ಕನ್ನಡ ನಾಡು ನುಡಿಯನ್ನು. ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ – ಪ್ರೊ. ಎಸ್.ಎಸ್.ಪಾಟೀಲ.

ಹುನಗುಂದ ನವೆಂಬರ್.6

5೦ನೇ ವರ್ಷಕ್ಕೆ ಕಾಲಿಟ್ಟ ಕರ್ನಾಟಕ ನಾಮಕರಣದ ಈ ದಿನ ಅನ್ಯ ಭಾಷಾ ಪ್ರಭಾವದಿಂದ ಸಂಕುಚಿತ ವಾಗುತ್ತಿರುವ ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆ ತೀವ್ರ ಗೊಳ್ಳಬೇಕು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಇನ್ನೂ ಸಂಪೂರ್ಣವಾಗಿ ಒಂದಾಗಿಲ್ಲ, ಕೇರಳ, ಆಂಧ್ರ, ಮಹಾರಾಷ್ಟದ ಅಧೀನದಲ್ಲಿರುವ ಇನ್ನೂ ಹಲವಾರು ಪ್ರದೇಶಗಳು ಕನ್ನಡ ನಾಡನ್ನು ಸೇರಿ ಕೊಂಡಾಗ ಕನ್ನಡಿಗರ ಹೋರಾಟಕ್ಕೆ ಸಂಪೂರ್ಣ ನ್ಯಾಯ ಸಿಕ್ಕಂತಾಗುವುದು, ಕನ್ನಡ ನಾಡು ನುಡಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ನಗರದ ವಿ.ಎಂ.ಎಸ್.ಆರ್.ವಸ್ತೃದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಳಕಲ್ ನಗರದ ಎಸ್.ವಿ.ಎಂ.ಮಹಿಳಾ ಪದವಿ ಮಹಾವಿದ್ಯಾಲಯದ ಇತಿಹಾಸ ವಿಷಯದ ಸಹಾಯಕ ಪ್ರಾಧ್ಯಾಪಕರಾದ ಎಸ್.ಎಸ್.ಪಾಟೀಲ ಅವರು ಹೇಳಿದರು. ಆಲೂರು ವೆಂಕಟರಾಯರು, ಡೆಪ್ಯೂಟಿ ಚನ್ನಬಸಪ್ಪ, ಹುಯಿಲಗೋಳ ನಾರಾಯಣರಾಯರು, ಅನ್ನದಾನಪ್ಪ ದೊಡ್ಡಮೇಟಿ, ಮುಂತಾದ ಕವಿಗಳು, ಲೇಖಕರು, ಶಿಕ್ಷಣ ತಜ್ಞರ ಶ್ರಮದ ಫಲವಾಗಿ ಮೈಸೂರು ಎಂಬ ಒಂದು ಪ್ರಾಂತೀಯ ಹೆಸರಿನ ಬದಲಾಗಿ ಕರ್ನಾಟಕ ಎಂದು ನಾಮಕರಣ ವಾಗಬೇಕೆಂಬ ಅವರ ಕನಸು ನನಸಾಯಿತು. ಆ ದಿನವನ್ನು ಸ್ಮರಿಸುವುದು ನಮ್ಮೆಲ್ಲರ ಹೊಣೆ ಯಾಗಿರಬೇಕು ಅದರೊಂದಿಗೆ ಕನ್ನಡ ಭಾಷೆ, ಸಾಹಿತ್ಯವನ್ನು ಮತ್ತಷ್ಟು ವೃದ್ಧಿ ಗೊಳಿಸಬೇಕು ಎಂಬುದು ನಮ್ಮೆಲ್ಲರ ಪ್ರಯತ್ನ ವಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಶಶಿಕಲಾ ಕೆ. ಮಠ ಅವರು