ಬಿಜೆಪಿ ಪಕ್ಷದ ಆಟ ಮುಗಿದಿದೆ ಕೇಲ್ ಕತಂ ದುಖಾನ್ ಬಂದ್ – ವಿಜಯಾನಂದ ಕಾಶಪ್ಪನವರ.
ಹುನಗುಂದ ಫೆಬ್ರುವರಿ.6

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ದೇವರ ಹೆಸರಿನಲ್ಲಿ ರಾಜಕಾರಣ ಮಾಡಿ ಮತ್ತೇ ನಾವೇ ಗೆಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ.ಬಿಜೆಪಿಗರೇ ನಿಮ್ಮೆಲ್ಲ ಆಟ ನಿಂತಾವು, ಕೇಲ್ ಕತಂ ದುಖಾನ್ ಬಂದ್.ಈ ಬಾರಿ ಕಾಂಗ್ರೆಸ್ ಒಕ್ಕೂಟವೇ ಕೇಂದ್ರದಲ್ಲಿ ಅಧಿಕಾರ ಬರೋದು ಗ್ಯಾರಂಟಿ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ಜಿಲ್ಲಾಡಳಿತ,ಜಿಲ್ಲಾ ನಗರಾಭಿವೃದ್ದಿ ಕೋಶ, ಹುನಗುಂದ ತಾಲೂಕಾಡಳಿತ,ಪುರಸಭೆ ಹಾಗೂ ತಾಲೂಕ ಪಂಚಾಯತ ಸಹಯೋಗದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಅರ್ಹ ಫಲಾನುಭವಿಗಳಿಗೆ ಬಾಂಡ್ ವಿತರಿಸಿ ಮಾತನಾಡಿದ ಅವರು,ಕಳೆದ ೧೦ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದು ಜನಪರ ಯೋಜನೆಗಳಿಲ್ಲ.ಪ್ರತಿ ವರ್ಷ ನಿರುದ್ಯೋಗಿಗಳಿಗೆ ೨ ಕೋಟಿ ಉದ್ಯೋಗದ ಭರವಸೆಯನ್ನು ನೀಡಿ ಒಂದು ಉದ್ಯೋಗ ಕೊಡದೇ ಅದನ್ನು ನಂಬಿದ ನಿರುದ್ಯೋಗಿ ಯುವಕರು ಇಂದು ಬೀದಿಪಾಲ ಮಾಡಿದೆ.ಪದೇ ಪದೇ ಕಾಂಗ್ರೆಸ್ ಗ್ಯಾರಂಟಿಯ ಬಗ್ಗೆ ಅಪಸ್ವರ ಎತ್ತುತ್ತಿದ್ದ ಬಿಜೆಪಿಗರು ಕಾಂಗ್ರೆಸ್ ಪಕ್ಷ ಮಾಡಿದ ಗ್ಯಾರಂಟಿಗಳನ್ನು ಕಾಫಿ ಮಾಡಿ ಇಂದು ನರೇಂದ್ರ ಮೋದಿ ಗ್ಯಾರಂಟಿ ಅಂತಾ ಹೊರಟಿದ್ದಾರೆ,ಬಡವರ ಹಸಿವಿನಲ್ಲೂ ರಾಜಕಾರಣ ಮಾಡಿ ಕರ್ನಾಟಕಕ್ಕೆ ಅಕ್ಕಿ ಕೊಡಲಿಲ್ಲ ಎಂದು ಬಿಜೆಪಿ ಪಕ್ಷದ ವಿರುದ್ದ ವಾಗ್ದಾಳಿ ಮಾಡುತ್ತಾ ಕಾಂಗ್ರೆಸ್ ಪಕ್ಷ ಚುನಾವಣೆಯ ಪೂರ್ವದಲ್ಲಿ ನೀಡಿದ ೫ ಗ್ಯಾರಂಟಿಗಳನ್ನು ಸಮಪರ್ಕವಾಗಿ ಈಡೇರಿಸಿ ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಮೂಲಕ ಕೊಟ್ಟ ಮಾತಿನಂತೆ ನಡೆದು ಕೊಂಡಿದೇವೆ.ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ೩೩,೫೦೭ ಜನ ಮಹಿಳೆಯರು ನೊಂದಣೆ ಮಾಡಿಸಿದ್ದರೂ ಅದರಲ್ಲಿ ೩೧,೮೧೪ ಜನರಿಗೆ ಇಲ್ಲಿವರಗೆ ೧೯.೮,೮೪೦೦ ಹಣ ಬಂದಿದೆ.ಗೃಹ ಜ್ಯೋತಿಯಿಂದ ೨೭,೨೨೬ ಕುಟುಂಬಗಳಿಗೆ ೨೦೦ ಯುನಿಟ್ ಉಚಿತ ವಿದ್ಯುತ್ ಪಡೆದು ಕೊಂಡಿದ್ದಾರೆ.ಅನ್ನ ಭಾಗ್ಯ ಯೋಜನೆಯಡಿಯಲ್ಲಿ ೩೧,೨೯೧ ಕುಟುಂಬಗಳು ೫ ಕೆಜಿ ಅಕ್ಕಿ ಮತ್ತು ಪ್ರತಿಯೊಬ್ಬರಿಗೂ ೧೭೦ ರೂ ಬರುತ್ತಿದೆ.