ಕೊಟ್ಟೂರಿಗೆ ತಹಶೀಲ್ದಾರಾಗಿ ಮತ್ತೆ ಅಮರೇಶ್ ಜಿ.ಕೆ ನೇಮಕ.
ಕೊಟ್ಟೂರು ನವೆಂಬರ್.6

ಈ ಹಿಂದೆ ಕೊಟ್ಟೂರು ತಹಶೀಲ್ದಾರರಾಗಿ ಕುಮಾರಸ್ವಾಮಿಯವರು ವರ್ಗಾವಣೆಯಾದ ನಂತರ ಕೊಟ್ಟೂರಿಗೆ ಖಾಯಂ ತಹಶೀಲ್ದಾರರಾಗಿ ಇಲ್ಲದೇ ಕೊಟ್ಟೂರಿನ ಆಡಳಿತದಲ್ಲಿ ವ್ಯತ್ಯಯ ವುಂಟಾಗಿತ್ತು. ನಂತರ ಪ್ರಭಾರಿಯಾಗಿ ಅಮರೇಶ್.ಜಿ.ಕೆ.ರವರು ಪರೀಕ್ಷಾರ್ಥ, ತದನಂತರ ಕಾರ್ತಿಕ್ ರವರು ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ್ದರು. ಸೋಮವಾರ ಕೊಟ್ಟೂರಿಗೆ ಮುಂದಿನ ಆದೇಶದವರೆಗೆ ತಹಶೀಲ್ದಾರರನ್ನಾಗಿ ಅಮರೇಶ್.ಜಿ.ಕೆ. ಅವರನ್ನೇ ನೇಮಿಸಿ ಸರ್ಕಾರದ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಪ್ರಭಾರಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸಿ ಅನುಭವವಿರುವ ಅಮರೇಶ್ ಅವರಿಗೆ ಕೊಟ್ಟೂರಿನ ಸಮಗ್ರ ಮಾಹಿತಿ ಇರುವುದರಿಂದ ಆಡಳಿತ ಯಂತ್ರದಲ್ಲಿ ಚುರುಕು ಮುಟ್ಟಿಸಿ ಜನರ ಭರವಸೆಗಳನ್ನು ಈಡೇರಿಸುವ ಹೊಸ ಮಂದಹಾಸ ಸಾರ್ವಜನಿಕರಲ್ಲಿ ಮೂಡಿದೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು