ಸಂದರ್ಭದಲ್ಲಿ ಸಿ. ವಿರೂಪಾಕ್ಷಪ್ಪ ವಕೀಲರು ಗ್ರಾಮಸ್ಥರಿಗೆ ಕಾರ್ಮಿಕ ಸಂಘಟನೆಯ ಬಗ್ಗೆ ಮಾತನಾಡುತ್ತಾ ಕಾರ್ಮಿಕರ ಹಕ್ಕುಗಳು ಹಾಗೂ ಕಾರ್ಮಿಕರ ಸಂಘಟನೆಯ ಒಗ್ಗಟ್ಟಿನ ಬಲವನ್ನು ಕುರಿತು ಮಾತನಾಡಿದರು.

ಹಾಗೆ ಇನ್ನೊರ್ವ ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಇವರು ನಿಂಬಳಗೆರೆ ಗ್ರಾಮಸ್ಥರಿಗೆ ಸಂಘಟನಯಿಂದ ಕಾರ್ಮಿಕರು ತಮಗೆ ಸಿಗುವಂತಹ ಮೂಲಭೂತ ಸೌಕರ್ಯಗಳನ್ನು ಸಂಘಟನೆ ಶಕ್ತಿಯಿಂದ ಪಡೆದು ಕೊಳ್ಳುವ ಕಟ್ಟಡ ಕಾರ್ಮಿಕರಿಗೆ ಧೈರ್ಯ ತುಂಬುವ ಮಾತುಗಳನ್ನು ಹೇಳುತಾ ನೆರೆದಂತ ಎಲ್ಲಾ ಸಂಘಟನೆಯ ಸದಸ್ಯರುಗಳಿಗೆ ಸಂಘಟನೆಯ ನಿಯಮಗಳನ್ನು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಅಧ್ಯಕ್ಷರು ಕರಿಯಣ್ಣ, ಹುಲೆಪ್ಪ, ಮರಳುಸಿದ್ದಾಚಾರಿ, ಹೆಚ್. ದಾದಾಪೀರ್, ಕೆ. ರಾಜಾಭಕ್ಷಿ. ಬಿ. ರೋಷನ್ ಬೇಗ್, ಮೇಹಬು ಭಾಷ, ಮಂಜುನಾಥ, ನಾಗರಾಜ್ ಇತರರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button