ಶಕ್ತಿ ಯೋಜನೆಯಲ್ಲಿ ಹುನಗುಂದ ತಾಲೂಕಿನಿಂದ ೪೧,೨೮,೫೧೭ ಜನ ಮಹಿಳೆಯರು ಉಚಿತ ಪ್ರಯಾಣವನ್ನು ಬೆಳೆಸಿ ಲಾಭವನ್ನು ಪಡೆದು ಕೊಂಡಿದ್ದಾರೆ.ಇನ್ನು ಯುವ ನಿಧಿಯಲ್ಲಿ ೪೯೭ ಜನ ಯುವಕರು ನೊಂದಣೆಯಾಗಿದೆ. ನಮ್ಮ ಸರ್ಕಾರ ರಾಜ್ಯ,ಜಿಲ್ಲೆ ಮತ್ತು ತಾಲೂಕ ಮಟ್ಟದಲ್ಲಿ ಗ್ಯಾರಂಟಿಗಳ ಸಮಪರ್ಕ ಅನುಷ್ಠಾನಕ್ಕೆ ಅನುಷ್ಠಾನ ಸಮಿತಿಯನ್ನು ರಚಿಸಿ ಮನೆ ಮನೆಗಳಿಗೆ ತೆರಳಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಕಾರ್ಯವನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದರು.ಭೂ ನ್ಯಾಯ ಮಂಡಳಿಯ ಸದಸ್ಯ ಮಹಾಂತೇಶ ಅವಾರಿ,ನಿವೃತ್ತ ಶಿಕ್ಷಕ ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿದರು.ಗ್ಯಾರಂಟಿಗಳನ್ನು ಪಡೆದು ಕೊಂಡ ಮಹಿಳಾ ಫಲಾನುಭವಿಗಳು ಮಾತನಾಡಿ ಕಾಂಗ್ರೆಸ್ ಗ್ಯಾರಂಟಿಗಳು ತುಂಬಾ ಅನುಕೂಲವಾಗಿವೆ,ವಯೋವೃದ್ದರಿಗೆ ಬಹಳಷ್ಟು ಸಹಾಯವಾಗಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.ತಹಶೀಲ್ದಾರ ನಿಂಗಪ್ಪ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ,ತಾಪಂ ಇಒ ಮುರಳೀಧರ ದೇಶಪಾಂಡೆ,ಕೆಇಬಿ ಪ್ರಕಾಶ ಪೊಚಗುಂಡಿ,ಸಿಡಿಪಿಓ ಅನ್ನಪೂರ್ಣ ಕುಬಕಡ್ಡಿ,ರವಿ ಹುಚನೂರ,ಮಹಾಂತಪ್ಪ ಪಲ್ಲೇದ,ಶಿವಾನಂದ ಕಂಠಿ,ಮಹಾಂತೇಶ ತಾರಿವಾಳ,ಪುರಸಭೆ ಸದಸ್ಯರಾದ ಬಸವರಾಜ ಗೊಣ್ಣಾಗರ,ಮೈನು ಧನ್ನೂರ,ಮಲ್ಲಣ್ಣ ಅಂಟರತಾನಿ,ಶರಣು ಬೆಲ್ಲದ, ಭಾಗ್ಯಶ್ರೀ ರೇವಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಶಿಕ್ಷಕ ಶ್ರೀಕಾಂತ ಆವೀನ ಸ್ವಾಗತಿಸಿ ಶಿಕ್ಷಕಿ ಮಂಜುಶ್ರೀ ಮಣಿ ನಿರೂಪಿಸಿ,ವಂದಿಸಿದರು.
****ಬಾಕ್ಸ್ ಸುದ್ದಿ******ಕಾಂಗ್ರೆಸ್ನ ೫ ಗ್ಯಾರಂಟಿಗಳು ಸಮಪರ್ಕವಾಗಿ ಅನುಷ್ಠಾನವಾಗುತ್ತಿದ್ದಂತೆ ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕ್ಷೇತ್ರವನ್ನೇ ಬಿಟ್ಟಿದ್ದಾರೆ.ಯಾಕಂದರೇ ನಮ್ಮ ಸರ್ಕಾರ ಜನರಿಗೆ ಕೊಟ್ಟ ಮಾತನ್ನು ಉಳಿಸಿ ಕೊಳ್ಳವ ಮೂಲಕ ಜನರಿಗೆ ಅನುಕೂಲ ಮಾಡಿದ್ದರಿಂದ ಅವರ ಹತ್ತಿರಕ್ಕೆ ಜನರು ಹೋಗುತ್ತಿಲ್ಲ,ನಮಸ್ಕಾರ ಮಾಡೋರೇ ಇಲ್ಲದ್ದಂತಾಗಿದ್ದರಿಂದ ಊರನ್ನೇ ಬಿಟ್ಟಿದ್ದಾರೆ.ವಿಜಯಾನಂದ ಕಾಶಪ್ಪನವರ ಶಾಸಕರು.ಹುನಗುಂದ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