ಮಾತನಾಡುತ್ತಾ ಕನ್ನಡ ಶಾಸ್ತ್ರೀಯ ಭಾಷೆಯಾಗಿದೆ ಆದರೆ ಅದಕ್ಕೆ ತಕ್ಕಂತೆ ಕನ್ನಡ ಭಾಷೆ ಇನ್ನೂ ಸಮಗ್ರವಾಗಿ ಬೆಳೆಯಬೇಕು, ಹಿರಿಯರು ಕಟ್ಟಿಕೊಟ್ಟ ಕನ್ನಡ ಭಾಷೆಯ ಸಾಹಿತ್ಯಾಧ್ಯಯನ ನಿರಂತರವಾಗಿ ಸಾಗಬೇಕು, ಕನ್ನಡ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂದಿನ ಸಾಹಿತಿಗಳು, ಕನ್ನಡಾ ಭಿಮಾನಿಗಳಾದ ಪ್ರತಿಯೊಬ್ಬರೂ ಅದಕ್ಕಾಗಿ ಶ್ರಮಿಸುವುದು ಅತ್ಯವಶ್ಯವೆಂದು ಹೇಳಿದರು. ಕಾರ್ಯಕ್ರಮವು ರೋವರ್ ಬಸವರಾಜ ಹಿರೇಮಠ ವಚನಪ್ರಾರ್ಥನೆ ಮತ್ತು ರೇಂರ‍್ಸ್ಗಳ ಸ್ಕೌಟ್ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಮಾರಂಭದಲ್ಲಿ ಹುನಗುಂದದ ಹಿರಿಯ ನಾಯಕರಾದ ಶಿವಪುತ್ರಪ್ಪ ತಾರಿವಾಳ ಮತ್ತು ಅನಂತ ಬಬಲೇಶ್ವರ ಉಪಸ್ಥಿತರಿದ್ದರು, ರೇಂಜರ ಭಾಗ್ಯಶ್ರೀ ಗೋಲಪ್ಪನವರ ಅತಿಥಿಗಳನ್ನು ಪರಿಚಯಿಸಿ, ಕನ್ನಡ ನಾಡು ನುಡಿಯನ್ನು ಪ್ರಸ್ತುತ ಪಡಿಸುವ ಸ್ವರಚಿತ ಕವನವನ್ನು ವಾಚಿಸಿದರು, ವೇದಿಕೆಯ ಮೇಲೆ ಐಕ್ಯೂಎಸಿ ಸಂಚಾಲಕರಾದ ಡಾ.ಎಸ್.ಆರ್.ಗೋಲಗೊಂಡ, ಪದವಿ ಪೂರ್ವ ವಿಭಾಗದ ರೇಂರ‍್ಸ್ ನಾಯಕಿಯಾದ ಶ್ರೀಮತಿ.ಎನ್.ಎಂ.ಕಡಬಗೇರಿ, ಪದವಿ ವಿಭಾಗದ ರೇಂರ‍್ಸ್ ನಾಯಕಿ ಎಸ್.ಬಿ.ಅಮಲಿಕೊಪ್ಪ, ಡಾ.ಪರಶುರಾಮ ಹಾದಿಮನಿ ಉಪಸ್ಥಿತರಿದ್ದರು, ರೋರ‍್ಸ್ ನಾಯಕ ಡಾ.ಎಸ್.ಆರ್.ನಾಗಣ್ಣವರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪದವಿ ಪೂರ್ವ ವಿಭಾಗದ ರೋರ‍್ಸ್ ನಾಯಕ ಎಫ್.ಎಂ.ರಾಮವಾಡಗಿ ವಂದಿಸಿದರು. ರೇಂಜರ್ ಸಹನಾ ನಿರೂಪಿಸಿದರು. ನಂತರ ಪದವಿ ಹಾಗೂ ಪದವಿ ಪೂರ್ವ ವಿಭಾಗದ ರೋರ‍್ಸ್ ಮತ್ತು ರೇಂರ‍್ಸ್ ಗಳಿಂದ ನಾಡು ನುಡಿಯನ್ನು ಪ್ರತಿಬಿಂಬಿಸುವ ಗೀತೆಗಳಿಗೆ ನೃತ್ಯ ಮಾಡಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button